ಮೆಂಟಲ್ ಮಂಜನ ಹೊಸ ಟಿಕ್ಟಾಕ್
ನ್ಯೂ ಲುಕ್ನೊಂದಿಗೆ ಅರ್ಜುನ ಆಗಮನ
Team Udayavani, Nov 25, 2019, 6:01 AM IST
ಈ ಹಿಂದೆ “ಮೆಂಟಲ್ ಮಂಜ’ ಚಿತ್ರದ ಮೂಲಕ ಒಂದಷ್ಟು ಸುದ್ದಿ ಮಾಡಿದ್ದ ಹೀರೋ ಅರ್ಜುನ್, ಆ ನಂತರ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸಿನಿಮಾಗಳಿಂದ ಸ್ವಲ್ಪ ದೂರವೇ ಉಳಿದಿದ್ದರು. ಈಗ ಒಂದು ದೊಡ್ಡ ಗ್ಯಾಪ್ ತೆಗೆದುಕೊಂಡು ಪುನಃ ಗಾಂಧಿನಗರದ ಅಂಗಳಕ್ಕೆ ಜಿಗಿಯುತ್ತಿದ್ದಾರೆ. ಹೌದು, ಅರ್ಜುನ್ ಈಗ ಹೊಸ ಚಿತ್ರದ ಮೂಲಕ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಟಿಕ್ ಟಾಕ್ ಗಣೇಶ’ ಎಂದು ಹೆಸರಿಡಲಾಗಿದೆ.
ವಿ3 ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಸತೀಶ್ ಗುಬ್ಬಚ್ ಕಥೆ ಬರೆದಿದ್ದಾರೆ. ವಿ3 ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನೂ ವಿ3 ಹೊತ್ತಿದ್ದಾರೆ. ಇದೊಂದು ಎಲ್ಲಾ ಬಗೆಯ ಅಂಶಗಳಿರುವ ಪ್ಯಾಕೇಜ್ ಚಿತ್ರ ಎಂಬುದು ಚಿತ್ರತಂಡದ ಹೇಳಿಕೆ. ಇಲ್ಲಿ ಲವ್ ಇದೆ, ಹಾಸ್ಯ ಮೇಳೈಸಲಿದೆ. ಇವೆಲ್ಲದರ ಜೊತೆಯಲ್ಲಿ ಆ್ಯಕ್ಷನ್ಗೂ ಜಾಗ ಕಲ್ಪಿಸಲಾಗಿದೆ.
ಒಟ್ಟಾರೆ, ಸಿನಿಮಾ ನೋಡುವ ಮಂದಿಗೆ ಎರಡು ಗಂಟೆ ಮನರಂಜನೆಯ ಪಾಕ ಈ ಚಿತ್ರದಲ್ಲಿ ಸಿಗಲಿದೆ. ಈಗಿನ ಟ್ರೆಂಡ್ಗೆ ಬೇಕಾದಂತಹ ಅಂಶಗಳನ್ನು ಇಲ್ಲಿ ಸೇರಿಸಿ, ಒಂದು ಭರಪೂರ ಹಾಸ್ಯದೊಂದಿಗೆ ಚಿತ್ರ ಕೊಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಾರೆ ನಿರ್ದೇಶಕ ವಿ3. ನಾಯಕ ಅರ್ಜುನ್ ಅವರಿಗೆ ಶುಭರಕ್ಷಾ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶಾನ್ವಿ ಪೊನ್ನಮ್ಮ ಕೂಡ ಮತ್ತೂಬ್ಬ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ನಿಖಿತಾ, ಅಮೃತಾ, ಮಮತಾ, ನೀರಜ್, “ಟಿಕ್ ಟಾಕ್ ವಿನುತಾ, “ಟಿಕ್ ಟಾಕ್ ಧನಲಕ್ಷ್ಮಿ, ಶಶಿಧರ್, ಸುಬ್ಬಯ್ಯ ಪೃಥ್ವಿ ಸೇರಿದಂತೆ ಅನೇಕ ಹೊಸ ಪ್ರತಿಭೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಚಿತ್ರಕ್ಕೆ ವೀರ್ಸಮರ್ಥ್ ಅವರ ಸಂಗೀತವಿದೆ. ನಿರ್ದೇಶಕ ವಿ3 ಹಾಗು ಸಾಯಿಸಾಗರ್ ಸಾಹಿತ್ಯವಿದೆ. ಲಕ್ಷ್ಮೀಕಾಂತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಜೈ ನೃತ್ಯ ನಿರ್ದೇಶನ ಮಾಡಿದರೆ, ಆನಂದ್ ಅವರ ಕಲಾನಿರ್ದೇಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ