ರಾಜ್ಯಸಭಾ ಸ್ಥಾನದ ಆಫರ್ ರಿಜೆಕ್ಟ್ ಮಾಡಿದರೆ ನಟ ಸೋನು ಸೂದ್ ?
Team Udayavani, Aug 3, 2021, 1:25 PM IST
ಮುಂಬೈ : ನಟ ಸೋನು ಸೂದ್ ಅವರು ಈ ದೇಶದ ಪ್ರಧಾನಿಯಾಗಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ತನ್ನ ಫ್ಯಾನ್ಸ್ ಗಳ ಈ ಬಯಕೆಗೆ ನಗುತ್ತಲೆ ಉತ್ತರಿಸಿರುವ ಸೋನು, ನಾನು ರಾಜಕೀಯಕ್ಕೆ ಬರೋಲ್ಲ ಎಂದಷ್ಟೆ ಹೇಳಿದ್ದಾರೆ. ಸೋಷಿಯಲ್ ವರ್ಕ್ ಮೂಲಕ ರಿಯಲ್ ಹೀರೋ ಆಗಿರುವ ಈ ನಟ ರಾಜಕೀಯಕ್ಕೆ ಬರಲೇ ಬಾರದು ಎಂದು ದೃಢ ನಿಶ್ಚಯ ಮಾಡಿಕೊಂಡಂತಿದೆ..ಯಾಕೆ ಅಂತಿರಾ ?
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವೊಂದು ( ಹೆಸರು ಬಹಿರಂಗವಾಗಿಲ್ಲ) ಸೋನು ಸೂದ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಲು ಮುಂದಾಗಿದೆಯಂತೆ. ಈ ಕುರಿತು ಈ ನಟನ ಜೊತೆ ಮಾತುಕತೆ ಕೂಡ ನಡೆಸಿದೆಯಂತೆ. ಆದರೆ, ಸೋನು ಮಾತ್ರ ತನ್ನನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಯವಾಗಿಯೆ ತಿರಸ್ಕರಿಸಿದ್ದಾರಂತೆ. ತನ್ನನ್ನು ರಾಜಕೀಯಕ್ಕೆ ಕರೆತರಲು ಇಚ್ಛಿಸಿದ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಅವರು, ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದಾರಂತೆ.
ಸೋನು ರಾಜಕೀಯಕ್ಕೆ ಬರಲಿ. ಇಂತಹ ಸೇವಾ ಮನೋಭಾವದವರು ನಮ್ಮ ನೇತಾರರಾಗಲಿ ಎಂದು ಜನರು ಬಯಸುತ್ತಿದ್ದಾರೆ. ಇದಕ್ಕೆ ಕಾರಣ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಹೇರಲಾದ ಲಾಕ್ ಡೌನ್ ವೇಳೆ ಸೋನು ಸೂದ್ ಮಾಡಿದ ಕಾರ್ಯಗಳು. ಮುಂಬೈನಲ್ಲಿ ಬೀದಿಯಲ್ಲಿ ನಿರ್ಗತಿಕರಂತೆ ತಂಗಿದ್ದ ಕೂಲಿ ಕಾರ್ಮಿಕರನ್ನು ಅವರ ತವರು ತಲುಪಿಸುವುದರಿಂದ ಶುರುವಾದ ಇವರ ಪರೋಪಕಾರಿ ಕಾರ್ಯ ಹಲವು ಬಗೆಯಲ್ಲಿ ನಡೆದೆ ಇವೆ. ಕಷ್ಟ ಅಂತ ಹೇಳಿಕೊಂಡು ಬಂದವರಿಗೆ ಸ್ಪಂದಿಸುವ ಮಾತೃ ಹೃದಯದ ಸೋನು ಸೂದ್ ರಾಜಕೀಯಕ್ಕೆ ಬಂದರೆ ಮತ್ತಷ್ಟು ಒಳ್ಳೆಯ ಕೆಲಸಗಳು ಆಗಬಹುದು ಎನ್ನುವುದು ಅವರ ಬೆಂಬಲಿಗರ ಉದ್ದೇಶವಾಗಿದೆ. ಆದರೆ, ಸೋನು ಅವರು ಈ ಮೊದಲು ತಾವಾಡಿದ ಮಾತುಗಳಿಗೆ ಬದ್ಧರಾಗಿ ಉಳಿದುಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ