ಬೆಂಗಳೂರಿನ ಸೊಸೆಯಾಗಿದ್ದಕ್ಕೆ ಖುಷಿ ಇದೆ


Team Udayavani, Mar 7, 2018, 11:09 AM IST

Bhavana-(12).jpg

ಬೆಂಗಳೂರಿನ ಸೊಸೆ! ಹಾಗೆಂದಾಕ್ಷಣ ಹಿರಹಿರಿ ಹಿಗ್ಗಿದರು ಭಾವನಾ ಮೆನನ್. ಬೆಂಗಳೂರು ಹುಡುಗ ನವೀನ್ ಜೊತೆಗೆ ಮದುವೆಯಾದ ನಂತರ ಮೊದಲ ಬಾರಿಗೆ ಅವರು ಮಾಧ್ಯಮದವರೆದುರು ಸೋಮವಾರ ಕಾಣಿಸಿಕೊಂಡರು. ಅದೂ ಟಗರು ಚಿತ್ರದ ಸಂತೋಷಕೂಟದಲ್ಲಿ. ಈ ಸಂದರ್ಭದಲ್ಲಿ ಅವರನ್ನು ಬೆಂಗಳೂರಿನ ಸೊಸೆ ಎಂದಾಗ ಖುಷಿಯಾದರು. ಬೆಂಗಳೂರಿನ ಸೊಸೆ ಎಂದು ಕರೆಸಿಕೊಳ್ಳುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದರು.

ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರಿಗೆ ಅವಕಾಶಗಳು ಕಡಿಮೆಯಾಗುತ್ತದೆ ಎಂಬ ಮಾತಿದೆ. ಅವಕಾಶಗಳಿದ್ದರೂ, ನಟಿಯರು ಒಪ್ಪುವುದಿಲ್ಲ ಎಂಬ ನಂಬಿಕೆ ಇದೆ. ಇವೆರಡನ್ನೂ ಸುಳ್ಳು ಮಾಡಿರುವ ಭಾವನಾ, ಪ್ರಜ್ವಲ್ ಜೊತೆಗೆ `ಇನ್‍ಸ್ಪೆಕ್ಟರ್ ವಿಕ್ರಂ’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಹೇಗೆ ಸಾಧ್ಯವಾಯಿತು ಎಂದರೆ, `ಮದುವೆ ಆದ ತಕ್ಷಣ ನನಗೆ ಚಿತ್ರದಲ್ಲಿ ನಟಿಸಬೇಕು, ಪಾತ್ರ ಮಾಡಬೇಕು ಎಂಬ ಯಾವುದೇ ಉಶವಿರಲಿಲ್ಲ.

ಆದರೆ, ಅವಕಾಶ ಬಂತು. ಅದೊಂದು ಡ್ರಗ್ ಪೆಡ್ಲರ್ ಪಾತ್ರ. ಚೆನ್ನಾಗಿತ್ತು ಅಂತ ಒಪ್ಪಿಕೊಂಡೆ’ ಎನ್ನುತ್ತಾರೆ ಭಾವನಾ. ಕನ್ನಡವಲ್ಲದೆ ಮಲಯಾಳಂನಲ್ಲೇನಾದರೂ ಚಿತ್ರಗಳಿವೆಯಾ ಎಂದರೆ, `ನನಗೆ ಸುಮ್ಮನೆ ಅರ್ಜೆಂಟ್ ಮಾಡೋಕೆ ಆಸೆ ಇಲ್ಲ. ಚಿತ್ರರಂಗಕ್ಕೆ ಬಂದು 16 ವರ್ಷಗಳಾಗಿವೆ. 77 ಸಿನಿಮಾಗಳಲ್ಲಿ ನಟಿಸಿದ್ದೇನೆ. ಸುಮ್ಮನೆ ಏನೇನೋ ಮಾಡೋಕೆ ಇಷ್ಟವಿಲ್ಲ.

ಒಳ್ಳೆಯ ಪಾತ್ರಗಳಿದ್ದರೆ ಖಂಡಿತಾ ಮಾಡುತ್ತೀನಿ. ನನಗೆ ಅಷ್ಟು ಚಿತ್ರ ಮಾಡಬೇಕು, ಇಷ್ಟರಲ್ಲಿ ನಟಿಸಬೇಕು ಎಂಬ ಯಾವುದೇ ಟಾರ್ಗೆಟ್ ಇಲ್ಲ. ನಾನು 75 ಪ್ಲಸ್ ಸಿನಿಮಾ ಮಾಡುತ್ತೀನಿ ಅಂದುಕೊಂಡೇನೂ ಇಲ್ಲಿಗೆ ಬಂದಿರಲಿಲ್ಲ. ಅದಾಗೇ ಎಲ್ಲವೂ ಆಯಿತು. ಮುಂದೆ ಸಹ ಹಾಗೆಯೇ ಆಗಲಿ. ಒಳ್ಳೆಯ ಅವಕಾಶ ಸಿಕ್ಕರೆ ನಟಿಸುತ್ತೀನಿ’ ಎನ್ನುತ್ತಾರೆ ಭಾವನಾ.

ಭಾವನಾ ಕನ್ನಡಕ್ಕೆ ಬಂದು ಎಂಟು ವರ್ಷಗಳಾಗಿವೆ. 2010ರಲ್ಲಿ ಬಿಡುಗಡೆಯಾದ `ಜಾಕಿ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಬಂದರು. ಆ ನಂತರ ಸುದೀಪ್, ಗಣೇಶ್, ಉಪೇಂದ್ರ ಮುಂತಾದವರ ಜೊತೆಗೆ ನಟಿಸಿದ್ದಾರೆ. `ದೊಡ್ಡ ಹೀರೋಗಳ ಜೊತೆಗೆ ನಟಿಸುವ ಅವಕಾಶ ಈ ಅವಧಿಯಲ್ಲಿ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ನನಗೆ ಬಹಳ ಒಳ್ಳೆಯ ಹಾಡುಗಳು ಸಿಕ್ಕಿವೆ.

ಮಲಯಾಳಂನಲ್ಲಿ ನನಗೆ ಒಳ್ಳೆಯ ಹಾಡುಗಳು ಸಿಕ್ಕಿದ್ದು ಕಡಿಮೆಯೇ. ಇಲ್ಲಿ ಮಾತ್ರ ಮೊದಲಿನಿಂದ ಇಲ್ಲಿಯವರೆಗೂ ಒಂದಿಷ್ಟು ಒಳ್ಳೆಯ ಹಾಡುಗಳು ಸಿಕ್ಕಿವೆ’ ಎನ್ನುತ್ತಾರೆ ಅವರು. ಇನ್ನು ಪುನೀತ್, ಸುದೀಪ್, ಉಪೇಂದ್ರರಂತಹ ಹೀರೋಗಳ ಜೊತೆಗೆ ನಟಿಸಿದ್ದರೂ, ಶಿವರಾಜಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ಒಂದಲ್ಲ ಒಂದು ಕಾರಣಕ್ಕೆ ತಪ್ಪಿ ಹೋಗುತಿತ್ತಂತೆ.

ಶಿವರಾಜಕುಮಾರ್ ಅವರ ಜೊತೆಗೆ ಮುಂಚೆಯೂ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಒಂದಲ್ಲ ಒಂದು ಕಾರಣಕ್ಕೆ ಅದು ತಪ್ಪಿ ಹೋಗೋದು. `ಟಗರು’ ಚಿತ್ರದಲ್ಲಿ ನಟಿಸುವುದಕ್ಕೆ ಸೂರಿ, ಏಳೆಂಟು ದಿನಗಳ ಅತಿಥಿ ಪಾತ್ರ ಎಂದರು. ನೀವಿದ್ದರೆ ಚೆನ್ನ ಅಂತಲೂ ಹೇಳಿದ್ದರು. ನನಗೆ ನಿಮ್ಮಿಂದ ನೋ ಕೇಳೋಕೆ ಇಷ್ಟ ಇಲ್ಲ ಎಂದಿದ್ದರು. ನನಗೂ ನೋ ಅನ್ನೋಕೆ ಇಷ್ಟವಿರಲಿಲ್ಲ.

ಏಕೆಂದರೆ, ಕನ್ನಡಕ್ಕೆ ನನ್ನನ್ನು ಪರಿಚಯಿಸಿದ್ದು ಸೂರಿ. ನನಗೆ ಅವರ ಜೊತೆಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ. ಹಾಗಾಗಿ ಒಪ್ಪಿದೆ. ಏಳೆಂಟು ದಿನ ಅಂತ ಶುರುವಾಗಿದ್ದು, 15 16 ದಿನಗಳಾದವು’ ಎನ್ನುತ್ತಾರೆ ಭಾವನಾ.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.