ಸಾರ್ವಜನಿಕರಲ್ಲಿ ವಿನಂತಿ ಚಿತ್ರ ಪೂರ್ಣ
Team Udayavani, Oct 3, 2018, 11:37 AM IST
ದಿನ ಕಳೆದಂತೆ ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆ ಇರುವಂತಹ ಚಿತ್ರಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈಗ “ಸಾರ್ವಜನಿಕರಲ್ಲಿ ವಿನಂತಿ’ ಎಂಬ ಚಿತ್ರವೂ ಸೇರಿದೆ. ಈಗಾಗಲೇ ಈ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಅಪರಾಧ ಹಿನ್ನೆಲೆಯಲ್ಲಿ ಸಾಗುವ ಕಥೆ.
ಕೇವಲ ಕೊಲೆಗಡುಕರು, ಕಳ್ಳರು ಮಾತ್ರ ಕ್ರಿಮಿನಲ್ಸ್ ಆಗಿರುವುದಿಲ್ಲ. ನಮ್ಮ ಎದುರು ವಿನಯದಿಂದ ವರ್ತಿಸುತ್ತಾ, ಬೆನ್ನಹಿಂದೆ ಮೋಸ ಮಾಡುವವರು ನಿಜವಾದ ಅಪರಾದಿಗಳಾಗಿರುತ್ತಾರೆ. ಅಂತಹವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂಬ ಸಂದೇಶದ ಚಿತ್ರವಿದು.
ಈ ಚಿತ್ರವನ್ನು ಕೃಪಸಾಗರ್ ನಿರ್ದೇಶಿಸಿದ್ದಾರೆ. ಗೊರವನಹಳ್ಳಿ, ತುಮಕೂರು, ತಲಕಾಡು, ಹಿರೆನಲ್ಲೂರು, ಶಿವಮೊಗ್ಗ, ತೀರ್ಥಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನಾಗೇಂದ್ರಪ್ರಸಾದ್, ಭರ್ಜರಿ ಚೇತನ್ ಗೀತೆ ರಚಿಸಿದ್ದಾರೆ. ಅನಿಲ್ ಸಂಗೀತವಿದೆ. ಮದನ್ರಾಜ್ ಚಿತ್ರದ ನಾಯಕ.
ಅವರಿಗೆ ಅಮೃತ ನಾಯಕಿ ಇವರೊಂದಿಗೆ ರಮೇಶ್ ಪಂಡಿತ್, ಮಂಡ್ಯ ರಮೇಶ್, ನಾಗೇಶ್ಮಯ್ನಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ನಟಿಸಿದ್ದಾರೆ. ಅನಿಲ್ಕುಮಾರ್ ಛಾಯಗ್ರಹಣ ಮತ್ತು ಸಂಕಲನವಿದೆ. ನಿರ್ದೇಶಕ ಯೋಗರಾಜಭಟ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಉಷಾ ನಂಜುಂಡರಾವ್ ನಿರ್ಮಾಪಕರು.