ಪ್ರಿಯಾ ಹಾಸನ್ ಕಂಬ್ಯಾಕ್!
Team Udayavani, Oct 30, 2017, 10:27 AM IST
ನಟಿ, ನಿರ್ಮಾಪಕಿ, ನಿರ್ದೇಶಕಿ ಪ್ರಿಯಾಹಾಸನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮದುವೆಯಾಗಿದ್ದ ಪ್ರಿಯಾಹಾಸನ್, ಸಿನಿಮಾ ರಂಗದಿಂದ ತುಸು ದೂರವಿದ್ದರು. ಹಾಗಂತ, ಅವರು ಸಿನಿಮಾ ಚಟುವಟಿಕೆಗಳನ್ನೇ ನಿಲ್ಲಿಸಿದ್ದರು ಅಂದರ್ಥವಲ್ಲ. ಅವರೀಗ ಪುನಃ ಗಾಂಧಿನಗರಕ್ಕೆ ಎಂಟ್ರಿಕೊಡುತ್ತಿದ್ದಾರೆ. ಆದರೆ, ಹೊಸ ಸಿನಿಮಾ ಮೂಲಕವಲ್ಲ. ಅವರ “ಸ್ಮಗ್ಲರ್’ ಮೂಲಕ.
ಹೌದು, ಪ್ರಿಯಾಹಾಸನ್ ತಮ್ಮ ವರ್ಷಗಳ “ಸ್ಮಗ್ಲರ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ನವೆಂಬರ್ನಲ್ಲಿ “ಸ್ಮಗ್ಲರ್’ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರ ಲೇಟ್ ಆಗಿದೆ. ಅದಕ್ಕೆ ಕಾರಣ, ಅವರ ತಾಯಿ ನಿಧನರಾಗಿದ್ದು. ಪ್ರತಿ ಹಂತದಲ್ಲೂ ತಾಯಿ ಜತೆಗಿರುತ್ತಿದ್ದರು. ಎಲ್ಲಾ ಕೆಲಸಗಳು ಆಗ ಜೋರಾಗಿಯೇ ನಡೆಯುತ್ತಿದ್ದವು. ತಾಯಿ ಕಳೆದುಕೊಂಡ ಬಳಿಕ ಪ್ರಿಯಾಹಾಸನ್ ಮಾನಸಿಕವಾಗಿ ಕುಗ್ಗಿದ್ದರು.
ಹಾಗಾಗಿ, ಯಾವುದರ ಕಡೆಯೂ ಹೆಚ್ಚು ಗಮನ ಕೊಡಲಾಗದೆ “ಸ್ಮಗ್ಲರ್’ ಕೂಡ ಲೇಟ್ ಆಗಿದ್ದುಂಟು ಎಂಬುದು ಅವರ ಮಾತು. “ಸ್ಮಗ್ಲರ್’ ಚಿತ್ರವನ್ನು ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದು, ಈಗಾಗಲೇ ಕೆಲವು ಏರಿಯಾಗಳಿಗೆ ಚಿತ್ರ ಬೇಕು ಎಂಬ ಬೇಡಿಕೆ ಕೂಡ ಬಂದಿದೆ. ಬಿಕೆಟಿಗೆ ಏರಿಯಾಗಳಿಗೆ ನಾನೇ ರಿಲೀಸ್ ಮಾಡುತ್ತಿದ್ದೇನೆ.
ಇದೊಂದು ಆ್ಯಕ್ಷನ್ ಚಿತ್ರ. ಇದುವರೆಗೆ ನಟಿ, ನಿರ್ಮಾಪಕಿ, ನಿರ್ದೇಶಕಿಯಾಗಿದ್ದೆ. ಈ ಚಿತ್ರದ ಮೂಲಕ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದೇನೆ. ಹಲವರಿಂದ ನನ್ನ ಹಾಡಿಗೆ ಮೆಚ್ಚುಗೆಯೂ ಸಿಕ್ಕಿದೆ. ನಾನು ಹಾಡು ಹಾಡುತ್ತಿದ್ದಂತೆಯೇ ಬೇರೆ ಚಿತ್ರಗಳಿಂದಲೂ ಹಾಡೋಕೆ ಅವಕಾಶ ಬಂತು. ಆದರೆ, ನನ್ನ ಚಿತ್ರದಲ್ಲೇ ಬಿಜಿಯಾಗಿದ್ದರಿಂದ ಸಾಧ್ಯವಾಗಿಲ್ಲ.
ಮುಂದೆ ಅವಕಾಶ ಸಿಕ್ಕರೆ, ಬೇರೆ ಚಿತ್ರದಲ್ಲೂ ಹಾಡ್ತೀನಿ. ಬೇರೆ ಬ್ಯಾನರ್ನಲ್ಲೂ ಒಳ್ಳೆಯ ಕಥೆ, ಪಾತ್ರ ಇದ್ದರೆ, ನಟಿಸುತ್ತೇನೆ. ಅನೇಕರು ಪ್ರಿಯಾಹಾಸನ್ ತಮ್ಮ ಬ್ಯಾನರ್ನಲ್ಲೇ ಸಿನಿಮಾ ಮಾಡಿಕೊಂಡಿದ್ದಾರೆ. ಬೇರೆ ಬ್ಯಾನರ್ನಲ್ಲಿ ನಟಿಸುವುದಿಲ್ಲ ಅಂದುಕೊಂಡಿದ್ದಾರೆ. ನಾನು ನನ್ನ ಬ್ಯಾನರ್ನಲ್ಲಿ ಏಳು ಚಿತ್ರ ಮಾಡಿದ್ದೇನೆ. ಮುಂದೆ, ಬೇರೆಯವರ ಚಿತ್ರದಲ್ಲೂ ನಟಿಸಲು ಸಿದ್ಧ.
ಆದರೆ, ನನಗೆ ಕಥೆ, ಪಾತ್ರ ಇಷ್ಟವಾಗಬೇಕಷ್ಟೇ’ ಎನ್ನುತ್ತಾರೆ. “ಸ್ಮಗ್ಲರ್’ ಚಿತ್ರದಲ್ಲಿ ಸುಮನ್, ರವಿಕಾಳೆ, ಸಯ್ನಾಜಿ ಶಿಂಧೆ, ರಮಣ, ಮಿತ್ರ, ಗಿರಿಜಾಲೋಕೇಶ್, ರಮೇಶ್ಭಟ್ ಸೇರಿದಂತೆ ಹಲವು ಕಲಾವಿದರಿದ್ದಾರೆ. “ಸ್ಮಗ್ಲರ್’ ಬಳಿಕ “ಗಂಡುಬೀರಿ’ ಶುರುವಾಗಲಿದೆ. ಆದರೆ, ಈ ಚಿತ್ರ ಬೇಗ ಚಿತ್ರೀಕರಣಗೊಂಡು, ತೆರೆಗೆ ಬರಲಿದೆ ಎನ್ನುತ್ತಾರೆ ಪ್ರಿಯಾಹಾಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ