‘ಮನಸು ಜಾರಿದೆ’ ಆಲ್ಬಂ ಬಿಡುಗಡೆ
Team Udayavani, Jul 4, 2023, 2:09 PM IST
ಭಜರಂಗಿ 2′ ಸಿನಿಮಾ ಖ್ಯಾತಿಯ ನಟ ಚೆಲುವರಾಜು ಹಾಗೂ ನಟಿ ವಿದ್ಯಾ ವಿಜಯ್ ಅಭಿನಯಿಸಿರುವ “ಮನಸು ಜಾರಿದೆ’ ಮ್ಯೂಸಿಕ್ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್ ಮುಂತಾದ ಗಣ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಟ ಪ್ರಣಯ ರಾಜ ಶ್ರೀನಾಥ್ ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ನಟ ಶ್ರೀನಾಥ್, “ಇಲ್ಲಿರುವವರೆಲ್ಲ ಬಹಳ ಚಿಕ್ಕವರು. ಈಗಿನ ಪೀಳಿಗೆಯವರು ನನಗೆ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಖುಷಿಯಾಗಿದೆ. ಚಿತ್ರರಂಗಕ್ಕೆ ನಿರಂತರವಾಗಿ ಹೊಸಬರು ಬರುತ್ತಿರಬೇಕು. ಹಾಗಾದಾಗ ಮಾತ್ರ ಚಿತ್ರರಂಗ ಕ್ರಿಯಾಶೀಲವಾಗಿರುತ್ತದೆ’ ಎಂದರು