Zareen Khan: ಆ ನಟಿಯೊಂದಿಗಿನ ಹೋಲಿಕೆಯಿಂದ ನನ್ನ ವೃತ್ತಿ ಜೀವನವೇ ಮುಳುವಾಯಿತು; ಜರೀನ್
ನನ್ನ ವ್ಯಕ್ತಿತ್ವ ಸಾಬೀತಿಗೆ ಇಂಡಸ್ಟ್ರಿ ಅವಕಾಶವೇ ನೀಡಿಲ್ಲ..
Team Udayavani, Jul 27, 2023, 1:32 PM IST
ಮುಂಬಯಿ: ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಮಾದಕ ನೋಟದಿಂದ ಗಮನ ಸೆಳೆದಿದ್ದ ನಟಿ ಜರೀನ್ ಖಾನ್ ಬಹು ಸಮಯದಿಂದ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣದ ಕೆಲ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅವರು ಇಂಡಸ್ಟ್ರಿಯಲ್ಲಿನ ಅವಕಾಶ ಕೊರತೆ ಬಗ್ಗೆ ಮಾತನಾಡಿದ್ದಾರೆ.
2010 ರಲ್ಲಿ ಬಂದ ‘ವೀರ್’ ಸಿನಿಮಾದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಜರೀನ್ ಖಾನ್ ಆರಂಭದಲ್ಲಿ ತನ್ನ ನಟನೆ ಹಾಗೂ ಮಾದಕ ನೋಟದಿಂದ ಗಮನ ಸೆಳೆದಿದ್ದರು. ಆ ವೇಳೆ ಅವರನ್ನು ಕತ್ರೀನಾ ಕೈಫ್ ಅವರಿಗೆ ಹೋಲಿಸಲಾಗುತ್ತಿತ್ತು. ಆದರೆ ಆ ಬಳಿಕ ಅವರ ಸಿನಿ ಕೆರಿಯರ್ ಗೆ ಇದೇ ವಿಚಾರ ಹಿನ್ನೆಡೆಯಾಗಿ ಪರಿಣಮಿಸಿತು.
ರೆಡ್ಡಿಟ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ನಲ್ಲಿ ಬಳಕೆದಾರರೊಬ್ಬರು “ಜರೀನ್ ಖಾನ್ ನಿಮ್ಮನ್ನು ಆರಂಭಿಕ ದಿನಗಳಲ್ಲಿ ಕತ್ರೀನಾ ಅವರಿಗೆ ಹೋಲಿಸಲಾಗುತ್ತಿತ್ತು. ಅದು ನಿಮಗೆ ಹೇಗೆ ಅನಿಸುತ್ತಿತ್ತು ಹಾಗೂ ನಿಮ್ಮ ಕೆರಿಯರ್ ಮೇಲೆ ಹೇಗೆ ಪರಿಣಾಮ ಬೀರಿತು?” ಎಂದು ಕೇಳಿದ್ದಾರೆ.
ಇದನ್ನೂ ಓದಿ: Amitabh Bachchan: ಮಹಿಳೆಯರ ಒಳಉಡುಪಿನ ಬಗ್ಗೆ ಟ್ವೀಟ್; ಟ್ರೋಲಾದ ಬಿಗ್ ಬಿ ಅಮಿತಾಭ್
“ನಾನು ಇಂಡಸ್ಟಿಗೆ ಬಂದ ವೇಳೆ. ಕಳೆದುಕೊಂಡ ಮಗುವಿನಂತೆ ನನ್ನ ಸ್ಥಿತಿ ಇತ್ತು. ನಾನು ಫಿಲ್ಮಿ ಹಿನ್ನೆಲೆಯಿಂದ ಬರದ ಕಾರಣ. ನನ್ನನು ಕತ್ರೀನಾ ಅವರೊಂದಿಗೆ ಹೋಲಿಸಿ ಮಾತನಾಡುವಾಗ ತುಂಬಾ ಸಂತೋಷವಾಗುತ್ತಿತ್ತು. ನಾನು ಕತ್ರೀನಾ ಅವರ ಅಭಿಮಾನಿಯೂ ಆಗಿದ್ದೆ. ಅವರು ನೋಡಲು ಸುಂದರವಾಗಿದ್ದರು. ಆದರೆ ಇದೇ ನನಗೆ ಹಿನ್ನೆಡೆ ಆಯಿತು. ನನ್ನ ವ್ಯಕ್ತಿತ್ವವನ್ನು ಸಾಬೀತು ಪಡಿಸಲು ಇಂಡಸ್ಟ್ರಿ ಅವರು ನನಗೆ ಅವಕಾಶವೇ ನೀಡಿಲ್ಲ. ಇದು ನನ್ನ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು” ಎಂದು ಪ್ರಶ್ನೆಗೆ ಜರೀನ್ ಉತ್ತರಿಸಿದ್ದಾರೆ.
ಜರೀನ್ ಖಾನ್ ‘ವೀರ್’ ನಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದರು. ಸಲ್ಮಾನ್ ಖಾನ್ ಕತ್ರಿನಾ ಅವರೊಂದಿಗೆ ‘ಮೈನೆ ಪ್ಯಾರ್ ಕ್ಯುನ್ ಕಿಯಾ’ (2005) ಮತ್ತು ‘ ಪಾರ್ಟ್ ನರ್’ (2007) ನಲ್ಲಿ ನಟಿಸಿದ್ದರು. ಕತ್ರೀನಾ ಅವರೊಂದಿಗೆ ಜರೀನ್ ಅವರ ಹೋಲಿಕೆ. ಅಂತಿಮವಾಗಿ ಜರೀನ್ ಅವರಿಗೆ ಮುಳುವಾಗಿ ಪರಿಣಮಿಸಿತು. ಇದು ಜರೀನ್ ಅವರ ವೃತ್ತಿ ಜೀವನದ ಬೆಳವಣಿಗೆಗೆ ಅಡ್ಡಿಯಾಯಿತು. ಇಂಡಸ್ಟ್ರಿಯಲ್ಲಿ ಜರೀನ್ ಅವರ ಗುರುತು ಸ್ಥಾಪಿಸಲು, ಇದರಿಂದ ಕಷ್ಟವಾಯಿತು.
ಜರೀನ್ ಖಾನ್ ಹಿಂದಿ, ಪಂಜಾಬಿ, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ