ವಿಶ್ವಾಸಂ ರೀಮೇಕ್ನಲ್ಲಿ ನಟಿಸುತ್ತಿಲ್ಲ: ಶಿವಣ್ಣ
Team Udayavani, May 20, 2019, 3:00 AM IST
ಶಿವರಾಜಕುಮಾರ್ ದೊಡ್ಡ ಗ್ಯಾಪ್ನ ಬಳಿಕ ಒಪ್ಪಿಕೊಂಡ ರೀಮೇಕ್ ಚಿತ್ರ “ಕವಚ’. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅದರ ಬೆನ್ನಲ್ಲೇ ಮತ್ತೂಂದು ರೀಮೇಕ್ ಚಿತ್ರದ ಸುದ್ದಿ ಶಿವಣ್ಣ ಸುತ್ತ ಓಡಾಡತೊಡಗಿತ್ತು. ತಮಿಳಿನ “ವಿಶ್ವಾಸಂ’ ಚಿತ್ರದ ರೀಮೇಕ್ನಲ್ಲಿ ಶಿವಣ್ಣ ನಟಿಸುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ಈ ಸುದ್ದಿಯನ್ನು ಶಿವಣ್ಣ ತಳ್ಳಿ ಹಾಕಿದ್ದಾರೆ. ತಾನು “ವಿಶ್ವಾಸಂ’ ರೀಮೇಕ್ನಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
“ನಾನು “ವಿಶ್ವಾಸಂ’ ಸೇರಿದಂತೆ ಸದ್ಯ ಯಾವುದೇ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಆ ಸುದ್ದಿ ಹೇಗೆ ಹಬ್ಬಿಕೊಂಡಿತ್ತೋ ಗೊತ್ತಿಲ್ಲ’ ಎನ್ನುತ್ತಾರೆ. ಸದ್ಯ ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಬಿಝಿಯಾಗಿರುವ ಶಿವರಾಜಕುಮಾರ್ ಅವರ ಕೈ ತುಂಬಾ ಸಿನಿಮಾಗಳಿವೆ. “ದ್ರೋಣ’, ಎ.ಪಿ.ಅರ್ಜುನ್ ನಿರ್ದೇಶನದ “ರಾಯಲ್ ಎನ್ಫೀಲ್ಡ್’, ಹರ್ಷ ನಿರ್ದೇಶನದ “ಭಜರಂಗಿ-2′ … ಹೀಗೆ ಶಿವಣ್ಣ ಕೈಯಲ್ಲಿರುವ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆಯಂತೆ.
“ಎಲ್ಲಾ ಸಿನಿಮಾಗಳ ಕಥೆಗಳು ತುಂಬಾ ಚೆನ್ನಾಗಿವೆ. ಹರ್ಷ ಕಥೆಯೂ ಭಿನ್ನವಾಗಿದ್ದು, ಸಾಮಾಜಿಕ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಇವತ್ತಿನ ಸಮಾಜಕ್ಕೆ ಈ ಕಥೆ ಸಖತ್ ಹೊಂದಿಕೆಯಾಗುತ್ತದೆ’ ಎಂದು ಖುಷಿಯಿಂದ ಹೇಳುತ್ತಾರೆ. ಇನ್ನು, ಶಿವರಾಜಕುಮಾರ್ ಅವರಿಗೆ ಒಂದು ಬೇಸರವಿದೆ. ಅದೇನೆಂದರೆ ತಾನು ಇಷ್ಟಪಟ ನಟಿಸಿದ “ಕವಚ’ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿಲ್ಲ ಎಂಬುದು.
“ಕವಚ’ ಒಂದು ಹೊಸ ಪ್ರಯೋಗದ ಚಿತ್ರವಾಗಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಆದರೆ, ಚಿತ್ರ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಲಿಲ್ಲ. ಅದಕ್ಕೆ ಕಾರಣವೇನೆಂದು ಗೊತ್ತಿಲ್ಲ. ಬಹುಶಃ ರಿಲೀಸ್ ವಿಷಯದಲ್ಲಿ ಸ್ವಲ್ಪ ಗೊಂದಲವಿತ್ತು. ಆ ಕಾರಣವೂ ಇರಬಹುದು’ ಎನ್ನುವುದು ಶಿವಣ್ಣ ಮಾತು. ಶಿವರಾಜಕುಮಾರ್ ಅವರಿಗೆ ಮತ್ತಷ್ಟು ಹೊಸ ಪ್ರಯೋಗದ ಕಥೆಗಳು ಹುಡುಕಿಕೊಂಡು ಬರುತ್ತಿವೆಯಂತೆ. ಎಲ್ಲಾ ಕಥೆಗಳನ್ನು ಕೇಳುತ್ತಿದ್ದು, ಇಷ್ಟವಾಗಿದ್ದನ್ನು ಒಪ್ಪಿಕೊಳ್ಳುವುದಾಗಿ ಹೇಳುತ್ತಾರೆ ಶಿವಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…