ಆಕಾಶ್‌ ಕಣ್ಣಲ್ಲಿ “ಶಿವಾಜಿ ಸುರತ್ಕಲ್‌-2′ ಕನಸು


Team Udayavani, Mar 5, 2020, 7:02 AM IST

shivaji

ಇದೇ ಫೆ.21ರಂದು ತೆರೆಗೆ ಬಂದಿದ್ದ ನಟ ರಮೇಶ್‌ ಅರವಿಂದ್‌ ಅಭಿನಯದ “ಶಿವಾಜಿ ಸುರತ್ಕಲ್‌’ ಚಿತ್ರ ಈಗ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಆರಂಭದಲ್ಲಿ ಸುಮಾರು 87 ಕೇಂದ್ರಗಳಲ್ಲಿ ತೆರೆಕಂಡಿದ್ದ “ಶಿವಾಜಿ ಸುರತ್ಕಲ್‌’ ಮೂರನೇ ವಾರದ ಹೊತ್ತಿಗೆ ಸುಮಾರು 130 ಕೇಂದ್ರಗಳಿಗೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಪ್ರದರ್ಶನ ಕಾಣುತ್ತಿದೆ. ಈ ಬೆಳವಣಿಗೆ ಸಹಜವಾಗಿಯೇ ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ.

“ಶಿವಾಜಿ ಸುರತ್ಕಲ್‌’ ಯಶಸ್ವಿ ಪ್ರದರ್ಶನದ ಖುಷಿಯನ್ನು “ಉದಯವಾಣಿ’ ಜೊತೆಗೆ ಹಂಚಿಕೊಂಡ ಚಿತ್ರದ ನಿರ್ದೇಶಕ ಆಕಾಶ್‌ ಶ್ರೀವತ್ಸ, “ಸುಮಾರು ಎರಡು ವರ್ಷಗಳ ಕಾಲ ಸಾಕಷ್ಟು ಶ್ರಮಪಟ್ಟು “ಶಿವಾಜಿ ಸುರತ್ಕಲ್‌’ ಸಿನಿಮಾವನ್ನು ಮಾಡಿದ್ದೇವು. ಬಿಡುಗಡೆಯ ನಂತರ ಸಿನಿಮಾಕ್ಕೆ ಆಡಿಯನ್ಸ್‌ ಕಡೆಯಿಂದ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆ, ನಮ್ಮ ಪ್ರರಿಶ್ರಮಕ್ಕೆ ಫ‌ಲ ಸಿಗುತ್ತಿದೆ ಎಂದು ಖುಷಿಯಾಗುತ್ತದೆ.

ಇನ್ನು “ಶಿವಾಜಿ ಸುರತ್ಕಲ್‌’ ರಿಲೀಸ್‌ ಆದ ಮೊದಲ ವಾರದಿಂದ ಎರಡನೇ ವಾರಕ್ಕೆ ಮತ್ತು ಎರಡನೇ ವಾರದಿಂದ ಈಗ ಮೂರನೇ ವಾರಕ್ಕೆ ಥಿಯೇಟರ್‌ಗಳ ಸಂಖ್ಯೆಯಲ್ಲಿ ಮತ್ತು ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿದೆ. ಸಿಂಗಲ್‌ ಸ್ಕ್ರೀನ್‌, ಮಲ್ಟಿಫ್ಲೆಕ್ಸ್‌ ಎಲ್ಲ ಕಡೆಯೂ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ’ ಎಂಬ ಮಾಹಿತಿ ನೀಡುತ್ತಾರೆ. ಇನ್ನು ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರದ ಪಾತ್ರಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡುವ ಆಕಾಶ್‌ ಶ್ರೀವತ್ಸ, “ಸಿನಿಮಾ ನೋಡಿದ ಆಡಿಯನ್ಸ್‌ ರಮೇಶ್‌ ಅರವಿಂದ್‌ ಅವರನ್ನು ಇಲ್ಲಿಯವರೆಗೆ ಈ ಥರದ ಪಾತ್ರಗಳಲ್ಲಿ ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ರಮೇಶ್‌ ಅರವಿಂದ್‌ ಸಿನಿಮಾ ಕೆರಿಯರ್‌ನ 101ನೇ ಸಿನಿಮಾ ಇದಾಗಿದ್ದು, ಮೈಲಿಗಲ್ಲಾಗುತ್ತಿದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳನ್ನು ಕೂಡ ಜನ ಗುರುತಿಸಿ ಮಾತನಾಡುತ್ತಿದ್ದಾರೆ’ ಎನ್ನುತ್ತಾರೆ.

“ಶಿವಾಜಿ ಸುರತ್ಕಲ್‌’ ಸದ್ಯ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವಂತೆಯೇ, ಚಿತ್ರವನ್ನು ನೋಡಿದ ಪ್ರೇಕ್ಷಕರು “ಶಿವಾಜಿ ಸುರತ್ಕಲ್‌-2′ ಚಿತ್ರ ಯಾವಾಗ ಅಂಥ ಕೇಳುತ್ತಿದ್ದಾರಂತೆ. “”ಶಿವಾಜಿ ಸುರತ್ಕಲ್‌’ ಸಿನಿಮಾ ನೋಡಿದವರು, ಈ ಸಿನಿಮಾವನ್ನು ಇನ್ನೂ ಮುಂದುವರೆಸಬಹುದು. “ಶಿವಾಜಿ ಸುರತ್ಕಲ್‌-2′ ಸಿನಿಮಾ ಏನಾದ್ರೂ ಮಾಡುವ ಪ್ಲಾನ್‌ ಇದೆಯಾ? ಇದ್ದರೆ ಯಾವಾಗ ಮಾಡ್ತೀರಾ? ಇದೇ ಟೀಮ್‌ ಇರುತ್ತಾ..? ಅಂಥೆಲ್ಲ ಕೇಳುತ್ತಿದ್ದಾರೆ.

ನಿಜ ಹೇಳಬೇಕು ಅಂದ್ರೆ, “ಶಿವಾಜಿ ಸುರತ್ಕಲ್‌’ ಸಿನಿಮಾ ಮಾಡುವಾಗಲೇ ಇದನ್ನು ಮತ್ತೂಂದು ಭಾಗದಲ್ಲಿ ಮುಂದುವರೆಸಿಕೊಂಡು ಹೋಗ್ಬೇಕು ಅಂಥ ಯೋಚನೆಯಿತ್ತು. ಇದೇ ಟೀಮ್‌ ಜೊತೆಯಲ್ಲಿ ಇಟ್ಟುಕೊಂಡು, ಇನ್ನೂ ದೊಡ್ಡ ಕ್ಯಾನ್ವಾಸ್‌ ಮಾಡಿಕೊಂಡು “ಶಿವಾಜಿ ಸುರತ್ಕಲ್‌’ ಮುಂದುವರೆಸಬೇಕು ಎಂಬ ಕನಸಂತೂ ಇದೆ. ಸದ್ಯ ಈಗಾಗಲೇ “ಶಿವಾಜಿ ಸುರತ್ಕಲ್‌’ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದರಿಂದ, ಸದ್ಯಕ್ಕೆ ನಮ್ಮ ಗಮನ ಈ ಸಿನಿಮಾವನ್ನು ಇನ್ನಷ್ಟು ಸಕ್ಸಸ್‌ ಮಾಡುವುದರ ಕಡೆಗಿದೆ.

ಮುಂದೆ ನಾಯಕ ನಟ ರಮೇಶ್‌ ಅರವಿಂದ್‌, ನಿರ್ಮಾಪಕರು, ರೈಟರ್ ಹೀಗೆ ನಮ್ಮ ಟೀಮ್‌ ಜೊತೆ ಚರ್ಚಿಸಿ ಈ ಬಗ್ಗೆ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್‌ ಶ್ರೀವತ್ಸ. ಅಂದಹಾಗೆ, ಸದ್ಯ ವಿದೇಶಗಳಲ್ಲೂ ಬಿಡುಗಡೆಯಾಗಿರುವ “ಶಿವಾಜಿ ಸುರತ್ಕಲ್‌’ ಆಸ್ಟ್ರೇಲಿಯಾದಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆಯಂತೆ. ಇದೇ ಮಾರ್ಚ್‌ 7-8ಕ್ಕೆ ಲಂಡನ್‌, ಕೆನಡಾ, ಯು.ಎಸ್‌, ಸ್ವೀಡನ್‌ ಸುಮಾರು 25-30 ಕೇಂದ್ರಗಳಲ್ಲಿ ಚಿತ್ರ ರಿಲೀಸ್‌ ಆಗುತ್ತಿದೆ ಎನ್ನುವ ಮಾಹಿತಿ ನೀಡಿದೆ ಚಿತ್ರತಂಡ.

ಟಾಪ್ ನ್ಯೂಸ್

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.