Kannada Cinema; ‘ಮತ್ಸ್ಯಗಂಧ’ ಮೂಲಕ ಸಂಗೀತ ನಿರ್ದೇಶಕನಾದ ಪ್ರಶಾಂತ್ ಸಿದ್ದಿ
Team Udayavani, Jan 12, 2024, 5:14 PM IST
ಸಿನಿಮಾ ಕ್ಷೇತ್ರವೇ ಹಾಗೆ. ಇಲ್ಲಿ ನಟನಾಗಿ ಬಂದವರು ನಿರ್ದೇಶಕರಾಗಿದ್ದಾರೆ. ನಿರ್ಮಾಣದ ಕನಸು ಕಂಡವರು ಹೀರೋ ಆಗಿದ್ದಾರೆ, ಸಂಗೀತ ನಿರ್ದೇಶನ ಮಾಡಲು ಬಂದವರು ಸಿನಿಮಾದ ಇನ್ಯಾವುದೋ ವಿಭಾಗದಲ್ಲಿ ಕ್ಲಿಕ್ ಆಗಿದ್ದಾರೆ. ಈಗ ಈ ವಿಚಾರ ಯಾಕೆ ಎಂದು ನೀವು ಕೇಳಬಹುದು. ನಟನಾಗಿ ಹಲವು ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುವ ಪ್ರಶಾಂತ್ ಸಿದ್ಧಿ ಈಗ ಸಂಗೀತ ನಿರ್ದೇಶನದ ಕಡೆಗೆ ವಾಲಿದ್ದಾರೆ. ಸದ್ದಿಲ್ಲದೇ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಈಗ ಆ ಸಿನಿಮಾದ ಹಾಡುಗಳು ಸದ್ದು ಮಾಡುತ್ತಿವೆ.
ಹೌದು, ಪ್ರಶಾಂತ್ ಸಿದ್ಧಿ “ಮತ್ಸ್ಯಗಂಧ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ಈ ಕುರಿತು ಮಾತನಾಡುವ ಅವರು, “ನಾನು ಇವತ್ತು ಸಂಗೀತ ನಿರ್ದೇಶನ ಮಾಡಲು ಕಾರಣ ನಮ್ಮ ಅಮ್ಮ. ನಮ್ಮ ಸಿದ್ಧಿ ಜನಾಂಗದಲ್ಲಿ ಸಂಗೀತದ ಆಸಕ್ತಿ ಜಾಸ್ತಿ. ನಮ್ಮ ಅಮ್ಮ ರಂಗಭೂಮಿಯಲ್ಲಿ ಹಾಡುತ್ತಿದ್ದರು. ಬಾಲ್ಯದಿಂದಲೇ ಅವರ ಹಾಡನ್ನು ಗುನುಗುತ್ತಾ ಬಂದ ನನಗೆ ಸಂಗೀತದ ಆಸಕ್ತಿ ಮನದಲ್ಲಿತ್ತು’ ಎನ್ನುತ್ತಾರೆ ಪ್ರಶಾಂತ್.
ಇನ್ನು, “ಮತ್ಸ್ಯಗಂಧ’ ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಅವರ ಮುಂದೆ ಒಂದೆರಡು ಹಾಡುಗಳನ್ನು ಹಾಡಿದರಂತೆ. ಅದನ್ನು ಕೇಳಿ ಖುಷಿಯಾದ ತಂಡ, “ಈ ಚಿತ್ರಕ್ಕೆ ನೀವೇ ಸಂಗೀತ ನಿರ್ದೇಶನ ಮಾಡಿ’ ಎಂದಿತ್ತಂತೆ. ಅಲ್ಲಿಂದ ಆರಂಭವಾದ ಜರ್ನಿ ಈಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ ಎನ್ನುತ್ತಾರೆ.
ಹಾಡಿನಲ್ಲಿ ದೇಸಿ ರುಚಿಯನ್ನು ಉಣಬಡಿಸಿದ್ದು, ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ಮುಂದಿನ ದಿನಗಳಲ್ಲಿ ಸಂಗೀತ ಹಾಗೂ ನಟನೆಯನ್ನು ಜೊತೆಯಾಗಿ ತೂಗಿಸಿಕೊಂಡು ಹೋಗುವ ಯೋಚನೆ ಪ್ರಶಾಂತ್ ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…