ಬಿಗ್‌ಬಾಸ್‌ ಕೊನೆಯಾಗೋದು ಕಲರ್ ಸೂಪರಲ್ಲಿ !


Team Udayavani, Jan 12, 2017, 11:52 AM IST

bal-Bigg-Boss_117-Parameshwara-Gundkal.jpg

ಬಹುನಿರೀಕ್ಷಿತ “ಬಿಗ್‌ಬಾಸ್‌ ಸೀಜನ್‌4’ನ ಫಿನಾಲೆ ಈ ವಾರ ನಡೆಯಬೇಕಾಗಿದ್ದು 2 ವಾರ ದಿಢೀರ್‌ ಮುಂದಕ್ಕೆ ಹೋಗಿದೆ. ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿ, ಚರ್ಚೆ, ವಾದ, ವಿವಾದಗಳಿಗೆ ಗ್ರಾಸವಾಗಿರುವ ಈ ಕಾರ್ಯಕ್ರಮ 2 ವಾರ ಮುಂದೆ ಹೋಗಿದ್ದೇಕೆ, ಫಿನಾಲೆ ರೂಪುರೇಷೆಗಳೇನು, “ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರ ಕಾಣುತ್ತಿರುವ ಈ ರಿಯಾಲಿಟಿ ಶೋನ ಹೆಚ್ಚುವರಿ 2 ವಾರಗಳ ಎಪಿಸೋಡುಗಳು “ಕಲರ್‌ ಸೂಪರ್‌’ನಲ್ಲಿ ಪ್ರಸಾರವಾಗುತ್ತಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ “ಕಲರ್ಸ್‌’ ಹಾಗೂ “ಕಲರ್ಸ್‌ ಸೂಪರ್‌’ ಚಾನಲ್‌ಗ‌ಳ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಇಲ್ಲಿ ಮಾತಾಡಿದ್ದಾರೆ:

* 2 ವಾರಗಳ ಕಾಲ “ಬಿಗ್‌ಬಾಸ್‌4′ ಸೀಜನ್‌ ಮುಂದೂ ಡಿದ್ದು ಇದೇ ಮೊದಲಾ? ಯಾಕೆ?
ಆದರೆ ಹಿಂದಿಯಲ್ಲಿ ಒಂದು ಸೀಜನ್‌ ಅನ್ನು ಇದೇ ಥರ ಮುಂದುವರಿಸಲಾಗಿತ್ತು. ಕನ್ನಡದಲ್ಲಿ ಇದೇ ಮೊದಲು. ಇದಕ್ಕೆ ಕಾರಣ ಬೇರೇನಲ್ಲ, ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಚೆನ್ನಾಗಿದೆ. ಅದು ಇನ್ನೂ ಎರಡು ವಾರಗಳ ಕಾಲ ಮುಂದುವರಿಯಲಿ ಎನ್ನುವುದಷ್ಟೇ. ತುಂಬ ಇನ್ವೆಸ್ಟ್‌ಮೆಂಟ್‌ ಆಗಿದೆ, ಅಂಥ ಒಂದು ಶೋನ ಮನರಂಜನೆ ಇನ್ನೂ ಕೆಲ ಕಾಲ ಸಿಗಲಿ ಅನ್ನುವ ಉದ್ದೇಶವಷ್ಟೇ.

* 2 ವಾರಗಳ ಹೆಚ್ಚುವರಿ ಎಪಿಸೋಡುಗಳು “ಕಲರ್ಸ್‌ ಸೂಪರ್‌’ನಲ್ಲಿ ಮೂಡಿ ಬರುವುದಕ್ಕೆ ಕಾರಣ?
ಎರಡು ಕಾರಣ, ಒಂದು ಈಗಾಗಲೇ ಕಲರ್ಸ್‌ ಕನ್ನಡದಲ್ಲಿ ಆ ಸಮಯಕ್ಕೆ 2 ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿಯಾಗಿದೆ. ಒಂದು “ರಾಧಾರಮಣ’, ಇನ್ನೊಂದು “ಪದ್ಮಾವತಿ’. ದಿಢೀರನೆ ಆ ಧಾರಾವಾಹಿಯನ್ನು ಮುಂದಕ್ಕೆ ಹಾಕುವುದಕ್ಕೆ ಆಗುವುದಿಲ್ಲ. ಜೊತೆಗೆ “ಕಲರ್ಸ್‌ ಸೂಪರ್‌’ನಲ್ಲಿ ಇದನ್ನು ಪ್ರಸಾರ ಮಾಡುವುದರಿಂದ ಆ ಚಾನಲ್‌ಗೆ ಹೆಚ್ಚಿನ ವೀಕ್ಷಕರು ಬಂದಂತಾಗುತ್ತದೆ.

ಹೊಸ ಚಾನಲ್‌ ಪ್ರಾರಂಭವಾದಾಗ ಅದರ ವೀಕ್ಷಕರ ಸಂಖ್ಯೆ 2. 5ರಷ್ಟಿತ್ತು. “ಬಿಗ್‌ಬಾಸ್‌ ನೈಟ್‌ಶಿಪ್ಟ್’ ಹೆಸರಲ್ಲಿ ಈ ರಿಯಾಲಿಟಿ ಶೋ ಅನ್ನು ಅಲ್ಲೂ ಪ್ರಸಾರ ಮಾಡತೊಡಗಿದಾಗ ಅದು ಶೇ. 5ರಷ್ಟಕ್ಕೆ ಏರಿದೆ. ಈಗ 2 ವಾರಗಳ ಹೆಚ್ಚುವರಿಯನ್ನು ಅಲ್ಲೇ ಪ್ರಸಾರಿಸಿದರೆ ಆ ಪ್ರಮಾಣ ಶೇ. 8 ಅಥವಾ 10ಕ್ಕೆ ಏರಬಹುದು. ಅದರಿಂದ ಹೊಸ ಚಾನಲ್‌ಗೆ ಒಳ್ಳೆಯ ಪ್ರಮೋಶನ್‌ ಆಗುತ್ತದೆ ಅನ್ನುವುದು ನಮ್ಮ ನಂಬಿಕೆ.

ಯಾಕೆಂದರೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಇರುವ ಪ್ರೇಕ್ಷಕರ ಸಂಖ್ಯೆ ದೊಡ್ಡದು. ಅದರ ಅಂತಿಮ 2 ವಾರಗಳ ಎಪಿಸೋಡುಗಳನ್ನು ಪ್ರಸಾರ ಮಾಡುತ್ತಲೇ “ಕಲರ್ಸ್‌ ಸೂಪರ್‌’ನಲ್ಲಿ ಒಂದು ಕಾಮಿಡಿ ಶೋ ಶುರು ಮಾಡುತ್ತಿದ್ದೇವೆ. ಜೊತೆಗೆ ಇನ್ನೊಂದು ಟಾಕ್‌ ಶೋ ಕೂಡ ಬರಲಿದೆ. ಹೊಸ ಚಾನಲ್‌ಗೆ ಪ್ರೇಕ್ಷಕ ಬರುವುದಕ್ಕೆ “ಬಿಗ್‌ಬಾಸ್‌’ ಒಳ್ಳೆಯ ವೇದಿಕೆ ಮಾಡಿಕೊಡಲಿದೆ

* “ಕಲರ್ಸ್‌ ಕನ್ನಡ’ನಷ್ಟೇ “ಕಲರ್ಸ್‌ ಸೂಪರ್‌’ ಕೂಡ ಜನರಿಗೆ ಲಭ್ಯವಿದೆಯೇ?
ಹೌದು, “ಟಾಟಾ ಸ್ಕೈ’ ಹೊರತುಪಡಿಸಿ ಉಳಿದೆಲ್ಲಾ ಡಿಟಿಎಚ್‌ ಸೇವೆಗಳಲ್ಲೂ “ಕಲರ್ಸ್‌ ಸೂಪರ್‌’ ಲಭ್ಯವಿದೆ.

* ಈ 2 ವಾರಗಳಲ್ಲಿ ಟಾಸ್ಕ್ಗಳ ಸಂಖ್ಯೆ ಕಡಿಮೆ ಯಾಗಲಿದೆಯೇ?
ಹೌದು, ಕಾರಣ ಸ್ಪರ್ಧಿಗಳ ಸಂಖ್ಯೆ ಇಳಿಮುಖವಾಗಿದೆ. ಟಾಸ್ಕ್ಗಳನ್ನು ನೀಡುವುದಕ್ಕೆ ತಕ್ಕ ವಾತಾವರಣ ಸಿಗಲಾರದು. ಹಾಗಾಗಿ “ಬಿಗ್‌ಬಾಸ್‌’ನ ಅಷ್ಟೂ ಸೀಜನ್‌ಗಳಲ್ಲಿ ಪಾಲ್ಗೊಂಡವರನ್ನು ಬಿಗ್‌ಬಾಸ್‌ ಮನೆ ಒಳಗೆ ಕಳಿಸಲಾಗುತ್ತದೆ. ಕೊನೆಯ ಒಂದು ವಾರ ಟಾಸ್ಕ್ಗಳನ್ನು ಮುಗಿಸಿ, ಕೊನೆಯಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳನ್ನು ಬಿಡುತ್ತೇವೆ.

* ಫಿನಾಲೆಯ ಆಕರ್ಷಣೆಗಳೇನು?
ಪ್ರತಿ ವರ್ಷ ಫಿನಾಲೆ ಹೇಗೆ ನಡೆಯುತ್ತದೋ ಆ ರೀತಿಯಲ್ಲೇ ಇರುತ್ತದೆ. 15ಕ್ಕೆ ಬದಲಾಗಿ ಜನವರಿ 29ಕ್ಕೆ ಫಿನಾಲೆ ಜರುಗಲಿದೆ.

ಟಾಪ್ ನ್ಯೂಸ್

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.