Rakshith Shetty; ತಂಡ ಕಟ್ಟಿ ಗೆಲುವು ಸಾಧಿಸಿ: ಹೊಸಬರಿಗೆ ರಕ್ಷಿತ್ ಶೆಟ್ಟಿ ಕಿವಿಮಾತು
Team Udayavani, Aug 7, 2023, 11:51 AM IST
ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ನಟ ರಕ್ಷಿತ್ ಶೆಟ್ಟಿ ಟಿಪ್ಸ್ ನೀಡಿದ್ದಾರೆ. ಅದು ಒಂದೊಂದು ತಂಡ ಕಟ್ಟಿ, ಒಳ್ಳೆಯ ಸಿನಿಮಾ ಮಾಡಿ ಬೆಳೆಯಿರಿ ಎಂಬುದು.
“ಟೋಬಿ’ ಚಿತ್ರದ ಟ್ರೇಲರ್ ರಿಲೀಸ್ ವೇದಿಕೆ ಮಾತನಾಡಿದ ರಕ್ಷಿತ್, “ಚಿತ್ರರಂಗಕ್ಕೆ ಬರುವವರು ತಮ್ಮದೇ ಆದ ಸಮಾನ ಮನಸ್ಕರ ಒಂದು ತಂಡ ಮಾಡಿಕೊಂಡು ಆ ಮೂಲಕ ಸಿನಿಮಾ ಮಾಡಿ ಗೆಲ್ಲಬೇಕು. “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೂಡಾ ಒಂದು ತಂಡ ಮಾಡಿಕೊಂಡು ಯಾರ ಸಹಾಯವಿಲ್ಲದೇ ಸಿನಿಮಾ ಮಾಡಿ ಗೆದ್ದಿದ್ದಾರೆ. ನಾನು, ರಿಷಭ್ ಒಂದು ತಂಡವಾಗಿ ಸಿನಿಮಾ ಮಾಡಿದೆವು. ರಾಜ್ ಬಿ ಶೆಟ್ಟಿ ಕೂಡಾ ಅವರದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ಮಾಡಿ ಗೆಲ್ಲುತ್ತಿದ್ದಾರೆ. ಹೊಸ ಹೊಸ ತಂಡಗಳು ಬಂದಾಗ ಹೊಸ ಬಗೆಯ ಕಥೆಗಳು ಹುಟ್ಟುತ್ತವೆ. ಇನ್ನು, ಉತ್ತರ ಕರ್ನಾಟಕದ ಸಂಸ್ಕೃತಿ ತುಂಬಾ ಶ್ರೀಮಂತವಾಗಿದೆ. ಅಲ್ಲಿನ ಕಥೆಗಳನ್ನು ಅಲ್ಲಿನವರು ಹೇಳಿದರೇನೇ ಚೆಂದ. ಹಾಗಾಗಿ, ಅಲ್ಲಿನವರು ಒಂದು ತಂಡವಾಗಿ ಬಂದು ಸಿನಿಮಾ ಮಾಡಬೇಕು. ನನ್ನ ಪ್ರಕಾರ ಚಿತ್ರರಂಗದಲ್ಲಿ ಕನಿಷ್ಠ 15 ಹೀರೋಗಳು, 15 ಗಟ್ಟಿ ನಿರ್ದೇಶಕರು ಬರಬೇಕು. ಆಗ ಚಿತ್ರರಂಗ ಹೆಚ್ಚು ಕ್ರಿಯಾಶೀಲವಾಗಿರುತ್ತದೆ’ ಎನ್ನುವುದು ರಕ್ಷಿತ್ ಶೆಟ್ಟಿ ಮಾತು.
ಅಂದಹಾಗೆ, ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ-ಸೈಡ್-ಎ’ ಚಿತ್ರ ಸೆ.01ಕ್ಕೆ ತೆರೆಕಾಣುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ