ಹೀರೋನಾ? ಕಾಮಿಡಿಯನ್ನಾ? ಚಿಕ್ಕಣ್ಣನ ದೊಡ್ಡ ಯೋಚನೆ!


Team Udayavani, Sep 25, 2017, 3:20 PM IST

25-ZZ-8.jpg

“ಹೀರೋ ಆಗುವ ಆಸೆ ಯಾರಿಗೆ ಇರಲ್ಲ ಹೇಳಿ ಸಾರ್‌ …’
– ಹೀಗೆ ಹೇಳುತ್ತಾ ನಕ್ಕರು ಚಿಕ್ಕಣ್ಣ. ಅವರ ನಗುವಿನಲ್ಲಿ ಸಣ್ಣ ಆಸೆಯೊಂದು ಎದ್ದು ಕಾಣುತ್ತಿತ್ತು. ಅದು ಎಲ್ಲಾ ಕಾಮಿಡಿ ನಟರಲ್ಲೂ ಇರುವ ಆಸೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಬೇಡಿಕೆ ಹೆಚ್ಚುತ್ತಿದ್ದಂತೆ, ಒಂದಷ್ಟು ವರ್ಷ ಕಾಮಿಡಿ ಕಿಂಗ್‌ಗಳಾಗಿ ಮೆರೆದ ನಂತರ ಬಹುತೇಕ ನಟರಿಗೆ ತಾವ್ಯಾಕೆ ಹೀರೋ ಆಗಬಾರದೆಂಬ ಆಸೆ ಮೂಡುತ್ತದೆ. ಈಗ ಚಿಕ್ಕಣ್ಣ ಮನಸ್ಸಿನಲ್ಲೂ ಅಂತಹ ಒಂದು ಆಸೆ ಮೂಡಿದೆ. “ನನಗೂ ಹೀರೋ ಆಗುವ ಆಸೆ ಇದೆ. ಒಂದಷ್ಟು ಅವಕಾಶಗಳು ಕೂಡಾ ಬರುತ್ತಿದೆ. ಮುಂದೆ ನೋಡಬೇಕು. ಆ ಬಗ್ಗೆಯೇ ಆಲೋಚಿಸುತ್ತಿದ್ದೇನೆ’ ಎನ್ನುತ್ತಾರೆ ಚಿಕ್ಕಣ್ಣ. ಎಲ್ಲಾ ಓಕೆ, ಅವಕಾಶ ಬರುತ್ತಿರಬೇಕಾದರೆ ಆಲೋಚಿಸುವ ಪ್ರಶ್ನೆ ಏನಿದೆ, ಒಪ್ಪಿಕೊಂಡು ಮಾಡೋದಲ್ವಾ ಎಂದು ನೀವು ಕೇಳಬಹುದು. ಪಾಯಿಂಟ್‌ ಇರೋದೇ ಅಲ್ಲಿ. ಚಿಕ್ಕಣ್ಣಗೆ ಹೀರೋ ಆಗೋಕೆ ಆಸೆ ಏನೋ ಇದೆ. ಜೊತೆಗೆ ಭಯವೂ ಇದೆ.

ಹೀರೋ ಆದರೆ, ಇಡೀ ಸಿನಿಮಾದ ಜವಾಬ್ದಾರಿ ಹೀರೋ ಹೆಗಲ ಮೇಲಿರುತ್ತದೆ. ಸಿನಿಮಾ ಗೆದ್ದರೆ ಓಕೆ. ಮೂರು ಸಿನಿಮಾ ಸೋತರೆ ಆ ನಟನನ್ನು ಕೇಳುವವರಿರೋದಿಲ್ಲ. ಅದಲ್ಲದೇ ಒಮ್ಮೆ ಹೀರೋ ಆಗಿ ಮೆರೆದ ನಂತರ ಮತ್ತೆ ಬೇರೆ ಹೀರೋಗಳ ಸಿನಿಮಾದಲ್ಲಿ ಕ್ಯಾರೆಕ್ಟರ್‌ ಮಾಡಲು ಮನಸ್ಸು ಒಪ್ಪೋದಿಲ್ಲ. ಈ ಎಲ್ಲಾ ಲೆಕ್ಕಾಚಾರಗಳು ಚಿಕ್ಕಣ್ಣ ತಲೆಯಲ್ಲಿವೆ. ಆ ಕಾರಣಕ್ಕಾಗಿ ಇನ್ನೂ ಹೀರೋ ಆಗುವ ರಿಸ್ಕ್ಗೆ ಕೈ ಹಾಕಿಲ್ಲ. ಹಾಗಂತ ಅವರು ಯಾವ ಹೀರೋಗಿಂತಲೂ ಕಮ್ಮಿ ಇಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಬಹುತೇಕ ಎಲ್ಲಾ ಹೀರೋಗಳ ಸಿನಿಮಾದಲ್ಲಿ ಚಿಕ್ಕಣ್ಣ ಇದ್ದೇ ಇರುತ್ತಾರೆ. ಕೇವಲ ಇರೋದಷ್ಟೇ ಅಲ್ಲ, ಅವರಿಗೆ ಅಲ್ಲೊಂದು ದೊಡ್ಡ ಸ್ಪೇಸ್‌ ಕೂಡಾ ನೀಡಲಾಗುತ್ತಿದೆ. ಈ ಮೂಲಕ ಚಿಕ್ಕಣ್ಣ ಬಿಝಿ. ಸಂಭಾವನೆ ವಿಚಾರದಲ್ಲೂ ಚಿಕ್ಕಣ್ಣ “ದೊಡ್ಡಣ್ಣ’. ದಿನದ ಅವರ ಸಂಭಾವನೆ ಲಕ್ಷದಲ್ಲಿದೆ. ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಚಿಕ್ಕಣ್ಣ ತಿಂಗಳಲ್ಲಿ ಎಷ್ಟು ದಿನ ಬಿಝಿ ಇರುತ್ತಾರೆಂದರೆ 25 ದಿನ ಎಂಬ ಉತ್ತರ ಅವರಿಂದ ಬರುತ್ತದೆ. “ತಿಂಗಳಲ್ಲಿ ಸುಮಾರು 25 ದಿನ ಬಿಝಿ ಇರುತ್ತೇನೆ. ಇನ್ನೈದು ದಿನ ನಾನೇ ಫ್ರೀ ಮಾಡಿಕೊಂಡು ತನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಚಿಕ್ಕಣ್ಣ.

ಚಿಕ್ಕಣ್ಣಗೆ ಒಂದು ಖುಷಿ ಇದೆ. ಅದೇನೆಂದರೆ ಕಾಮಿಡಿ ನಟನಾದರೂ ಒಂದಷ್ಟು ವಿಭಿನ್ನ ಪಾತ್ರಗಳು ಸಿಗುತ್ತಿರೋದು. ಆ ಪಾತ್ರಗಳ ಮೂಲಕ ಜನರನ್ನು ನಗಿಸುವ ಅವಕಾಶ ಸಿಗುತ್ತಿರೋದು. ಸದ್ಯ ಬಿಡುಗಡೆಗೆ ರೆಡಿಯಾಗಿರುವ “ರಾಜ್‌ ವಿಷ್ಣು’, ಚಿತ್ರೀಕರಣದಲ್ಲಿರುವ “ಸಂಹಾರ’, ಮುಂದೆ ಆರಂಭವಾಗಲಿರುವ “ರ್‍ಯಾಂಬೋ-2′ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರವಿದೆಯಂತೆ. “ಅಧ್ಯಕ್ಷ’ ಸಿನಿಮಾ ಹಿಟ್‌ ಆದ ನಂತರ ಶರಣ್‌ ಜೊತೆ ಚಿಕ್ಕಣ್ಣ ನಟಿಸುತ್ತಿರುವ ಚಿತ್ರ “ರಾಜ್‌ ವಿಷ್ಣು’. ಇಡೀ ಸಿನಿಮಾದುದ್ದಕ್ಕೂ ಸಾಗಿ ಬರುವ ಚಿತ್ರ. ಸುಮಾರು 55 ದಿನಗಳ ಕಾಲ ಚಿತ್ರೀಕರಣದಲ್ಲಿ ಚಿಕ್ಕಣ್ಣ ತೊಡಗಿಸಿಕೊಂಡಿದ್ದಾರಂತೆ. ಇನ್ನು, “ಸಂಹಾರ’ದಲ್ಲಿ ರಾಜಾಹುಲಿ ಎಂಬ ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರ ಸಿಕ್ಕಿದೆ. ತೆರೆಮೇಲೆ ಸೀರಿಯಸ್‌ ಆಗಿಯೇ ಕಾಣಿಸಿಕೊಳ್ಳುವ ಚಿಕ್ಕಣ್ಣ ಅವರು ಪ್ರೇಕ್ಷಕರಲ್ಲಿ ನಗುತರಿಸುತ್ತಾರಂತೆ. “ಹೊಸ ಹೊಸ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಕಾಮಿಡಿ ಅಂದಾಕ್ಷಣ ಮಾಡಿದ್ದನ್ನೇ ಮಾಡಿದರೆ ಜನರಿಗೂ ಇಷ್ಟವಾಗೋದಿಲ್ಲ. ಹಾಗಾಗಿ, ಕಾಮಿಡಿಯಲ್ಲೇ ವಿಭಿನ್ನವಾಗಿ ಏನು ಮಾಡಬಹುದೆಂಬ ಬಗ್ಗೆ ಯೋಚಿಸುತ್ತೇನೆ’ ಎನ್ನುವುದು ಚಿಕ್ಕಣ್ಣ ಮಾತು. 

ಚಿಕ್ಕಣ್ಣ ಕೆರಿಯರ್‌ ಸೆಟ್ಲ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಅವರಿಗೂ ಒಂದು ಸ್ಥಾನ ಸಿಕ್ಕಿದೆ. ತಿಂಗಳಿಗೆ ಲಕ್ಷಗಟ್ಟಲೇ ದುಡಿಯುತ್ತಿದ್ದಾರೆ. ಇವೆಲ್ಲಾ ಓಕೆ, ಆದರೆ ಫ್ಯಾಮಿಲಿ ವಿಚಾರದಲ್ಲಿ ಸೆಟ್ಲ ಆಗೋದು ಯಾವಾಗ, ಮದುವೆ ಯಾವತ್ತು ಮಾಡಿಕೊಳ್ಳುತ್ತೀರಿ ಎಂದಾಗ, “ಮನೆಯವರು ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದಾರೆ. ನೋಡಬೇಕು’ ಎಂದಷ್ಟೇ ಆಗುತ್ತಾರೆ. ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಚಿಕ್ಕಣ್ಣ ಬಣ್ಣದ ಲೋಕದ ಹುಡುಗಿಯನ್ನೇ ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಬರಬಹುದು. ಆದರೆ, ಚಿಕ್ಕಣ್ಣ ಮನೆಯವರು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತಾರಂತೆ. 

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.