SRK: ‘ಪಠಾಣ್ʼ ನಿಜವಾಗಿಯೂ ಗಳಿಸಿದ್ದೆಷ್ಟು? ಶಾರುಖ್ ಸಿನಿಮಾ ಬಗ್ಗೆ ವ್ಯಂಗ್ಯವಾಡಿದ ಕಾಜೋಲ್
Team Udayavani, Jul 16, 2023, 5:56 PM IST
ಮುಂಬಯಿ: ನಟಿ ಕಾಜೋಲ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಡಿಸ್ನಿ+ಹಾಟ್ಸ್ಟಾರ್ನಲ್ಲಿ ಬಂದಿರುವ ವೆಬ್ ಸರಣಿ ‘ದಿ ಟ್ರಯಲ್ʼನಲ್ಲಿ ಲಿಪ್ ಲಾಕ್ ಸೀನ್ ವೊಂದರಲ್ಲಿ ಕಾಣಿಸಿಕೊಂಡಿರುವ ಅವರು, ಇದೀಗ ಸಂದರ್ಶನವೊಂದರಲ್ಲಿ ಆಡಿದ ಮಾತಿನಿಂದ ವಿವಾದಕ್ಕೆ ಗುರಿಯಾಗಿದ್ದಾರೆ.
‘ಲಸ್ಟ್ ಸ್ಟೋರೀಸ್-2’ ನಲ್ಲಿ ಕಾಜೋಲ್ ಹಸಿಬಿಸಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವಿಚಾರ ಚರ್ಚೆಯಲ್ಲಿರುವಾಗಲೇ ʼದಿ ಟ್ರಯಲ್ʼ ನಲ್ಲಿ ಲಿಪ್ ಲಾಕ್ ಮಾಡುವ ಮೂಲಕ 23 ವರ್ಷಗಳ ʼನೋ ಕಿಸ್ʼ ನಿಯಮವನ್ನು ಕಾಜೋಲ್ ಮುರಿದಿದ್ದಾರೆ. ಇದಕ್ಕೂ ಮೊದಲು “ನಮ್ಮನ್ನು ಶಿಕ್ಷಣವಿಲ್ಲದೆ ರಾಜಕಾರಣಿಗಳು ಆಳುತ್ತಿದ್ದಾರೆ” ಎಂದು ನಟಿಯ ಹೇಳಿಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಶಾರುಖ್ – ಕಾಜೋಲ್ ಅವರ ಜೋಡಿ ಬಿಟೌನ್ ನ ಎವರ್ ಗ್ರೀನ್ ಜೋಡಿಗಳಲ್ಲಿ ಒಂದು. ಕೊನೆಯ ಬಾರಿ ಕಾಜೋಲ್ ಹಾಗೂ ಶಾರುಖ್ ʼದಿಲ್ ವಾಲೆʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಜೋಡಿಯಾಗಿ ನಟಿಸಲು ಇಂದಿಗೂ ಬಹುಬೇಡಿಕೆಯಿದೆ.
ಆದರೆ ನಟಿ ಶಾರುಖ್ ಖಾನ್ ಅವರ ಸಿನಿಮಾದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವುದು ಕಿಂಗ್ ಖಾನ್ ಅಭಿಮಾನಿಗಳನ್ನು ಕೆರಳಿಸಿದೆ.
ಸಂದರ್ಶನಕಾರ ನೀವು ಶಾರುಖ್ ಅವರನ್ನು ಬಹು ಸಮಯದ ಬಳಿಕ ಭೇಟಿ ಆದರೆ ಏನು ಕೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. “ಏನು ಕೇಳುವುದು” ಎಂದು ಒಂದು ನಿಮಿಷ ಯೋಚನೆ ಮಾಡಿದ ಬಳಿಕ “ನಿಜವಾಗಿಯೂ “ಪಠಾಣ್” ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿತ್ತು?” ಎಂದು ಕೇಳುತ್ತೇನೆ ಎಂದಿದ್ದಾರೆ.
ಇದನ್ನು ಹೇಳಿದ ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್ ಆಗಿದ್ದು, “ಪಠಾಣ್” ಬ್ಯುಸಿನೆಸ್ ಬಗ್ಗೆ ಕಾಜೋಲ್ ತಮಾಷೆ ಮಾಡುತ್ತಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಕಾಜೋಲ್ ನಕಲಿ ಬಾಕ್ಸ್ ಆಫೀಸ್ ನಂಬರ್ ರಹಸ್ಯವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
ವರ್ಲ್ಡ್ ವೈಡ್ ʼಪಠಾಣ್ʼ ಸಿನಿಮಾ 1050 ಕೋಟಿ ರೂ. ಗಳಿಕೆ ಕಂಡಿದೆ. ವರದಿಗಳ ಪ್ರಕಾರ ಭಾರತದಲ್ಲಿ 665 ಕೋಟಿ ರೂ.ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Sullia ಮರ ಕಡಿಯುತ್ತಿದ್ದಾಗ ದುರ್ಘಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್