ಮಾಜಿ ಸಚಿವ ಟಿ.ಬಿ.ಜಯಚಂದ್ರ ಈಗ ಜಡ್ಜ್!

ಜಿಗ್ರಿದೋಸ್ತ್ ಚಿತ್ರದಲ್ಲಿ ಮೊದಲ ಸಲ ನಟನೆ

Team Udayavani, Nov 12, 2019, 6:03 AM IST

Jigari-Dost

ಕನ್ನಡ ಚಿತ್ರಗಳಲ್ಲಿ ಈಗಾಗಲೇ ಅನೇಕ ರಾಜಕಾರಣಿಗಳು ಬಣ್ಣ ಹಚ್ಚಿರುವ ಉದಾಹರಣೆಗಳಿವೆ. ಹೀರೋಗಳಾಗಿ ನಟಿಸಿದ್ದವರು ರಾಜಕಾರಣಿಗಳೂ ಆಗಿದ್ದಾರೆ. ರಾಜಕಾರಣಿಗಳಾಗಿ ಗುರುತಿಸಿಕೊಂಡವರು ಕ್ಯಾಮೆರಾ ಮುಂದೆ ನಟಿಸಿದ್ದಾರೆ. ಅಂತಹವರ ಸಾಲಿಗೆ ಈಗ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಸೇರಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ನಟಿಸುವ ಮೂಲಕ ತಮ್ಮ ನಾಲ್ಕು ದಶಕಗಳ ಆಸೆ ಈಡೇರಿಸಿಕೊಂಡಿದ್ದಾರೆ.

ಮೋಹನ್‌ ನಿರ್ದೇಶನದ, ಗಂಗಾಧರ್‌ ನಿರ್ಮಾಣದ “ಜಿಗ್ರಿದೋಸ್ತ್’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇದೇ ಮೊದಲ ಸಲ ಬಣ್ಣ ಹಚ್ಚಿರುವ ಟಿ.ಬಿ.ಜಯಂದ್ರ ಅವರು, ಚಿತ್ರದಲ್ಲಿ ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರ ಕುರಿತು ಸ್ವತಃ ಟಿ.ಬಿ.ಜಯಚಂದ್ರ ಹೇಳುವುದಿಷ್ಟು. “ನಾನು ಮೊದಲ ಸಲ ನಟಿಸಿದ್ದೇನೆ. ಅದಕ್ಕೆ ಕಾರಣ, “ಜಿಗ್ರಿದೋಸ್ತ್’ ಚಿತ್ರದ ನಿರ್ಮಾಪಕರು. ಅವರು ನನ್ನ ಸಂಬಂಧಿ. ಒಮ್ಮೆ ಬಂದು, ನಿಮಗೊಂದು ಪಾತ್ರವಿದೆ.

ಅದನ್ನು ನೀವೇ ಮಾಡಬೇಕು. ಕೇವಲ ಒಂದು ಗಂಟೆ ಬಂದು ಹೋಗಿ ಅಂತ ಹೇಳಿದರು. ಹಾಗಾಗಿ, ನಾನು ಒಪ್ಪಿ ಮಾಡಿದ್ದೇನೆ. ನನಗೂ ಸಿನಿಮಾ ಮೇಲೆ ಪ್ರೀತಿ ಜಾಸ್ತಿ. ನಾನು ಚಿಕ್ಕಂದಿನಿಂದಲೂ ಡಾ.ರಾಜಕುಮಾರ್‌ ಅವರ ಅಭಿಮಾನಿ. ಅವರ ಅನೇಕ ಚಿತ್ರಗಳನ್ನು ಫ‌ಸ್ಟ್‌ ಶೋ ಮತ್ತು ಸೆಕೆಂಡ್‌ ಶೋ ಕಂಟಿನ್ಯೂ ಆಗಿ ನೋಡಿದ ವ್ಯಕ್ತಿ ನಾನು. 27 ವರ್ಷ ವಯಸ್ಸಿನಲ್ಲಿರುವಾಗಲೇ ಶಾಸಕನಾದೆ. ಆಗ ದೇವರಾಜ್‌ ಅರಸ್‌ ಅವರು ಫಿಲ್ಮ್ ಬೋರ್ಡ್‌ನಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟರು.

ಆ ಸಂದರ್ಭದಲ್ಲಿ ಸಿನಿಮಾ ಮಾಡುವ ಆಸೆ ಹೆಚ್ಚಾಗಿತ್ತು. ಹಣ ಹಾಕಿ ಸಿನಿಮಾ ಶುರುಮಾಡಿದ್ದೂ ಆಯ್ತು. ಆದರೆ, ಸೆಟ್ಟೇರಲಿಲ್ಲ. ಸಿನಿಮಾ ಮಾಡುವವರಿಗೆ ಸಿನಿಮಾ ಸಹವಾಸ ಮಾಡಬೇಡಿ, ಹಣ ಹಾಕಬೇಡಿ, ಹಾಳಾಗಿ ಹೋಗ್ತೀರ ಅನ್ನುತ್ತಿದ್ದೆ. ಆದರೆ, ಸಿನಿಮಾ ಮೇಲಿನ ಪ್ರೀತಿ ಹಾಗೆಯೇ ಇತ್ತು. ತುಮಕೂರಿನಲ್ಲಿ ಎರಡು ಬಾರಿ ದೊಡ್ಡ ಕಾರ್ಯಕ್ರಮ ನಡೆಸಿ, ಡಾ.ರಾಜಕುಮಾರ್‌ ಅವರನ್ನು ಕರೆಸಿದ್ದು ಮರೆಯದ ಅನುಭವ.

ಭಾರತದ ಯಾವುದೇ ಭಾಷೆಯಲ್ಲೂ ಡಾ.ರಾಜಕುಮಾರ್‌ ಅವರಂತಹ ನಟ ಸಿಗುವುದು ಕಷ್ಟ’ ಎಂದು ಹೇಳಿಕೊಂಡ ಅವರು, “ಜಿಗ್ರಿದೋಸ್ತ್’ ಚಿತ್ರದ ಮೂಲಕ ನನ್ನ 40 ವರ್ಷದ ಕನಸು ಇಂದು ನನಸಾಗಿದೆ. ಹೊಸಬರ ಸಿನಿಮಾ ಇದು. ಎಲ್ಲರ ಪ್ರೋತ್ಸಾಹ ಇರಲಿ. ಇಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಕಾಲವಿಲ್ಲ. ಆದರೂ, ಜನರನ್ನು ಚಿತ್ರಮಂದಿರಕ್ಕೆ ಕರೆತರುವಂತಹ ಚಿತ್ರ ಬರಬೇಕು.

ಸಾಹಿತ್ಯ, ಸಂಸ್ಕೃತಿ ಜೊತೆಗೆ ಮುಂದಿನ ಪೀಳಿಗೆಗೂ ತೋರಿಸುವಂತಹ ಸಿನಿಮಾಗಳು ಬರುತ್ತಿವೆ ಅನ್ನುವುದಾದರೆ, ಅದು ಕನ್ನಡದಲ್ಲಿ ಮಾತ್ರ. ಆನೇಕ ಚಿತ್ರಗಳು ಶುರುವಾಗುತ್ತವೆ. ಆದರೆ, ಸೆಟ್ಟೇರುವುದಿಲ್ಲ. ಸೆಟ್ಟೇರಿದರೂ ಬಿಡುಗಡೆ ಆಗುವುದು ಕಷ್ಟ. ಆದರೆ, “ಜಿಗ್ರಿದೋಸ್ತ್’ ಸಿನಿಮಾ ಶುರುವಾಗಿ, ಚಿತ್ರೀಕರಣಗೊಂಡು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಈ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು ಜಯಚಂದ್ರ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.