National Film Awards: ಜೈ ಭೀಮ್,ಕರ್ಣನ್.. ಸಿನಿಮಾಗಳ ನಿರ್ಲಕ್ಷ್ಯ; ನಿರಾಶರಾದ ಫ್ಯಾನ್ಸ್
Team Udayavani, Aug 26, 2023, 1:27 PM IST
ಮುಂಬಯಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದೆ. ಕನ್ನಡ ಸೇರಿ ಭಾರತೀಯ ಸಿನಿಮಾರಂಗದ ಪ್ರಮುಖ ಹಾಗೂ ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಹತ್ತಾರು ಪ್ರಶಸ್ತಿಗಳು ಅನೌನ್ಸ್ ಆಗಿವೆ.
ಪ್ರಮುಖವಾಗಿ ತೆಲುಗಿನ ʼಪುಷ್ಪʼ, ʼಆರ್ ಆರ್ ಆರ್ʼ ಸಿನಿಮಾಗಳು ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ 69ನೇ ನ್ಯಾಷನಲ್ ಆವಾರ್ಡ್ ನಲ್ಲಿ ಸದ್ದು ಮಾಡಿದೆ. ಆದರೆ ತಮಿಳು, ಮಲಯಾಳಂ ಸೇರಿ ಕೆಲ ಸೂಪರ್ ಹಿಟ್ ಹಾಗೂ ಗಮನ ಸೆಳೆದ ಸಿನಿಮಾಗಳಿಗೆ ಯಾವ ರಾಷ್ಟ್ರ ಪ್ರಶಸ್ತಿಯೂ ಲಭಿಸದೇ ಇರುವುದರಿಂದ ಕೆಲ ಸಿನಿ ಪ್ರೇಕ್ಷಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಪುಷ್ಪʼದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನು ಅತ್ಯುತ್ತಮ ನಟಿಯ ಪ್ರಶಸ್ತಿಯನ್ನು ಇಬ್ಬರಿಗೆ ನೀಡಲಾಗಿದೆ. ಆಲಿಯಾ ಭಟ್ ( ಗಂಗೂಬಾಯಿ ಕಾಠಿಯಾವಾಡಿ), ಕೃತಿ ಸನೋನ್ (ಮಿಮಿ) ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ತಮಿಳಿನ ಅತ್ಯುತ್ತಮ ಚಿತ್ರವಾಗಿ ‘ಕಡೈಸಿ ವಿವಾಸಾಯಿ’, ಅತ್ಯುತ್ತಮ ತೆಲುಗಿನ ಚಿತ್ರವಾಗಿ ‘ಉಪ್ಪೇನಾ’ ಮಲಯಾಳಂನ ಅತ್ಯುತ್ತಮ ಚಿತ್ರವಾಗಿ ‘ಹೋಮ್’, ಕನ್ನಡದ ಅತ್ಯುತ್ತಮ ಚಿತ್ರವಾಗಿ’777 ಚಾರ್ಲಿ ‘ ಹಿಂದಿಯ ಅತ್ಯುತ್ತಮ ಚಿತ್ರವಾಗಿ ‘ಸರ್ದಾರ್ ಉದಾಮ್’ ಗೆ ಪ್ರಶಸ್ತಿ ನೀಡಲಾಗಿದೆ. ʼಆರ್ ಆರ್ ಆರ್ʼ ಸಿನಿಮಾಕ್ಕೆ ಆರು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿಗಳು ಅನೌನ್ಸ್ ಆದ ಬಳಿಕ ಟ್ವಿಟರ್ ನಲ್ಲಿ ನ್ಯಾಷನಲ್ ಫಿಲ್ಮ್ ಆವಾರ್ಡ್ಸ್ ಟ್ರೆಂಡ್ ಆಗಿದೆ. ʼ ‘ಜೈ ಭೀಮ್’ ‘ಕರ್ಣನ್’, ‘ಸರ್ಪಟ್ಟ ಪರಂಬರೈ’,’ಮಾನಾಡು’, ‘ಮಿನ್ನಲ್ ಮುರಳಿʼ ಯಂಥ ಸಿನಿಮಾಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಟ್ವೀಟ್ ನಲ್ಲಿ ಚರ್ಚಾ ವಿಷಯವನ್ನಾಗಿ ಮಾಡಲಾಗಿದೆ.
ʼಜೈ ಭೀಮ್ʼ, ʼಕರ್ಣನ್, ಮತ್ತು ‘ಸರ್ಪಟ್ಟ ಪರಂಬರೈ’ ನಂತಹ ಸಿನಿಮಾಗಳನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ಲಕ್ಷ್ಯ ಮಾಡಿರುವುದು ತೀವ್ರ ದುಃಖ ತಂದಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ನಟನೆ ಚೆನ್ನಾಗಿದೆ ಆದರೆ ಸರ್ಪಟ್ಟ (ಸ್ಟಂಟ್, ಕಲಾ ನಿರ್ದೇಶನ) ಜೈ ಭೀಮ್ (ಮಣಿಕಂಠನ್), ಮಾನಾಡು (ಪ್ರವೀಣ್ ಕೆಎಲ್), ಕರ್ಣನ್ (ಸಂತೋಷ್ ನಾರಾಯಣನ್) ಅವರ ಕೆಲಸಗಳನ್ನು ಪರಿಗಣಿಸದಿರುವುದು ನಂಬಲು ಸಾಧ್ಯವಿಲ್ಲ. ವಸಂತ್ ಅವರಂತಹ ದಿಗ್ಗಜ ತೀರ್ಪುಗಾರರು ಒಳಗೊಂಡ ಜ್ಯೂರಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಜ್ಯೂರಿಗಳ ಪ್ರಕಾರ ಪ್ರಕಾರ ʼಜೈ ಭೀಮ್ʼ, ʼಕರ್ಣನ್ʼ, ‘ಸರ್ಪಟ್ಟ ಪರಂಬರೈ’ ಸಿನಿಮಾಗಳಿಗಿಂತ ಸ್ಮಗ್ಲರ್ ಸಿನಿಮಾ ʼಪುಷ್ಪʼ ಉತ್ತಮವಾಗಿದೆ ಎಂದು ಒಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ಈಗ ಜೋಕ್ ಆಗಿದೆ! ಜೈ ಭೀಮ್, ಸರ್ಪಟ್ಟ’ಸರ್ಪಟ್ಟ ಪರಂಬರೈ’ ಮತ್ತು ಕರ್ಣನ್ ಸಿನಿಮಾಗಳುಗೆ ಯಾವುದೇ ಪ್ರಶಸ್ತಿಗಳಿಲ್ಲ !! ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ತಮಿಳು ಸಿನಿಮಾಗಳು ಮಾತ್ರವಲ್ಲದೆ ಮಲಯಾಳಂನಲ್ಲಿ ಸದ್ದು ಮಾಡಿದ’ಮಿನ್ನಲ್ ಮುರಳಿ’ ಮತ್ತು ‘ನಯಟ್ಟು’ ಸಿನಿಮಾಗಳಿಗೆ ಯಾವುದೇ ಪ್ರಶಸ್ತಿಗಳು ಲಭಿಸದೆ ಇರುವುದು ಸಿನಿ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ