‘ನಿನ್ನ ರೇಟ್…ಅಂತಾ ಕೇಳ್ತಾರೆ: ಟ್ರೋಲಿಗರ ಕಾಟಕ್ಕೆ ಕಣ್ಣೀರು ಸುರಿಸಿದ ಆಲಿಯಾ
ನಾನು ಈಗ ಗಟ್ಟಿಯಾಗುತ್ತಿದ್ದೇನೆ. ಕೆಟ್ಟದಾಗಿ ಟ್ರೋಲ್ ಮಾಡುವವರನ್ನ, ನೆಗೆಟಿವ್ ಮೈಂಡ್ ಹೊಂದಿರುವವರನ್ನ ಬ್ಲಾಕ್ ಮಾಡುತ್ತಿದ್ದೇನೆ
Team Udayavani, Feb 19, 2021, 6:37 PM IST
ಮುಂಬೈ : ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಣ್ಣೀರು ಹಾಕಿದ್ದಾರೆ. ಅವರ ಈ ಕಣ್ಣೀರಧಾರೆಗೆ ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಟೀಕೆಗಳು.
ಸೆಲಬ್ರೆಟಿಗಳು ತುಂಡು ಬಟ್ಟೆ, ಟಾಪ್ ಲೇಸ್, ಸ್ವಿಮ್ ಸೂಟ್ ಹೀಗೆ ವಿಭಿನ್ನ ಡ್ರಸ್ ಧರಿಸುವುದು ಮಾಮೂಲು. ಇತ್ತೀಚಿಗೆ ಅದೊಂದು ಫ್ಯಾಶನ್ ಕೂಡ ಆಗಿದೆ. ಅವರ ಈ ಉಡುಗೆ ಕೆಲವರ ಕಣ್ಣು ಕೆಂಪಾಗಿಸುವುದುಂಟು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ತಾರೆಯರು, ಮಾಡೆಲ್ ಗಳು ತಮ್ಮದೇಯಾದ ಲೈಫ್ ಸ್ಟೈಲ್ ಲೀಡ್ ಮಾಡ್ತೀರ್ತಾರೆ. ಆದರೆ, ಆಲಿಯಾ ಟ್ರೋಲ್ ಗಳನ್ನು ಗಂಭೀರವಾಗಿ ತೆಗೆದುಕೊಂಡು ಕಣ್ಣೀರು ಸುರಿಸಿದ್ದಾರೆ.
ಇತ್ತೀಚಿಗೆ ವಿಡಿಯೋ ಮೂಲಕ ತಮ್ಮ ಮನದ ನೋವು ಹೊರಹಾಕಿರುವ ಆಲಿಯಾ, ಪ್ರತಿ ಸಾರಿ ನನ್ನ ಫೋಟೊಗಳಿಗೆ ಋರಾಣ್ಮಕ ಟೀಕೆಗಳು ಕೇಳಿ ಬರುತ್ತವೆ. ತುಂಡುಡುಗೆಯ ನನ್ನ ಫೋಟೊಗಳಿಗೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡ್ತಾರೆ. ಅದರಲ್ಲೂ ಕೆಲವರು ನನ್ನನ್ನು ವೇಶ್ಯೆಗೆ ಹೋಲಿಸುತ್ತಾರೆ. ನಿನ್ನ ರೇಟ್ ಎಷ್ಟು ಅಂತಾ ಕೇಳಿ ಎಲ್ಲೆ ಮೀರಿ ವರ್ತಿಸುತ್ತಾರೆ. ಇದರಿಂದ ನನಗೆ ಸಾಕಷ್ಟು ಬಾರಿ ಆಘಾತವಾಗಿದೆ. ಜನರ ಈ ವರ್ತನೆಯಿಂದ ದುಃಖಿಸಿದ್ದೇನೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುವ ನಿಂದನೆಗಳ ವಿರುದ್ಧ ಆಕ್ರೋಶ ಹೊರಹಾಕಿರುವ ಆಲಿಯಾ, ಅವರೆಲ್ಲ ಯಾಕೆ ಹೀಗೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಟ್ರೋಲಿಗರಿಂದ ಪಾರಾಗಲು ತಾವೇ ಪರಿಹಾರ ಕೂಡ ಕಂಡುಕೊಂಡಿದ್ದಾರೆ. ಮೊದಲು ಅಸಂಬದ್ಧ ಟ್ರೋಲ್ ಗಳು ನನ್ನ ನೆಮ್ಮದಿ ಕಿತ್ತುಕೊಳ್ಳುತ್ತಿದ್ದವು. ಆದರೆ, ನಾನು ಈಗ ಗಟ್ಟಿಯಾಗುತ್ತಿದ್ದೇನೆ. ಕೆಟ್ಟದಾಗಿ ಟ್ರೋಲ್ ಮಾಡುವವರನ್ನ, ನೆಗೆಟಿವ್ ಮೈಂಡ್ ಹೊಂದಿರುವವರನ್ನ ಬ್ಲಾಕ್ ಮಾಡುತ್ತಿದ್ದೇನೆ ಎಂದಿದ್ದಾರೆ.
ಇನ್ನು ನಿರ್ದೇಶಕ ಕಶ್ಯಪ್ ಅವರ ಪುತ್ರಿ ಆಲಿಯಾ ಚಿತ್ರರಂಗದ ಎಂಟ್ರಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ಬಣ್ಣದ ಲೋಕಕ್ಕೆ ಬರಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ