ಭಟ್ಟರ ಹೊಸ ಚಿತ್ರ ಪಂಚತಂತ್ರ
Team Udayavani, Jan 9, 2018, 11:09 AM IST
ನಿರ್ದೇಶಕ ಯೋಗರಾಜ್ಭಟ್ ಹೊಸಬರ ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಆಗ ಆ ಚಿತ್ರಕ್ಕೆ ಹೀರೋ ಆಗಲಿ, ನಿರ್ಮಾಪಕರಾಗಲಿ ತಂತ್ರಜ್ಞರಾಗಲಿ ಪಕ್ಕಾ ಆಗಿರಲಿಲ್ಲ. ಮೊದಲಿಗೆ ಯೋಗರಾಜ್ ಭಟ್ ಸಿನಿಮಾಗೆ ವಿಹಾನ್ ಗೌಡ ಹೀರೋ ಅಂತಾಯಿತು. ನಂತರ ನಾಯಕಿಯರ ಆಯ್ಕೆಯಾಯಿತು. ಈಗ ಚಿತ್ರದ ಹೆಸರು ಸಹ ಅಂತಿಮಗೊಂಡಿದೆ. ಭಟ್ಟರು ತಮ್ಮ ಹೊಸ ಚಿತ್ರಕ್ಕೆ “ಪಂಚತಂತ್ರ’ ಎಂಬ ಹೆಸರನ್ನಿಟ್ಟಿದ್ದಾರೆ.
ಹೌದು, ಯೋಗರಾಜ್ ಭಟ್ ಅವರ ಹೊಸ ಚಿತ್ರಕ್ಕೆ “ಪಂಚತಂತ್ರ’ ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರಕ್ಕೆ ವಿಹಾನ್ ಗೌಡ ಹೀರೋ ಆಗಿದ್ದಾರೆ. ಈ ಚಿತ್ರದ ನಾಯಕ ವಿಹಾನ್ಗೌಡ ಈ ಹಿಂದೆ “ಕಾಲ್ಕೇಜಿ ಪ್ರೀತಿ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ವಿಹಾನ್ಗೆ ನಾಯಕಿಯಾಗಿ ಸೋನಾಲ್ ಮತ್ತು ಅಕ್ಷರಾ ಗೌಡ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಮತ್ತು ಹೊಸ ಪ್ರತಿಭೆಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ.
ಇದೊಂದು ಯೂಥ್ಫುಲ್ ಕಥೆಯಾಗಿದ್ದು, ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆ ಇದೆ. ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳು ಚಿತ್ರದ ಮತ್ತೂಂದು ಹೈಲೈಟ್. ಮುಖ್ಯವಾಗಿ ಯುವಪೀಳಿಗೆಯನ್ನು ಮನಸ್ಸಲಿಟ್ಟುಕೊಂಡೇ ಭಟ್ಟರು ಕಥೆ ಹೆಣೆದಿದ್ದಾರೆ. ಈಗಿನ ವಾಸ್ತವತೆಯ ಸಾರ ಚಿತ್ರದುದ್ದಕ್ಕೂ ಕಾಣಸಿಗಲಿದೆ. ಕೇವಲ ಯೂತ್ಸ್ಗಷ್ಟೇ ಅಲ್ಲ, ಫ್ಯಾಮಿಲಿ ಆಡಿಯನ್ಸ್ ಕೂಡ ನೋಡುವಂತಹ ಹೊಸಬಗೆಯ ಕಥೆ ಹೆಣೆದು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಭಟ್ಟರು. ಇದು ಭಟ್ಟರ 12 ನೇ ಚಿತ್ರ ಎಂಬುದು ಇನ್ನೊಂದು ವಿಶೇಷ.
ಈ ಚಿತ್ರ ಯೋಗರಾಜ್ ಮೂವೀಸ್ ಬ್ಯಾನರ್ನಲ್ಲಿ ತಯಾರಾಗುತ್ತಿದೆ. ಎಂದಿನಂತೆ ಯೋಗರಾಜ್ ಭಟ್ ಅವರ ತಂತ್ರಜ್ಞರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶಶಿಧರ್ ಅಡಪ ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಸುರೇಶ್ ಆರ್ಮುಗನ್ ಸಂಕಲನವಿದೆ. ಜನವರಿ 24ರಿಂದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ರಾಮನಗರ ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Sandalwood: ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್ ಮ್ಯಾರೀಡ್” ಟೈಟಲ್
ಹೊಸ ಚಿತ್ರಕ್ಕೆ ಮಹೇಶ್ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ
MUST WATCH
ಹೊಸ ಸೇರ್ಪಡೆ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ