ಇಂದಿನಿಂದ ಕರಾವಳಿಯಾದ್ಯಂತ ಉಮಿಲ್‌ ಸಿನೆಮಾ ತೆರೆಗೆ


Team Udayavani, Dec 7, 2018, 11:30 AM IST

umil.jpg

ಮಂಗಳೂರು: ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ಬಳಸಲಾದ ಮೊದಲ ಹಾಗೂ ಕೋಸ್ಟಲ್‌ವುಡ್‌ನ‌ 101ನೇ ಕಾಮಿಡಿ ಸಿನೆಮಾ “ಉಮಿಲ್‌’ ಡಿ.7ರಿಂದ ಕರಾವಳಿಯಾದ್ಯಂತ ತೆರೆ ಕಾಣಲಿದೆ. 

ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಂಜಿತ್‌ ಸುವರ್ಣ, ಪ್ರದರ್ಶನದ ಮೊದಲೇ ಹಿಂದಿಗೆ ಡಬ್‌ ಆದ ಮೊದಲ ಸಿನೆಮಾ “ಉಮಿಲ್‌’. ಪುನೀತ್‌ ರಾಜ್‌ಕುಮಾರ್‌ ಹಾಡಿರುವ ತುಳುವಿನ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಇದರ ಟ್ರೇಲರ್‌ ಅನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಂಪೂರ್ಣ ಹಾಸ್ಯಮಯವಾಗಿ ರುವ ಈ ಸಿನೆಮಾವನ್ನು ಕೋಟಿ ರೂ. ಖರ್ಚಿನಲ್ಲಿ ಸಿದ್ಧಪಡಿಸಲಾಗಿದೆ ಎಂದರು.
ಆ್ಯನಿಮೇಶನ್‌ ಕೆಲಸವನ್ನು ಕೆನಡಾದಲ್ಲಿ ಮಾಡಲಾಗಿದೆ.  ಎಫೆಕ್ಟ್‌ನು ಹೈದರಾಬಾದ್‌ ಹಾಗೂ ಮಾಡೆಲಿಂಗ್‌ನ್ನು ಮುಂಬಯಿಯಲ್ಲಿ ನಡೆಸಲಾಗಿದೆ ಎಂದರು.

ಉಮೇಶ್‌ ಮಿಜಾರ್‌, ನವೀನ್‌ ಡಿ. ಪಡೀಲ್‌, ಪೂಜಾ ಶೆಟ್ಟಿ, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಚೇತನ್‌ ರೈ ಮಾಣಿ, ದೀಪಕ್‌ ರೈ ಪಾಣಾಜೆ, ಪ್ರಕಾಶ್‌ ತೂಮಿನಾಡ್‌, ರಮೇಶ್‌ ರೈ, ಅಮಿತ್‌ ರಾವ್‌, ಯಕ್ಷಗಾನ ಹಾಸ್ಯಗಾರ ಸೀತಾರಾಮ ಕಟೀಲ್‌ “ಉಮಿಲ್‌’ನಲ್ಲಿ ಬಣ್ಣ ಹಚ್ಚಿದ್ದಾರೆ. ಕರುಣಾಕರ ಶೆಟ್ಟಿ, ಪ್ರಜ್ಞೆಶ್ ಶೆಟ್ಟಿ ಹಾಗೂ ಪ್ರಜ್ವಲ್‌ ಶೆಟ್ಟಿ ನಿರ್ಮಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರುರು ಸಂಗೀತ, ಪವನ್‌ ಕರ್ಕೇರ ಛಾಯಾಗ್ರಹಣ ಹಾಗೂ ಹರೀಶ್‌ ಕೊಡಾಡಿ ಸಂಕಲನ ನಡೆಸಿದ್ದಾರೆ ಎಂದರು.”

ತಮಿಳಿನಿಂದಾಗಿ ತುಳುವಿಗೆ ಟಾಕೀಸಿಲ್ಲ!
ತಮಿಳು ಸಿನೆಮಾ ಪ್ರದರ್ಶನ ಕಾರಣ ತುಳು ಸಿನೆಮಾಕ್ಕೆ ಮಂಗಳೂರಿನಲ್ಲಿ ಒಂದೂ ಥಿಯೇಟರ್‌ ಸಿಗಲಿಲ್ಲ  ಮಂಗಳೂರಿನ ಬಿಗ್‌ ಸಿನೆಮಾ, ಪಿವಿಆರ್‌, ಸಿನೆಪೊಲಿಸ್‌, ಸುರತ್ಕಲ್‌ನ ನಟರಾಜ್‌, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್‌, ಕಾರ್ಕಳದ ಪ್ಲಾನೆಟ್‌, ಮೂಡುಬಿದಿರೆಯ ಅಮರಶ್ರೀ, ಕಾಸರಗೋಡಿನ ಸಿನಿಕೃಷ್ಣ, ಉಡುಪಿಯ ಕಲ್ಪನಾ,ಮಣಿಪಾಲದ ಐನಾಕ್ಸ್‌, ಬಿಗ್‌ ಸಿನೆಮಾದಲ್ಲಿ “ಉಮಿಲ್‌’ ಪ್ರದರ್ಶನಗೊಳ್ಳಲಿದೆ ಎಂದರು. ನಿರ್ಮಾಪಕರಾದ ಕರುಣಾಕರ ಶೆಟ್ಟಿ, ನಟಿ ಪೂಜಾ ಶೆಟ್ಟಿ, ಕಲಾನಿರ್ದೇಶಕ ವಿಲ್‌ಫ್ರೆಡ್‌ ಪಿಂಟೋ ಉಪಸ್ಥಿತರಿದ್ದರು.

ಬೋಳಾರ್‌ ಗಾನ – ವಾಮಂಜೂರು ಸಪ್ತ ಕಲಾಶೈಲಿ !
“ಉಮಿಲ್‌’ ಪೂರ್ಣ ಮಟ್ಟದಲ್ಲಿ ಕಾಮಿಡಿ ಗೆಟಪ್‌ನಲ್ಲಿ ಮೂಡಿಬಂದಿದೆ. ಆ್ಯನಿಮೇಶನ್‌ ಮೂಲಕ ಸಿದ್ಧಗೊಳಿಸಲಾಗಿದೆ. ನವೀನ್‌ ಡಿ. ಪಡೀಲ್‌ ವಿಭಿನ್ನ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್‌ ಒಂದು ಹಾಡನ್ನು ಹಾಡಿದ್ದಾರೆ. ಭೋಜರಾಜ್‌ ವಾಮಂಜೂರು ಏಳು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯಲಿದ್ದಾರೆ. ಸಿನೆಮಾಕ್ಕಾಗಿ ಕಳೆದ ಎರಡು ವರ್ಷಗಳಿಂದ ಶ್ರಮವಹಿಸಿ ದುಡಿಯಲಾಗಿದೆ ಎಂದು ನಿರ್ದೇಶಕ ರಂಜಿತ್‌ ಸುವರ್ಣ ತಿಳಿಸಿದ್ದಾರೆ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.