ಎಲ್ಲರಿಗೂ ಒಳಿತು ಬಯಸುವ ನಿಮಗೆ ಒಳ್ಳೆಯದಾಗಲಿ ಸರ್..ಜೈ ಹೋ !ದಾಸನಿಗೆ ಯೋಗರಾಜ್ ಭಟ್ರ ಹಾರೈಕೆ
Team Udayavani, Feb 17, 2021, 8:30 PM IST
ಬೆಂಗಳೂರು: ಸ್ಯಾಂಡಲ್ ವುಡ್ ಸಾರಥಿ ನಟ ದರ್ಶನ್ ಅವರು ನಿನ್ನೆ (ಫೆ.16 ) 44 ನೇ ವಸಂತಕ್ಕೆ ಕಾಲಿಟ್ಟರು. ಈ ಸಂಭ್ರಮಕ್ಕೆ ಅವರ ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭ ಕೋರಿದರು. ಈ ಎಲ್ಲ ಶುಭಾಶಯಗಳ ನಡುವೆ ಖ್ಯಾತ ಚಿತ್ರನಿರ್ದೇಶಕ ಯೋಗರಾಜ ಭಟ್ ಅವರ ವಿಶ್ ಎಲ್ಲರ ಗಮನ ಸೆಳೆಯುತ್ತಿದೆ.
ಮುಂಗಾರುಮಳೆ ಖ್ಯಾತಿಯ ಪ್ರೇಮಕವಿ ಯೋಗರಾಜ್ ಭಟ್ ಅವರು ಚಂದನವನದ ದಾಸನಿಗೆ ತಮ್ಮದೆಯಾದ ಶೈಲಿಯಲ್ಲಿ ಪುಟ್ಟ ಪತ್ರದೊಂದಿಗೆ ಜನ್ಮದಿನದ ಶುಭ ಕೋರಿದ್ದಾರೆ. ‘ನಮಸ್ತೆ ಶ್ರೀಯುತ ದರ್ಶನ್ ಸಾರ್ ಗೆ ಹುಟ್ಟು ಹಬ್ಬದ ಕೋಟಿ ಶುಭಾಶಯಗಳು….ಜನತೆಗೆ, ಸ್ನೇಹಿತರಿಗೆ..ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆಲ್ಲ ಸದಾ ಒಳಿತು ಬಯಸುವ ನಿಮಗೆ ಯಾವತ್ತೂ ಒಳ್ಳೆಯದಾಗಲಿ ಸರ್…ಯಾವತ್ತಿಗೂ..’’ಜೈ ಹೋ’’ ಎಂದು ಬರೆದು ತಮ್ಮ ಫೇಸ್ ಬುಕ್ ಮೂಲಕ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಇನ್ನು ಯೋಗರಾಜ್ ಭಟ್ ಅವರ ಶುಭಾಶಯಕ್ಕೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಟ್ಟರು ಬಳಿಸಿರುವ ಪದಗಳು ದಾಸನ ಫ್ಯಾನ್ಸ್ ಮನಸ್ಸು ಕದ್ದಿವೆ. ಪತ್ರದ ಕೊನೆಯಲ್ಲಿ ಬಳಿಸಿರುವ ‘ಜೈ ಹೋ’ ಪದಕ್ಕೆ ದರ್ಶನ್ ಹುಡುಗರು ಜೈಕಾರ ಹಾಕುತ್ತಿದ್ದಾರೆ. ಸದ್ಯ ಯೋಗರಾಜ್ ಭಟ್ಟರ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.