ಟಾಮ್ ಅಂಡ್ ಜೆರ್ರಿ ಗೇಮ್ಗೆ ರೆಡಿ: ಡೈರೆಕ್ಟರ್ ಕ್ಯಾಪ್ ತೊಟ್ಟ “KGF’ ಡೈಲಾಗ್ ರೈಟರ್
Team Udayavani, Oct 22, 2021, 3:41 PM IST
ನೀವೇನಾದರೂ ಕಾರ್ಟೂನ್ ಪ್ರಿಯರಾಗಿದ್ದರೆ, ಒಮ್ಮೆಯಾದರೂ ಚಾನೆಲ್ಗಳಲ್ಲಿ “ಟಾಮ್ ಅಂಡ್ ಜೆರ್ರಿ’ ಕ್ಯೂಟ್ ತುಂಟಾಟವನ್ನು ನೋಡಿರುತ್ತೀರಿ. ಎಳೆ ವಯಸ್ಸಿನಿಂದ, ಇಳಿ ವಯಸ್ಸಿನವರೆಗೆ ಎಲ್ಲರನ್ನು ರಂಜಿಸುವ “ಟಾಮ್ ಅಂಡ್ ಜೆರ್ರಿ’ ಈಗ ಸಿನಿಮಾವಾಗಿ ತೆರೆಗೆ ಬರುತ್ತಿದೆ.
ಅಂದಹಾಗೆ, ಕಾರ್ಟೂನ್ನಲ್ಲಿರುವ “ಟಾಮ್ ಅಂಡ್ ಜೆರ್ರಿ’ಗೂ ಸಿನಿಮಾವಾಗಿ ತೆರೆಗೆ ಬರುತ್ತಿರುವ “ಟಾಮ್ ಅಂಡ್ ಜೆರ್ರಿ’ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಕಂಪ್ಲೀಟ್ ಯೂಥ್ಫುಲ್ ಸಬ್ಜೆಕ್ಟ್ ಸಿನಿಮಾವಾಗಿದ್ದು, “ಟಾಮ್ ಅಂಡ್ ಜೆರ್ರಿ’ ಥರದ ಕಿತ್ತಾಟ, ಗುದ್ದಾಟ, ಮುದ್ದಾಟ ಎಲ್ಲವೂ ಈ ಕಥೆಯಲ್ಲಿರುವುದರಿಂದ, ಸಿನಿಮಾದ ಸಬ್ಜೆಕ್ಟ್ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ ಈ ಹೆಸರು ಇಟ್ಟಿದೆಯಂತೆ.
ರಾಕಿಂಗ್ಸ್ಟಾರ್ ಯಶ್ ಅಭಿನಯದ “ಕೆಜಿಎಫ್-1′ ಚಿತ್ರಕ್ಕೆ ಕವಿತೆಗಳು ಮತ್ತು ಡೈಲಾಗ್ಸ್ ಬರೆದಿದ್ದ, ಸ್ಯಾಂಡಲ್ವುಡ್ನಲ್ಲಿ ಭರವಸೆಯ ಯಂಗ್ ರೈಟರ್ ಎಂದೇ ಗುರುತಿಸಿಕೊಂಡಿದ್ದ ರಾಘವ್ ವಿನಯ್ ಶಿವಗಂಗೆ, “ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಈ ಹಿಂದೆ “ಗಂಟುಮೂಟೆ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಿಶ್ಚಿತ್ ಕೊರೋಡಿ, ಕಿರುತೆರೆಯ “ಜೋಡಿ ಹಕ್ಕಿ’ ಧಾರವಾಹಿ ಖ್ಯಾತಿಯ ಚೈತ್ರಾ ರಾವ್ “ಟಾಮ್ ಅಂಡ್ ಜೆರ್ರಿ’ಯಲ್ಲಿ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ತಾರಾ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಮೊದಲಾದವರು “ಟಾಮ್ ಅಂಡ್ ಜೆರ್ರಿ’ಯ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್ “ಸಖತ್’ ಟೀಸರ್
“ಟಾಮ್ ಅಂಡ್ ಜೆರ್ರಿ’ಯ ಬಗ್ಗೆ ಮಾತನಾಡುವ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ, “ಜೀವನದ ಬೇರೆ ಬೇರೆ ಆಯಾಮಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಿದ್ದೇವೆ. ಗುರಾಯಿಸಿದವರಿಗೆ ಹೊಡೆಯುವಂತ ಹುಡುಗ, ಗುರಾಯಿಸಿದವರಿಗೆಲ್ಲ ಸ್ಮೈಲ್ ಮಾಡುವ ಹುಡುಗಿ – ಇವರಿಬ್ಬರ ಕೋಪ, ತಾಪ, ತರಲೆ, ತಮಾಷೆ, ತುಂಟತನವೇ “ಟಾಮ್ ಅಂಡ್ ಜೆರ್ರಿ’ ಸಿನಿಮಾದ ಹೈಲೈಟ್ಸ್.
ಸಿನಿಮಾದ ಪ್ರತಿ ಕ್ಯಾರೆಕ್ಟರ್, ಡೈಲಾಗ್ಸ್ ಮತ್ತು ಸೀನ್ಸ್ ನಮ್ಮ ನಡುವೆಯೇ ನಡೆಯುವಂತಿದ್ದು, ನೋಡುಗರ ಮನಮುಟ್ಟುತ್ತದೆ. ಸಂಪೂರ್ಣ ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು ಒಂದೊಳ್ಳೆ ಸಿನಿಮಾವನ್ನು ನೋಡುಗರ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ. ಇನ್ನು ಕುಂದಾಪುರ ಮೂಲದ ಉದ್ಯಮಿ ರಾಜು ಶೇರಿಗಾರ್, “ರಿದ್ಧಿ ಸಿದ್ಧಿ ಫಿಲಂಸ್’ ಬ್ಯಾನರ್ನಲ್ಲಿ “ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿರುವ “ಟಾಮ್ ಅಂಡ್ ಜೆರ್ರಿ’ ಟೀಮ್ ಇದೇ ನವಂಬರ್ ಅಂತ್ಯದೂಳಗ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ