![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಪ್ರಜ್ವಲ್ ಹುಟ್ಟುಹಬ್ಬಕ್ಕೆ ಡಬ್ಬಲ್ ಗಿಫ್ಟ್
Team Udayavani, Jul 5, 2018, 5:29 PM IST
![prajwal.jpg](https://www.udayavani.com/wp-content/uploads/2018/07/5/prajwal.jpg)
ಪ್ರಜ್ವಲ್ ದೇವರಾಜ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಎಂದಿನಂತೆ ಅವರ ಹಲವು ಅಭಿಮಾನಿಗಳು ಮನೆಯ ಹತ್ತಿರ ಬಂದು, ಪ್ರಜ್ವಲ್ರಿಂದ ಕೇಕ್ ಕಟ್ ಮಾಡಿಸಿ, ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದಲ್ಲದೆ ಪ್ರಜ್ವಲ್ ಕುಟುಂಬದವರು, ಆಪ್ತರು, ಸ್ನೇಹಿತರು, ಚಿತ್ರತಂಡದವರು … ಅದೆಷ್ಟು ಕೇಕ್ಗಳನ್ನು ತಂದಿದ್ದರೋ, ಒಂದು ದಿನದಲ್ಲಿ ಪ್ರಜ್ವಲ್ ಅದೆಷ್ಟು ಕೇಕ್ಗಳನ್ನು
ಕತ್ತರಿಸಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮೊನ್ನೆಯಿಂದಲೇ ಪ್ರಜ್ವಲ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿದೆ.
ಈ ಮಧ್ಯೆ ಪ್ರಜ್ವಲ್ ಅಭಿನಯದ ಎರಡು ಚಿತ್ರಗಳ ತಂಡದವರು, ಪ್ರಜ್ವಲ್ಗೆ ತಮ್ಮದೇ ರೀತಿಯಲ್ಲಿ ಗಿಫ್ಟ್ ಕೊಟ್ಟಿದ್ದಾರೆ. ಈ ಪೈಕಿ “ಇನ್ಸ್ಪೆಕ್ಟರ್ ವಿಕ್ರಮ್’ ತಂಡದವರು ಮಂಗಳವಾರ ಚಿತ್ರದ ಟೀಸರ್ ಬಿಡುಗಡೆ ಮಾಡಿದರೆ, “ಜಂಟಲ್ವುನ್’ ತಂಡದವರು ಚಿತ್ರದ ಮುಹೂರ್ತ ಮಾಡಿದ್ದಾರೆ.
ಪ್ರಜ್ವಲ್ ಹುಟ್ಟುಹಬ್ಬಕ್ಕೆ ಕಾಣಿಕೆಯಾಗಿ ಅರ್ಪಿಸಲಾದ “ಇನ್ಸ್ಪೆಕ್ಟರ್ ವಿಕ್ರಮ್’ ಚಿತ್ರದ ಟೀಸರ್, ಕಲಾವಿದರ ಸಂಘದ ಕಟ್ಟಡದಲ್ಲಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪ್ರಜ್ವಲ್ ತಂದೆ ಹಾಗೂ ಹಿರಿಯ ನಟ ದೇವರಾಜ್, ತಾಯಿ ಚಂದ್ರಲೇಖ, ತಮ್ಮ ಪ್ರಣಾಮ್ ಸೇರಿದಂತೆ ಹಲವರು ಇದ್ದರು.
ಇಲ್ಲಿಂದ ಕೇಕು ಕತ್ತರಿಸುವುದಕ್ಕೆ ಪ್ರಾರಂಭವಾಯ್ತು. ಇನ್ನು ಹುಟ್ಟುಹಬ್ಬದ ದಿನವೇ ಪ್ರಜ್ವಲ್ ಹೊಸ ಚಿತ್ರ “ಜಂಟಲ್ವುನ್’ ಪ್ರಾರಂಭವಾಗಿದೆ. ಈ ಚಿತ್ರದ ಮುಹೂರ್ತಕ್ಕೆ ದರ್ಶನ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ದೇವರಾಜ್ ಕ್ಯಾಮೆರಾ ಆನ್ ಮಾಡಿದರು. ಬನಶಂಕರಿ 2ನೇ ಹಂತದಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನ ದಲ್ಲಿ ನಡೆದ ಈ ಮುಹೂರ್ತ ಸಮಾರಂಭದಲ್ಲೂ ಕೇಕು ಕತ್ತರಿಸಲಾಯಿತು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.