ಸ್ಟಾರ್‌ ಕನ್ಸರ್ನ್: ಒಂದೇ ಕಥೆ, ಮೂರು ಚಿತ್ರಗಳು!


Team Udayavani, May 20, 2017, 11:41 AM IST

tars-kansarns.jpg

ನಾಯಕ ವಿದೇಶದಲ್ಲೋ ಅಥವಾ ಪರವೂರಿನಲ್ಲೋ ಇರುತ್ತಾನೆ. ಸಡನ್ನಾಗಿ ಅವನ ಜೀವನದಲ್ಲಿ ಒಂದು ಬದಲಾವಣೆಯಾಗುತ್ತದೆ. ಆಗ ಅವನಿಗೊಂದು ವಿಷಯ ಜ್ಞಾನೋದಯವಾಗುತ್ತದೆ. ಹಾಗಾಗುತ್ತಿದ್ದಂತೆ ಆತ ಇರುವುದೆಲ್ಲವನ್ನು ಬಿಟ್ಟು ಇನ್ನೆಲ್ಲಾ ಹೋಗುತ್ತಾನೆ. ಜನರ ಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಅವರ ಪರವಾಗಿ ದೊಡ್ಡ ಹೋರಾಟವನ್ನೇ ಮಾಡುತ್ತಾನೆ ಮತ್ತು ಆ ಮೂಲಕ ಒಂದು ಕ್ರಾಂತಿಯನ್ನೇ ಮಾಡುತ್ತಾನೆ …

ಈ ಕಥೆ ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂದನಿಸಬಹುದು. ಕೇಳಿರುವುದಷ್ಟೇ ಅಲ್ಲ, ನೋಡಿರಲೂಬಹುದು. ಇತ್ತೀಚೆಗೆ ಬಂದ ಸುದೀಪ್‌ ಅಭಿನಯದ “ಹೆಬ್ಬುಲಿ’ ಮತ್ತು ಪುನೀತ್‌ ರಾಜಕುಮಾರ್‌ ಅಭಿನಯದ “ರಾಜಕುಮಾರ’ ಚಿತ್ರಗಳ ಕಥೆ ಇದೇ. ಅಷ್ಟೇ ಅಲ್ಲ, ನಿನ್ನೆ ಬಿಡುಗಡೆಯಾದ ಶಿವರಾಜಕುಮಾರ್‌ ಅಭಿನಯದ “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’ ಚಿತ್ರದ ಕಥೆಯೂ ಹೀಗೆ ಸಾಗುತ್ತದೆ. ಕಥೆಗಳೇನೋ ಒಂದೇ ರೀತಿ ಕೇಳಿಸಬಹುದು. ಆದರೆ, ಮೂರು ಚಿತ್ರಗಳ ಆಶಯ, ಉದ್ದೇಶ, ಕಾಳಜಿ ಎಲ್ಲವೂ ಬೇರೆಬೇರೆ. 

ಒಂದರಲ್ಲಿ ನಾಯಕ, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಗಬೇಕು ಎಂದು ಜನರಿಕ್‌ ಮೆಡಿಸನ್‌ಗಾಗಿ ಹೋರಾಟ ಮಾಡುತ್ತಾನೆ. ಇನ್ನೊಂದರಲ್ಲಿ ನಾಯಕ ವೃದ್ಧರಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಡುವುದರ ಜೊತೆಗೆ, ಅವರ ಕೊನೆಯ ದಿನಗಳ ಉಜ್ವಲವಾಗಿರಬೇಕೆಂದು ಹೋರಾಡುತ್ತಾನೆ. ಇನ್ನು “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’ದಲ್ಲಿ ನಾಯಕ ರೈತರ ಪರವಾಗಿ ನಿಂತು, ಅವರ ಹೋರಾಟಗಳಲ್ಲಿ ಭಾಗಿಯಾಗುವುದರ ಜೊತೆಗೆ ಆ ಹೋರಾಟದಲ್ಲೂ ಗೆದ್ದು,

-ರೈತರಿಗೆ ನ್ಯಾಯ ಕೊಡಿಸುತ್ತಾನೆ. ಮೂರೂ ಚಿತ್ರಗಳು ಬೇರೆ ದೇಶಗಳಲ್ಲಿ ಶುರುವಾಗಿ ಇಲ್ಲಿ ಮುಗಿಯುವುದಷ್ಟೇ ಅಲ್ಲ, ಒಂದು ಸಾಮಾಜಿಕ ಕ್ರಾಂತಿಯಾಗಿ, ಜನರೆಲ್ಲಾ ಪರಿವರ್ತನೆಯಾಗುವುದರ ಮೂಲಕ ಮುಗಿಯುತ್ತದೆ. ಹೀಗೂ ಆಗುವುದಕ್ಕೆ ಸಾಧ್ಯವಾ ಎಂಬ ಲಾಜಿಕಲ್‌ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಆಗ ಕನ್ನಡದಲ್ಲೊಂದು ಹೊಸ ತರಹದ ಪ್ರಯತ್ನ ಆಗುತ್ತಿರುವುದು ಗೊತ್ತಾಗುತ್ತದೆ. ಇದು ಹಿಂದೆ ಆಗಿಲ್ಲ ಅಂದೇನಲ್ಲ.

ಹಿಂದೆ ಸಹ ಎಲ್ಲಾ ಹೀರೋಗಳು ರಾಜಕೀಯ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಕ್ರಾಂತಿ ಮಾಡುವ ಚಿತ್ರಗಳಲ್ಲಿ ಅಭಿನಯಿಸಿದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಇತ್ತೀಚೆಗೆ ಅಂತಹ ಚಿತ್ರಗಳು ಕಡಿಮೆಯೆಂದೇ ಹೇಳಬಹುದು. ಒಂದು ಸಾಮಾಜಿಕ ಕ್ರಾಂತಿಗಿಂತ ವೈಯಕ್ತಿಕ ದ್ವೇಷ-ಕಲಹದ ಚಿತ್ರಗಳೇ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಶಿವರಾಜಕುಮಾರ್‌, ಸುದೀಪ್‌ ಮತ್ತು ಪುನೀತ್‌ ಬೇರೆ ತರಹದ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿ ಮಾದರಿಯಾಗಿದ್ದಾರೆ.

ಬೇರೆಯವರು ಮಾಡುವುದಕ್ಕಿಂತ ದೊಡ್ಡ ಸ್ಟಾರ್‌ಗಳು ಇಂಥದ್ದೊಂದು ಪ್ರಯತ್ನ ಮಾಡಿದರೆ, ಆಗ ಚಿತ್ರಗಳ ರೀಚ್‌ ಚೆನ್ನಾಗಿರುವುದರ ಜೊತೆಗೆ ಜನರಲ್ಲಿ ಜಾಗೃತಿ ಸಹ ಮೂಡುತ್ತದೆ. ಇನ್ನು ಇಂಥದ್ದೊಂದು ವಿಷಯವನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ಹೇಳುವುದು ಅಷ್ಟು ಸುಲಭದ ವಿಷಯವಲ್ಲ. ಆ ಪ್ರಯತ್ನವನ್ನು ಕೃಷ್ಣ, ಸಂತೋಷ್‌ ಆನಂದ್‌ರಾಮ್‌ ಮತ್ತು ಯೋಗಿ ಮಾಡಿದ್ದಾರೆ. ಹಾಗೆ ನೋಡಿದರೆ, ಈ ಮೂರೂ ಚಿತ್ರಗಳು ಅವರು ನಿರ್ದೇಶನ ಮಾಡಿದ ಎರಡನೆಯ ಚಿತ್ರಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ವಮೇಕ್‌ ಚಿತ್ರಗಳು ಎಂಬುದು ಗಮನಾರ್ಹ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.