ಮುಂದಿನ ವರ್ಷ ಹರಿಪ್ರಿಯಾ ಅಭಿನಯದ ಏಳು ಚಿತ್ರಗಳ ಬಿಡುಗಡೆ
Team Udayavani, Dec 26, 2017, 11:51 AM IST
ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಎಂದರೆ ಅದು ಶ್ರುತಿ ಹರಿಹರನ್. ಶ್ರುತಿ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿದೆ. ವರ್ಷದ ಆರಂಭದಲ್ಲಿ ಮೊದಲಿಗೆ “ಬ್ಯೂಟಿಫುಲ್ ಮನಸುಗಳು’ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯವರೆಗೂ “ಊರ್ವಿ’, “ಹ್ಯಾಪಿ ನ್ಯೂ ಇಯರ್’, “ವಿಸ್ಮಯ’, “ತಾರಕ್’ ಮತ್ತು “ಉಪೇಂದ್ರ ಮತ್ತೆ ಬಾ’ ಚಿತ್ರಗಳು ಬಿಡುಗಡೆಯಾಗಿವೆ.
ಈ ಮೂಲಕ ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಶ್ರುತಿ ಹರಿಹರನ್ ಅವರದ್ದಾಗುತ್ತದೆ. ಈ ವರ್ಷವೇನೋ ಆಯಿತು. ಮುಂದಿನ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ನಟಿ ಯಾರಾಗಲಿದ್ದಾರೆ ಗೊತ್ತಾ? ಹರಿಪ್ರಿಯಾ. ಹೌದು, ಮುಂದಿನ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಯಾರಾದರೂ ಹೀರೋಯಿನ್ ಕಾಣಿಸಿಕೊಳ್ಳಲಿದ್ದಾರೆ ಎಂದರೆ, ಅದು ಹರಿಪ್ರಿಯಾ ಮಾತ್ರ.
ಮುಂದಿನ ವರ್ಷ ಏನಿಲ್ಲ ಎಂದರೂ, ಹರಿಪ್ರಿಯಾ ಅಭಿನಯದ ಏಳೆಂಟು ಚಿತ್ರಗಳು ಬಿಡುಗಡೆಯಾಗಲಿವೆ. ಅದ್ಹೇಗೆ ಎಂದರೆ, ಉತ್ತರ ಇಲ್ಲಿದೆ. “ನೀರ್ ದೋಸೆ’ಯ ನಂತರ ಅವರು ಮೊದಲು ಒಪ್ಪಿದ ಚಿತ್ರವೆಂದರೆ, “ಭರ್ಜರಿ’. ಅದಾದ ಮೇಲೆ “ಸಂಹಾರ’ ಚಿತ್ರವನ್ನು ಒಪ್ಪಿಕೊಂಡರು ಹರಿಪ್ರಿಯಾ. ಅದರ ಜೊತೆಜೊತೆಗೇ, “ಅಂಜನಿಪುತ್ರ’ದ ಹಾಡೊಂದರಲ್ಲಿ ಕಾಣಿಸಿಕೊಂಡು,
“ಕುರುಕ್ಷೇತ್ರ’ ಚಿತ್ರಕ್ಕೆ ಜಂಪ್ ಆದರು. ಅದರಲ್ಲೂ ಒಂದು ಹಾಡಿನಲ್ಲಿ ನೃತ್ಯ ಮಾಡಿದ ಅವರು, “ಕಥಾ ಸಂಗಮ’ದ ಒಂದು ಕಥೆಗೆ ನಾಯಕಿಯಾದರು. ಇದರ ಜೊತೆಗೆ “ಕನಕ’, “ಸೂಜಿದಾರ’, “ಲೈಫ್ ಜೊತೆಗೆ ಒಂದು ಸೆಲ್ಫಿ’, ತೆಲುಗಿನ “ಜೈ ಸಿಂಹ’ ಹೀಗೆ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಾ ಹೋದರು ಹರಿಪ್ರಿಯಾ. ಈ ಪೈಕಿ 2017ರಲ್ಲಿ ಬಿಡುಗಡೆಯಾಗಿದ್ದೆಂದರೆ, “ಭರ್ಜರಿ’ ಮತ್ತು “ಅಂಜನಿಪುತ್ರ’ ಮಾತ್ರ.
ಮಿಕ್ಕಂತೆ ಮುಂದಿನ ವರ್ಷ “ಸಂಹಾರ’, “ಕನಕ’, “ಸೂಜಿದಾರ’, “ಲೈಫ್ ಜೊತೆಗೆ ಒಂದು ಸೆಲ್ಫಿ’, “ಕುರುಕ್ಷೇತ್ರ’, “ಕಥಾ ಸಂಗಮ’, ತೆಲುಗಿನ “ಜೈ ಸಿಂಹ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಪೈಕಿ “ಸಂಹಾರ’ ಮತ್ತು “ಕನಕ’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಜನವರಿ ತಿಂಗಳಲ್ಲೇ “ಸಂಹಾರ’,
“ಕನಕ’ ಮತ್ತು “ಜೈ ಸಿಂಹ’ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗಲಿವೆ. ಮಿಕ್ಕ ಚಿತ್ರಗಳು ನಂತರದ ದಿನಗಳಲ್ಲಿ ಕ್ರಮೇಣ ಬಿಡುಗಡೆಯಾಗಲಿವೆ. ಅಲ್ಲಿಗೆ ಈ ವರ್ಷ ಹರಿಪ್ರಿಯಾ ಅಭಿನಯದ ಏಳೆಂಟು ಚಿತ್ರಗಳು ಬಿಡುಗಡೆಯಾಗಲಿದ್ದು, ಬಹುಶಃ ಈ ವರ್ಷ ಅತೀ ಹೆಚ್ಚು ಚಿತ್ರಗಳು ಬಿಡುಗಡೆಯಾದ ನಾಯಕಿ ಯಾರು ಎಂದರೆ, ಹರಿಪ್ರಿಯಾ ಎಂದು ಈಗಲೇ ಅಡ್ವಾನ್ಸ್ ಆಗಿ ಹೇಳಿಬಿಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ