Sapta Sagaradaache Ello… ರಾಜ್ಯಾದ್ಯಂತ ಗೆಲುವಿನ ಸುತ್ತಾಟ
Team Udayavani, Sep 8, 2023, 11:31 AM IST
ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಸೆ.01ರಂದು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ನೋಡಿದವರು ಇದೊಂದು ಸೆಂಟಿಮೆಂಟ್ ಲವ್ಸ್ಟೋರಿ ಎನ್ನುತ್ತಾ ಕಣ್ಣಂಚು ಒದ್ದೆ ಮಾಡುತ್ತಿದ್ದಾರೆ. ಈಗ ಚಿತ್ರತಂಡ ಇದೇ ಖುಷಿಯಲ್ಲಿ ರಾಜ್ಯ ಸುತ್ತುತ್ತಿದೆ. ಪ್ರತಿ ಊರುಗಳ ಚಿತ್ರಮಂದಿರಗಳಿಗೆ ತೆರಳಿ ಅಲ್ಲಿನ ಪ್ರೇಕ್ಷಕರೊಂದಿಗೆ ಕೆಲ ಹೊತ್ತು ಸಮಯ ಕಳೆಯುತ್ತಿದೆ. ಪ್ರೇಕ್ಷ ಕರು ಕೂಡಾ ತಾವು ತೆರೆಮೇಲೆ ಇಷ್ಟಪಟ್ಟ ಜೋಡಿಯನ್ನು ಹತ್ತಿರದಿಂದ ನೋಡಿ ಸಂಭ್ರಮಿಸುತ್ತಿದ್ದಾರೆ.
ಚಿತ್ರತಂಡ ಈಗಾಗಲೇ ಮಂಡ್ಯ, ಮೈಸೂರುಗೆ ಭೇಟಿ ನೀಡಿದ್ದು, ಗುರುವಾರ ಉಡುಪಿ, ಮಣಿಪಾಲ ಹಾಗೂ ಕುಂದಾಪುರಕ್ಕೆ ತೆರಳಿದೆ. ಇಂದು ಮಂಗಳೂರು ನಗರದ ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಬೆರೆಯಲಿದೆ.
ಸೆ.09ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಅಲ್ಲಿಂದ ಹುಬ್ಬಳ್ಳಿ, ಧಾರಾವಾಡ, ಬೆಳಗಾಂ, ದಾವಣಗೆರೆ, ತುಮಕೂರು ಮುಗಿಸಿಕೊಂಡು ಸೆ.12ರ ನಂತರ ಬೆಂಗಳೂರಿಗೆ ಮರಳಲಿದೆ.
ಸದ್ಯ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಹಿಟ್ ಆಗಿರುವುದು ಕೇವಲ ಆ ತಂಡಕ್ಕಷ್ಟೇ ಖುಷಿಕೊಟ್ಟಿಲ್ಲ. ಬದಲಾಗಿ ಕನ್ನಡ ಚಿತ್ರರಂಗದ ಸಿನಿಮಾ ಮಂದಿಯೂ ನಿಟ್ಟುಸಿರು ಬಿಟ್ಟಿದ್ದಾರೆ. ಯಾವುದೇ ಒಂದು ಸಿನಿಮಾ ಹಿಟ್ ಆದರೂ ಅದರ ಫಲ ಇಡೀ ಚಿತ್ರರಂಗಕ್ಕೆ ಸಿಗುತ್ತದೆ. ಒಳ್ಳೆಯ ಸಿನಿಮಾಗಳಿಗೆ ಜನ ಬರುತ್ತಾರೆ ಎಂಬುದು ಸಾಬೀತಾಗುತ್ತದೆ ಕೂಡಾ. ಅದೇ ಕಾರಣದಿಂದ “ಸಪ್ತ’ ಗೆಲುವನ್ನು ಕೆಲವರು ದೂರದಿಂದಲೇ ಸಂಭ್ರಮಿಸುತ್ತಿದ್ದಾರೆ.
ಇನ್ನು, “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಮನು ಹಾಗೂ ಪ್ರಿಯಾಳ ಲವ್ಸ್ಟೋರಿ ಸುತ್ತ ಸಾಗುವ ಸಿನಿಮಾ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸುವ ಜೊತೆಗೆ ತಮ್ಮ ಪರಂವ ಬ್ಯಾನರ್ನಡಿ ನಿರ್ಮಿಸಿದ್ದಾರೆ ಕೂಡಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!