ಒಂದೇ ದಿನ, ಒಂದೇ ಟೈಟಲ್‌ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್‌: ಏನಿದು ʼಜೈಲರ್ʼ ವಿವಾದ

ರಜಿನಿಕಾಂತ್‌ ʼಜೈಲರ್ʼ ಮಲಯಾಳಂ ʼಜೈಲರ್‌ʼ: ಕೋರ್ಟ್‌ ಮೆಟ್ಟಿಲಲ್ಲಿ ವಿವಾದ

Team Udayavani, Jul 27, 2023, 5:15 PM IST

ಒಂದೇ ದಿನ, ಒಂದೇ ಟೈಟಲ್‌ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್‌: ಏನಿದು ʼಜೈಲರ್ʼ ವಿವಾದ

ಚೆನ್ನೈ: ಈ ವರ್ಷದ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಅದ್ಧೂರಿಯಾಗಿ ಆಡಿಯೋ ರಿಲೀಸ್‌ ತಯಾರಿಯಲ್ಲಿ ನಿರತವಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಸೂಪರ್‌ ಹಿಟ್‌ ಆಗಿವೆ.

ಇದುವರೆಗೆ ಪಾಸಿಟಿವ್‌ ಪ್ರಚಾರದಿಂದಲೇ ಸುದ್ದಿಯಾಗಿರುವ ರಜಿನಿಕಾಂತ್‌ ಅವರ ʼಜೈಲರ್‌ʼ ಈಗ ಟೈಟಲ್‌ ವಿವಾದಿಂದ ಸದ್ದು ಮಾಡುತ್ತಿದೆ. ಮಲಯಾಳಂ ನಿರ್ದೇಶಕ ಸಕ್ಕಿರ್ ಮದತಿಲ್ ಅವರ ʼಜೈಲರ್‌ʼ ಸಿನಿಮಾದೊಂದಿಗೆ ತಮಿಳಿನ ʼಜೈಲರ್‌ʼ ಸಿನಿಮಾ ಟೈಟಲ್‌ ವಿಚಾರವಾಗಿ ಚರ್ಚೆಯಾಗುತ್ತಿದೆ.

ವಿಶೇಷವೆಂದರೆ ಎರಡೂ ಸಿನಿಮಾದ ಟೈಟಲ್‌ ಒಂದೇ ಆಗಿರುವುದರೊಂದಿಗೆ ಸಿನಿಮಾಗಳು ಒಂದೇ ದಿನ, ಆಗಸ್ಟ್‌ 10 ರಂದೇ ರಿಲೀಸ್‌ ಆಗಲಿದೆ. ಮಲಯಾಳಂನಲ್ಲಿ ಬರುತ್ತಿರುವ ʼಜೈಲರ್‌ʼ ಸಿನಿಮಾದಲ್ಲಿ ಧ್ಯಾನ್ ಶ್ರೀನಿವಾಸನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಟೈಟಲ್‌ ಬದಲಾವಣೆಗೆ ಮನವಿ ಮಾಡಿದ ಮಲಯಾಳಂ ನಿರ್ದೇಶಕ:

ಈ ಸಿನಿಮಾಕ್ಕಾಗಿ ನಾನು  5 ಕೋಟಿ ರೂ. ಹಾಕಿದ್ದೇನೆ. ಮನೆ ಮತ್ತು ಮಗಳ ಆಭರಣಗಳನ್ನು ಅಡವಿಟ್ಟಿದ್ದೇನೆ. ನನ್ನ ಕಾರನ್ನು ಕೂಡ ಮಾರಾಟ ಮಾಡಿದ್ದೇನೆ. ಇದಲ್ಲದೇ ಸಿನಿಮಾಕ್ಕಾಗಿ ಬ್ಯಾಂಕ್‌ ಹಾಗೂ ಹೊರಗಿನವರಿಂದ ಸಾಲ ಪಡೆದುಕೊಂಡಿದ್ದೇನೆ. ಬಡ್ಡಿದರ ಹೆಚ್ಚಳದಿಂದ ಮುಂದೆ ಲೋನ್‌ ಮರುಪಾವತಿಸಲು ಕಷ್ಟವಾಗಬಹುದು. ನನಗೆ ನನ್ನ ಕಷ್ಟವನ್ನು ರಜಿನಿಕಾಂತ್ ಅವರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ. ಈ ಸಿನಿಮಾದ ಟೈಟಲ್‌ ಹಾಗೂ ಒಂದೇ ದಿನ ರಿಲೀಸ್‌ ಆಗುವುದರಿಂದ ಈ ಹಿಂದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು ಎಂದು ನಿರ್ದೇಶಕ ಸಕ್ಕಿರ್ ಮದತಿಲ್‌ ಹೇಳಿ, ಮನವಿ ಮಾಡಿರುವುದಾಗಿ “ಸಿನಿಮಾ ವಿಕಟನ್” ವರದಿ ಮಾಡಿದೆ.

ಟೈಟಲ್‌ ವಿವಾದ:

ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾ ಅನೌನ್ಸ್‌ ಆಗುವ ಮೊದಲೇ , 2021 ರ ಆಗಸ್ಟ್‌ ನಲ್ಲಿ  ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ) ನಲ್ಲಿ ‘ಜೈಲರ್’ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿರುವುದಾಗಿ ಸಕ್ಕಿರ್‌ ಹೇಳುತ್ತಾರೆ. ಇದಲ್ಲದೇ ಸನ್‌ ಪಿಕ್ಚರ್ಸ್‌ ಅವರಿಗೆ ಇದರ ಬಗ್ಗೆ ವಿನಂತಿ ಮಾಡಿದ್ದೆ. ನಿಮ್ಮ ಸಿನಿಮಾವನ್ನು ಬೇರೆ ಟೈಟಲ್‌ ನಲ್ಲಿ ರಿಲೀಸ್‌ ಮಾಡಿ, ಇದರಿಂದ ಎರಡೂ ಸಿನಿಮಾಕ್ಕೂ ಹಾನಿಯಾಗುವುದಿಲ್ಲ ಎಂದು ನಿರ್ದೇಶಕ ಸಕ್ಕಿರ್‌ ಸನ್‌ ಪಿಕ್ಚರ್ಸ್‌ ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.

ಕೋರ್ಟ್‌ ಮೆಟ್ಟಿಲಲ್ಲಿ ʼಟೈಟಲ್‌ ವಿವಾದʼ:

ಸಕ್ಕಿರ್‌ ಅವರ ವಿನಂತಿಯನ್ನು ಒಪ್ಪದ ಸನ್‌ ಪಿಕ್ಚರ್ಸ್‌ ʼಜೈಲರ್‌ʼ ಟೈಟಲ್‌ ನ್ನೇ ಮುಂದುವರಿಸಿದ್ದಾರೆ. ಈ ವಿಚಾರವಾಗಿ ಮದ್ರಾಸ್‌ ಕೋರ್ಟ್‌ ಗೆ ಸನ್‌ ಪಿಕ್ಚರ್ಸ್‌ ತಲುಪಿದ್ದು, ಇದಕ್ಕೆ ಪ್ರತಿಯಾಗಿ ಮದತಿಲ್ ಅವರು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದರ ವಿಚಾರಣೆ ಆಗಸ್ಟ್ 2ಕ್ಕೆ ವಿಚಾರಣೆಯನ್ನು ನಡೆಯಲಿದೆ.

 

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.