ಛೇ..ಶ್ರೀದೇವಿಯ ಮಹದಾಸೆ ಹಾಗೆಯೇ ಉಳಿದುಹೋಯಿತು!
Team Udayavani, Feb 25, 2018, 4:57 PM IST
ಮುಂಬಯಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಸಾಟಿಯಿಲ್ಲದ ನಟಿ ಶ್ರೀದೇವಿ ಅವರಿಗಿದ್ದ ಮಹದಾಸೆ ಈಡೇರದೆ ಹೋಗಿದೆ. ಹಿರಿಯ ಮಗಳಾದ ಜಾನ್ವಿನ್ನು ಹಿರಿತೆರೆಯ ಮೇಲೆ ನೋಡಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ಶ್ರೀದೇವಿ ಚಿತ್ರ ಬಿಡುಗಡೆಗೂ ಮುನ್ನ ಯಾವ ಮುನ್ಸೂಚನೆ ಇಲ್ಲದೆ ಮರೆಯಾಗಿದ್ದಾರೆ.
ಜಾನ್ವಿಗೆ ನಟನಾ ತರಬೇತಿಯನ್ನೂ ಕೊಡಿಸಿ ,ಸ್ವಯಂ ಟಿಪ್ಸ್ಗಳನ್ನೂ ನೀಡುತ್ತಿದ್ದ ಶ್ರೀದೇವಿ ‘ಧಡಕ್’ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ಗೆ ಪ್ರತಿನಿಧಿಯೊಂದನ್ನು ನೀಡಲು ಮುಂದಾಗಿದ್ದರು.
ಮರಾಠಿಯ ಬ್ಲಾಕ್ ಬಸ್ಟರ್ ಪ್ರೇಮಕಥೆ ‘ಸೈರಾತ್’ ಚಿತ್ರದ ರಿಮೇಕ್ ಆಗಿರುವ ಧಡಕ್ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ಶೂಟಿಂಗ್ನಲ್ಲಿ ನಿರತರಾಗಿರುವ ವೇಳೆಯಲ್ಲೇ ತಾಯಿ ಶ್ರೀದೇವಿ ದುಬೈನಲ್ಲಿ ಬಾರದ ಲೋಕಕ್ಕೆ ಮರಳಿದ್ದಾರೆ.
ತಾಯಿಯ ಹಠಾತ್ ಅಗಲುವಿಕೆ ಜಾನ್ವಿಗೆ ಬರಸಿಡಿಲು ಬಂದೆರಗಿದಂತಾಗಿದ್ದು, ತೀವ್ರ ದುಃಖೀತರಾಗಿದ್ದಾರೆ.
ಇತ್ತೀಚೆಗೆ ಮಗಳ ಉತ್ತಮ ಭವಿಷ್ಯಕ್ಕಾಗಿ ಆಂಧ್ರದ ದೇವಾಲಯವೊಂದಕ್ಕೆ ತೆರಳಿ ಸರ್ಪ ಸಂಬಂಧಿ ಪೂಜಾ ಪುನಸ್ಕಾರಗಳನ್ನೂ ನೆರವೇರಿಸಿದ್ದರು ಎಂದು ತಿಳಿದು ಬಂದಿದೆ.
ಮಕ್ಕಳಿಬ್ಬರ ಉಜ್ವಲ ಭವಿಷ್ಯಕ್ಕಾಗಿ ಅಪಾರ ಕನಸು ಕಂಡಿದ್ದ ಶ್ರೀದೇವಿ ಪುತ್ರಿಯ ಮೊದಲ ಚಿತ್ರ ತೆರೆಕಾಣುವ ಮುನ್ನವೆ ಮರೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್