ಮಿತ್ರ + ರಕ್ಷಕ = “ಮಿತ್ರ ರಕ್ಷಕ’
Team Udayavani, Sep 29, 2017, 3:00 PM IST
“ಆಪ್ತಮಿತ್ರ’, “ಆಪ್ತರಕ್ಷಕ’ ಚಿತ್ರಗಳು ಬಂದಿರೋದು, ದೊಡ್ಡ ಹಿಟ್ ಆಗಿರೋದು ನಿಮಗೆ ಗೊತ್ತೇ ಇದೆ. ಆ ನಂತರ ಅದೇ ಟೈಟಲ್ಗಳನ್ನು ಹೋಲುವ ಕೆಲವು ಸಿನಿಮಾಗಳು ಬಂದುವು. ಈಗ ಆ ಸಾಲಿಗೆ ಹೊಸ ಸೇಪೇಡೆ “ಮಿತ್ರ ರಕ್ಷಕ-3′. ಹೌದು, ಹೀಗೊಂದು ಚಿತ್ರ ಸದ್ದಿಲ್ಲದೇ ಆರಂಭವಾಗಿ ಚಿತ್ರೀಕರಣ ಕೂಡಾ ಮುಗಿಸಿಬಿಟ್ಟಿದೆ.
“ಮಿತ್ರ ರಕ್ಷಕ-3′ ಎಂಬ ಟೈಟಲ್ ಕೇಳಿದೊಡನೆ, ಇದು ಯಾವುದಾದರೂ ಸಿನಿಮಾದ ಮುಂದುವರಿದ ಭಾಗನಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಟೈಟಲ್ನಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಚಿತ್ರತಂಡ ಈ ಟೈಟಲ್ ಇಟ್ಟಿದೆ. ಅಂದಹಾಗೆ, ಈ ಚಿತ್ರ ಕೂಡಾ ಹಾರರ್ ಜಾನರ್ಗೆ ಸೇರುವ ಚಿತ್ರ.
ಓಂ ಪ್ರಕಾಶ್ ನಾಯ್ಕ ಈ ಚಿತ್ರದ ನಿರ್ದೇಶಕರು. ಚಿತ್ರತಂಡವೊಂದು “ಆಪ್ತಮಿತ್ರ-3′ ಎಂಬ ಚಿತ್ರದ ಶೂಟಿಂಗೆಂದು ಮಡಿಕೇರಿಯ ಕಾಡಿನ ಮನೆಯೊಂದಕ್ಕೆ ಹೋದಾಗ ತಂಡದಲ್ಲಿದ್ದವರೆಲ್ಲಾ ಒಬ್ಬೊಬ್ಬರೇ ಕೊಲೆಯಾಗುತ್ತಾ ಹೋಗುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.
ಹಾಗಾಗಿ, ಇಲ್ಲಿ ಹೆದರಿಸುವ, ಬೆದರಿಸುವ ಅಂಶಗಳಿಗೇನು ಕೊರತೆಯಿಲ್ಲ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಎರಡು ಹಾಡುಗಳನ್ನು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಿಸುವ ಉದ್ದೇಶ ಚಿತ್ರತಂಡಕ್ಕಿದೆ.
ಮಾದೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಿರಣ್ ಛಾಯಾಗ್ರಹಣ, ದೇವು, ಮಧುರಾ ಸಂಗೀತಾ, ಕುಮಾರ್ಗೌಡ ಸಂಕಲನ, ಸಂತೋಷ್ ನೃತ್ಯ ನಿರ್ದೇಶನವಿದೆ. ಶ್ರೀಧರ್, ಸ್ವಪ್ನ, ಸ್ಮೈಲ್ ಶಿವು, ಕಾವ್ಯ, ಓಂಪ್ರಕಾಶ್ ನಾಯ್ಕ, ಅವಿನಾಶ್ ಭಾರದ್ವಾಜ್, ಶಂಕರ್ ಬಾಬು, ರುದ್ರೇಶ್, ಸ್ಮಿತಾ, ಅನಿಲ್, ನವೀನ್, ನೆಲಮಂಗಲ ಜಗದೀಶ್ ಬಾಬು, ಪ್ರಸನ್ನ ಮುಂತಾದವರ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…