Alphonse Puthren: ಸಿನಿಮಾರಂಗ ಬಿಡುವ ಬಗ್ಗೆ ʼಪ್ರೇಮಂʼ ನಿರ್ದೇಶಕ ಪೋಸ್ಟ್; ಕಾರಣವೇನು?

ನಾನು ಬೇರೆಯವರಿಗೆ ಹೊರೆಯಾಗಲು ಬಯಸುವುದಿಲ್ಲ..

Team Udayavani, Oct 30, 2023, 1:44 PM IST

Alphonse Puthren: ಸಿನಿಮಾರಂಗ ಬಿಡುವ ಬಗ್ಗೆ ʼಪ್ರೇಮಂʼ ನಿರ್ದೇಶಕ ಪೋಸ್ಟ್; ಕಾರಣವೇನು?

ಕೊಚ್ಚಿ: ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರನ್ ಸಿನಿಮಾರಂಗದ ದೂರ ಉಳಿವುದಾಗಿ ಮಾಡಿದ ಪೋಸ್ಟ್‌ ವೊಂದು ವೈರಲ್‌ ಆದ ಬೆನ್ನಲ್ಲೇ ಮಾಲಿವುಡ್‌ ಸಿನಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಅಲ್ಫೋನ್ಸ್ ಪುತ್ರನ್ ಮಲಯಾಳಂನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಮಾಲಿವುಡ್‌ ನಲ್ಲಿ ಲವ್‌ ಸ್ಟೋರಿಯನ್ನು ಭಿನ್ನವಾಗಿ ಹೇಳಿದ ನಿರ್ದೇಶಕರಲ್ಲಿ ಇವರು ಒಬ್ಬರು. ‘ಪ್ರೇಮಂ’ ಮತ್ತು ‘ನೇರಂ’ ಸಿನಿಮಾಗಳ ಮೂಲಕ ಹೊಸ ಸಂಚಲವನ್ನೇ ಸೃಷ್ಟಿಸಿದ ಅಲ್ಫೋನ್ಸ್ ಪುತ್ರನ್ ಸೋಮವಾರ(ಅ.30 ರಂದು) ಇನ್ಸ್ಟಾಗ್ರಾಮ್‌ ಪೋಸ್ಟ್‌ ವೊಂದನ್ನು ಹಾಕಿ ಸಿನಿಮಾರಂಗದಿಂದ ದೂರ ಉಳಿವುದಾಗಿ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅವರ ಈ ನಿರ್ಧಾರ ಅನೇಕ ಕಲಾವಿದರಿಗೂ ಶಾಕ್‌ ನೀಡಿದೆ.

ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಕೆಲವೇ ನಿಮಿಷದಲ್ಲಿ ಅಲ್ಫೋನ್ಸ್ ಪುತ್ರನ್ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ.

ಪೋಸ್ಟ್‌ ನಲ್ಲಿ ಏನಿತ್ತು?:

“ನಾನು ನನ್ನ ಸಿನಿಮಾ ಥಿಯೇಟರ್ ವೃತ್ತಿಜೀವನವನ್ನು ನಿಲ್ಲಿಸುತ್ತಿದ್ದೇನೆ. ನನಗೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಇದೆ ಎಂದು ನಾನೇ ಕಂಡುಕೊಂಡಿದ್ದೇನೆ. ನಾನು ಬೇರೆಯವರಿಗೆ ಹೊರೆಯಾಗಲು ಬಯಸುವುದಿಲ್ಲ. ನಾನು ಹಾಡುಗಳು , ವೀಡಿಯೊಗಳು ಮತ್ತು ಕಿರುಚಿತ್ರಗಳನ್ನು ಮಾಡುವುದನ್ನು ಮುಂದುವರಿಸುತ್ತೇನೆ. ಓಟಿಟಿಯಲ್ಲೇ ಗರಿಷ್ಠ ಪ್ರಾಜೆಕ್ಟ್‌ ಗಳನ್ನು ಮಾಡುತ್ತೇನೆ. ನನಗೆ ಸಿನಿಮಾ ಕ್ಷೇತ್ರ ಬಿಡಲು ಇಷ್ಟವಿಲ್ಲ. ಆದರೆ ನನಗೆ ಬೇರೆ ಯಾವ ಆಯ್ಕೆಯೂ ಇಲ್ಲ. ನಾನು ಉಳಿಸಿಕೊಳ್ಳಲು ಸಾಧ್ಯವಾಗದ ಭರವಸೆಗಳನ್ನು ನೀಡಲು ಬಯಸುವುದಿಲ್ಲ. ಆರೋಗ್ಯವು ದುರ್ಬಲವಾದಾಗ ಅಥವಾ ಊಹಿಸಲಾಗದ ಸ್ಥಿತಿಗೆ ಬಂದಾಗ ಜೀವನದಲ್ಲಿ ಹಲವು ಟ್ವಿಸ್ಟ್‌ ಗಳನ್ನು ತರುತ್ತದೆ” ಎಂದು ಬರೆದುಕೊಂಡಿದ್ದರು.

“ನಾನು ಆರೋಗ್ಯವಾಗಿಲ್ಲದಿದ್ದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ಇದಕ್ಕೆ ಕಾರಣ ಏನು ಎಂದು ನನಗೆ ತಿಳಿದಿಲ್ಲ. ನನಗೆ ಬಾಲ್ಯದಿಂದಲೂ ಈ ಸಮಸ್ಯೆ ಇತ್ತು. ಇದು ಆಟಿಸಂ ಎಂದು ಗೊತ್ತಾಯಿತು. ಹಾಗಾಗಿ ನನ್ನ ಸಿನಿಮಾಗಳು ವಿಳಂಬವಾಯಿತೆಂದು ನಾನು ಭಾವಿಸುತ್ತೇನೆ. ಆದರೆ ನಾನು ನಿಮ್ಮೆಲ್ಲರಿಗೂ ಮನರಂಜನೆ ನೀಡುವುದನ್ನು ನಿಲ್ಲಿಸುವುದಿಲ್ಲ.

ಸದ್ಯ ಪೋಸ್ಟ್‌ ನ್ನು ಅವರು ಡಿಲೀಟ್‌ ಮಾಡಿದ್ದು, ಅದರ ಸ್ಕ್ರೀನ್‌ ಶಾಟ್‌ ಎಲ್ಲೆಡೆ ವೈರಲ್‌ ಆಗಿದೆ.

ನಿವಿನ್ ಪೌಲಿ ಮತ್ತು ನಜ್ರಿಯಾ ಜೊತೆಗಿನ ‘ನೇರಂ’ ಚಿತ್ರದ ಮೂಲಕ ಅಲ್ಫೋನ್ಸ್ ಪುತ್ರನ್ ನಿರ್ದೇಶನಕ್ಕಿಳಿದರು. ಈ ಸಿನಿಮಾ ಮಲಯಾಳಂ ತಮಿಳಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತು. ಆದರೆ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ‘ಪ್ರೇಮಂʼ ಸಿನಿಮಾ. ಈ ಸಿನಿಮಾ ಚೆನ್ನೈನಲ್ಲಿ 200 ದಿನ ಓಡಿತ್ತು. ʼಪ್ರೇಮಂʼ ಬಳಿಕ ಅವರು ‘ಅವಿಯಲ್’ ಸಿನಿಮಾವನ್ನು ಮಾಡಿದ್ದರು. ಆದಾದ ಬಳಿಕ ʼಗೋಲ್ಡ್‌ʼ ಸಿನಿಮಾವನ್ನು‌ ಮಾಡಿದ್ದರು.

ಫಾಹದ್‌ ಪಾಸಿಲ್‌ ಜೊತೆ ಸಿನಿಮಾ ಮಾಡುವುದಾಗಿ ಅವರು ಘೋಷಿಸಿದ್ದರು. ಆದರೆ ಅದು ಇದುವರೆಗೆ ಸಟ್ಟೇರಿಲ್ಲ. ಅಲ್ಫೋನ್ಸ್ ಸ್ಯಾಂಡಿ, ಕೋವೈ ಸರಳಾ ಮತ್ತು ಸಹನಾ ಅವರೊಂದಿಗೆ ಇತ್ತೀಚೆಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು.

 

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.