ಸುದೀಪ್ಗೆ ಜುಲೈ 06 ಸೆಂಟಿಮೆಂಟ್
Team Udayavani, Jul 7, 2018, 11:27 AM IST
ಜುಲೈ 06 ನಟ ಸುದೀಪ್ ಕೆರಿಯರ್ನಲ್ಲಿ ಮಹತ್ವದ ದಿನ. ಆ ದಿನವನ್ನು ಅವರು ಮರೆಯಲು ಸಾಧ್ಯವಿಲ್ಲ. ಅದೇ ಕಾರಣದಿಂದ ಅವರು ಮರೆತಿಲ್ಲ. ನಿನ್ನೆ (ಜುಲೈ 06) ರಂದು ಅದರ ಮಹತ್ವವನ್ನು ಅವರು ಮೆಲುಕು ಹಾಕಿದ್ದಾರೆ. ಅಷ್ಟಕ್ಕೂ ಸುದೀಪ್ ಅವರಿಗೆ ಜುಲೈ 6 ರ ಮಹತ್ವವೇನು ಎಂದು ನೀವು ಕೇಳಬಹುದು.
ಅದಕ್ಕೆ ಉತ್ತರ “ಹುಚ್ಚ’ ಹಾಗೂ “ಈಗ’. ಸುದೀಪ್ ಅವರ “ಹುಚ್ಚ’ ಚಿತ್ರ 2001ರ ಜುಲೈ 06 ರಂದು ತೆರೆಕಂಡರೆ, ಅವರ ತೆಲುಗು ಚಿತ್ರ “ಈಗ’ 2012 ರ ಜುಲೈ 06ಕ್ಕೆ ಬಿಡುಗಡೆಯಾಗಿತ್ತು. ಈ ಎರಡು ಸಿನಿಮಾಗಳು ಸುದೀಪ್ ಕೆರಿಯರ್ನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ತಪ್ಪಲ್ಲ.
ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸುದೀಪ್ ಅವರ “ಹುಚ್ಚ’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಚಿತ್ರರಂಗದಲ್ಲಿ ಅವರದೇ ಆದ ಒಂದು ಸ್ಥಾನ ಸೃಷ್ಟಿಯಾಗುವಂತೆ ಮಾಡಿದರೆ, ನಟನಾಗಿ ಅವರನ್ನು ಮತ್ತೂಂದು ಲೆವೆಲ್ಗೆ ಕೊಂಡೊಯ್ಯಿದ ಚಿತ್ರ “ಈಗ’. ಅದೇ ಕಾರಣದಿಂದ ಸುದೀಪ್ ನಿನ್ನೆ ಈ ಎರಡು ಸಿನಿಮಾಗಳನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.
“ಹುಚ್ಚ’ ಹಾಗೂ “ಈಗ’ ಚಿತ್ರಗಳು ನನಗೆ ಈ ದಿನವನ್ನು (ಜುಲೈ 06) ವಿಶೇಷವನ್ನಾಗಿಸಿದೆ. “ಹುಚ್ಚ’ ನನ್ನನ್ನು ನಟನಾಗಿ ಗುರುತಿಸಿಕೊಳ್ಳುವಂತೆ, ನನ್ನ ರಾಜ್ಯದ ಜನರ ಹೃದಯದಲ್ಲಿ ಸ್ಥಾನ ಪಡೆಯುವಂತೆ ಮಾಡಿದರೆ, “ಈಗ’ ಚಿತ್ರ ನನ್ನನ್ನು ಜಗತ್ತಿಗೆ ಪರಿಚಯಿಸಿತು. ಆ ಕಾರಣದಿಂದ ಈ ದಿನ ಹಾಗೂ ಈ ಎರಡು ಚಿತ್ರಗಳು ನನಗೆ ತುಂಬಾನೇ ಸ್ಪೆಷಲ್’ ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್. ಸದ್ಯ ಸುದೀಪ್ ಅವರ “ಕೋಟಿಗೊಬ್ಬ-3′ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ