ಇಲ್ಲಿ ವಿಲನ್‌, ಅಲ್ಲಿ ಕಾಪ್‌


Team Udayavani, Apr 11, 2018, 8:00 PM IST

Samyukta-Hornad-(2).jpg

ಸಂಯುಕ್ತಾ ಹೊರನಾಡು ಒಂದು ಕಡೆ ವಿಲನ್‌, ಇನ್ನೊಂದು ಕಡೆ ಪೊಲೀಸ್‌! ಅರೇ, ಇದೇನಪ್ಪಾ ಸಂಯುಕ್ತಾ, ಚಿತ್ರದಲ್ಲೇನಾದರೂ ದ್ವಿಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದು ನಿಜ. ಆದರೆ, ಅವರು ದ್ವಿಪಾತ್ರ ಮಾಡುತ್ತಿಲ್ಲ. ಬದಲಾಗಿ ಒಂದು ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ಪಾತ್ರ ಮಾಡಿದರೆ, ಇನ್ನೊಂದು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸಂಯುಕ್ತಾ ಇನ್ನೂ ಹೆಸರಿಡದ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ಬುಧವಾರವಷ್ಟೇ ಮುಹೂರ್ತ ನೆರವೇರಿದೆ. ಇನ್ನು, ಇದೇ ಏಪ್ರಿಲ್‌ 25 ರಂದು ಶುರುವಾಗಲಿರುವ “ನಮ್ಮ ಯುಎಫ್ಓ’ ಎಂಬ ಹೊಸ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ಮೊದಲ ಬಾರಿಗೆ ಕಾಪ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಜಯ್‌ ಸಪೇಶ್‌ಕರ್‌ ಎಂಬುವವರು ಈ ಚಿತ್ರದ ನಿದೇಶಕರು. “ನಮ್ಮ ಯುಎಫ್ಓ’ ಚಿತ್ರದಲ್ಲಿ ಅನಂತ್‌ನಾಗ್‌ ನಿವೃತ್ತ ಪತ್ರಕರ್ತರಾಗಿ ನಟಿಸಿದರೆ, ಪ್ರಕಾಶ್‌ಬೆಳವಾಡಿ ಅವರು ಕಮೀಷನರ್‌ ಆಗಿ ನಟಿಸುತ್ತಿದ್ದಾರೆ. ಅವರೊಂದಿಗೆ ಸಂಯುಕ್ತಾ ಮೊದಲ ಸಲ ಕಾಪ್‌ ಆಗಿ ಅಭಿನಯಿಸುತ್ತಿದ್ದಾರೆ. ಹೊಸ ಚಿತ್ರದ ಬಗ್ಗೆ ಹೇಳಿಕೊಳ್ಳುವ ಸಂಯುಕ್ತಾ, “ನಮ್ಮ ಯುಎಫ್ಓ’ ಹೊಸ ಬಗೆಯ ಕಥೆ ಹೊಂದಿದೆ.

ಅದೊಂದು ಸೈಂಟಿಫಿಕ್‌ ಜಾನರ್‌ನ ಚಿತ್ರ. ಸಾಮಾನ್ಯವಾಗಿ ಹಲವು ದೇಶಗಳಲ್ಲಿ ಏಲಿಯನ್ಸ್‌ ಭೂಮಿಗೆ ಇಳಿದ ಬಗ್ಗೆ ಸುದ್ದಿಯಾಗಿದೆ. ಆದರೆ, ನಮ್ಮ ಚಿತ್ರದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಏಲಿಯನ್ಸ್‌ ಕಾಣಿಸಿಕೊಳ್ಳುತ್ತವೆ. ಅದು ಕೇವಲ ಏಲಿಯನ್ಸ್‌ ಕುರಿತಾಗಿದ್ದಲ್ಲ. ನಮ್ಮ ಪರಂಪರೆ ಕುರಿತು ಒಂದಷ್ಟು ಕಥೆ ಹೇಳಲಿದೆ. ಒಂದು ಭ್ರಮೆ ಕುರಿತಾಗಿಯೂ ಇಲ್ಲಿ ಒಂದಷ್ಟು ಅಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ಈ ಚಿತ್ರದಲ್ಲಿ ಕೆಲಸ ಮಾಡಲು ತುಂಬ ಉತ್ಸುಕಳಾಗಿದ್ದೇನೆ. ಏ.25 ರಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ನಾನು “ಕಾಫಿತೋಟ’ ಚಿತ್ರದಲ್ಲಿ ಲಾಯರ್‌ ಆಗಿ ನಟಿಸಿದ್ದೇನೆ. “ಎಂಎಂಸಿಎಚ್‌’ ಚಿತ್ರದಲ್ಲಿ ಜೈಲ್‌ ಸೀನ್‌ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೊಂದು ಚಿತ್ರದಲ್ಲಿ ವಿಟ್‌ನೆಸ್‌ ಪಾತ್ರದಲ್ಲಿ ನಟಿಸಿದ್ದೇನೆ. ಈಗ ಹೊಸ ಚಿತ್ರದಲ್ಲಿ ಕಾಪ್‌ ಆಗಿದ್ದೇನೆ.

ಈ ಎಲ್ಲಾ ಪಾತ್ರಗಳಿಗೂ ಒಂದು ಕಾಮನ್‌ ಅಟ್ಯಾಚ್‌ಮೆಂಟ್‌ ಇದೆ. ಅದೇನೆಂದರೆ, ಈ ನಾಲ್ಕು ಪಾತ್ರಗಳು ಕಂಠೀರವ ಸ್ಟುಡಿಯೋದಲ್ಲಿರುವ ಕೋರ್ಟ್‌ಸೆಟ್‌ನಲ್ಲೇ ಚಿತ್ರೀಕರಣಗೊಂಡಿವೆ. ಒಂದೇ ಕೋರ್ಟ್‌, ವಿಭಿನ್ನ ಪಾತ್ರಗಳು. ಮುಂದೆ ಬರುವ ಚಿತ್ರದಲ್ಲಿ ಜಡ್ಜ್ ಪಾತ್ರ ಸಿಕ್ಕರೂ ಸಿಗಬಹುದೇನೋ?’ ಎಂದು ಹೇಳುತ್ತಲೇ ಹಾಗೊಂದು ನಗೆ ಬೀರುತ್ತಾರೆ ಸಂಯುಕ್ತಾ ಹೊರನಾಡು.

ಅಂದಹಾಗೆ, ಸಂಯುಕ್ತಾ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ. ಆ ಪೈಕಿ ಕನ್ನಡದ “ಅರಿಷಡ್ವರ್ಗ’, “ಎಂಎಂಸಿಎಚ್‌’ ಮತ್ತು ತೆಲುಗಿನ ರಾಣಾ ಸಿನಿಮಾಸ್‌ನಲ್ಲಿ ತಯಾರಾಗಿರುವ ಚಿತ್ರದ ಜೊತೆಗೆ ತಮಿಳಿನ ಚಿತ್ರವೊಂದು ಇದೇ ವರ್ಷ ಬಿಡುಗಡೆಯಾಗಲಿದೆ. ಇನ್ನು, ಸಂಯುಕ್ತಾಗೆ ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಬೇಕೆಂಬ ಆಸೆ ಇದೆ. ಅಂತಹ ಅವಕಾಶವಿನ್ನೂ ಬಂದಿಲ್ಲ. ಬಂದರೆ, ಬಿಡಲ್ಲ ಅನ್ನುತ್ತಾರೆ ಸಂಯುಕ್ತಾ.

ಅದೆಲ್ಲಾ ಸರಿ, ಇನ್ನೂ ಹೆಸರಿಡದ ಚಿತ್ರದಲ್ಲಿ ನೀವು ವಿಲನ್‌ ಅಂತೆ ಹೌದಾ? ಈ ಪ್ರಶ್ನೆಗೆ ಉತ್ತರಿಸುವ ಅವರು, ನಾನು ವಿಲನ್‌ ಥರಾ ಕಾಣಿಸ್ತೀನಾ? ಎಂಬ ಪ್ರಶ್ನೆ ಮುಂದಿಟ್ಟು, ಪಾತ್ರದ ಗುಟ್ಟು ರಟ್ಟು ಮಾಡದೆ, ಸಣ್ಣ ನಗೆ ಬೀರಿ, ನೆಗೆಟಿವ್‌ ಶೇಡ್‌ ಪಾತ್ರದ ಸುಳಿವು ಕೊಡುತ್ತಾರೆ.

* ಚಾಮುಂಡಿ ಬೆಟ್ಟದಲ್ಲಿ ಏಲಿಯನ್ಸ್‌ ಕಾಣಿಸಿಕೊಳ್ಳುತ್ತವೆ ಹುಷಾರ್‌.
* ನಾಲ್ಕು ಪಾತ್ರಗಳಿಗೆ ಕಂಠೀರವ ಸ್ಟುಡಿಯೋದ ಕೋರ್ಟ್‌ಸೆಟ್‌ನಲ್ಲೇ ಚಿತ್ರೀಕರಣ.
* ನಾಲ್ಕು ಚಿತ್ರಗಳು ಈ ವರ್ಷ ತೆರೆಗೆ.

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.