“ತೂಗುದೀಪ ದರ್ಶನ’ಕ್ಕೆ ಪುನೀತ್ ಸಾಥ್
ಮೀನಾ ತೂಗುದೀಪ ಹಂಚಿಕೊಂಡ ಹಲವು ವಿಷಯಗಳು ದಾಖಲು
Team Udayavani, Mar 9, 2020, 7:00 AM IST
ತೂಗುದೀಪ ಫ್ಯಾಮಿಲಿ ಕುರಿತಾದ “ತೂಗುದೀಪ ದರ್ಶನ’ ಎಂಬ ಪುಸ್ತಕವೊಂದು ಸಿದ್ಧವಾಗಿದೆ. ಪತ್ರಕರ್ತ ವಿನಾಯಕರಾಮ್ ಕಲಗಾರು ಅವರು ಬರೆದಿರುವ ಈ ಪುಸ್ತಕದ ಮುಖಪುಟವನ್ನು ಇತ್ತೀಚೆಗೆ ನಟ ಪುನೀತ್ ರಾಜ್ಕುಮಾರ್ ಅವರು ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಈ ಪುಸ್ತಕದಲ್ಲಿ ಮೀನಾ ತೂಗುದೀಪ ಅವರು ತಮ್ಮ ಕಲಾ ಕುಟುಂಬದ ಆರಂಭದ ದಿನಗಳಿಂದ ಹಿಡಿದು ಹಲವು ಅಪರೂಪದ ಹಾಗು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಕುರಿತಾದ ಅಪರೂಪದ ಘಟನೆಗಳು, ದರ್ಶನ್ ಅವರ ಸಿನಿಮಾ ಹಾದಿ, ಆ ಹಾದಿ ಯಲ್ಲಿ ಎದುರಾದ ಸವಾಲುಗಳು, ಸಮಸ್ಯೆಗಳು … ಹೀಗೆ ಹಲವು ಅಂಶಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಇದು ಮೊದಲ ವರ್ಶನ್ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಬೆನ್ನಿಗೆ ಮತ್ತೂಂದು ವರ್ಶನ್ ತರುವ ತಯಾರಿಯಲ್ಲಿದ್ದಾರೆ ಲೇಖಕ ವಿನಾಯಕರಾಮ್ ಕಲಗಾರು. ಅಂದಹಾಗೆ, ಈ ಪುಸ್ತಕ ಶ್ರೀನಿವಾಸ್ ಅವರ ಜೋಹಾರ್ ಪ್ರಕಾಶನದಿಂದ ಹೊರಬರುತ್ತಿರುವುದು ವಿಶೇಷ. ಈಗಾಗಲೇ ಸಾಕಷ್ಟು ಸಿನಿಮಾ ಗಣ್ಯರು, ನಟರು, ಪುಸ್ತಕ ಬಗ್ಗೆ ಮಾತನಾಡಿದ್ದು, ದರ್ಶನ್ ಅಭಿಮಾನಿಗಳಲ್ಲಿ ಪುಸ್ತಕ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ