ಸುಶಾಂತ್ ಸೂಸೈಡ್ ಅಲ್ಲ, ದಾವೂದ್ ತಂಡದಿಂದ ಹತ್ಯೆ?ಮಾಜಿ ರಾ ಅಧಿಕಾರಿ ಆರೋಪವೇನು
ಇಡೀ ಮುಂಬೈ ನಗರಿ ಹಾಗೂ ಬಾಲಿವುಡ್ ಮೇಲೆ ದಾವೂದ್ ಬಲಿಷ್ಠವಾದ ಹಿಡಿತ ಹೊಂದಿದ್ದಾನೆ
Team Udayavani, Jul 11, 2020, 4:41 PM IST
ಮುಂಬೈ:ಬಾಲಿವುಡ್ ಯುವ ಪ್ರತಿಭೆ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಚರ್ಚೆ ಇನ್ನೂ ಮುಂದುವರಿದಿದೆ. ಅಷ್ಟೇ ಅಲ್ಲ ಸುಶಾಂತ್ ಆತ್ಮಹತ್ಯೆ ನಿಗೂಢತೆ ನಡುವೆ ಹಲವಾರು ಸಂಶಯಗಳು ಇದೀಗ ವ್ಯಕ್ತವಾಗತೊಡಗಿದೆ. ಅದಕ್ಕೆ ಹೊಸ ಸೇರ್ಪಡೆ ರಾ ಮಾಜಿ ಅಧಿಕಾರಿ ಎನ್ ಕೆ ಸೂದ್!
ದೇಶದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ರಾ ಮಾಜಿ ಅಧಿಕಾರಿ ಎನ್ ಕೆ ಸೂದ್ ಇದೀಗ ಹಲವಾರು ಪ್ರಶ್ನೆಗಳು ಮತ್ತು ವಿಷಯಗಳನ್ನು ಬಹಿರಂಗಗೊಳಿಸುವ ಮೂಲಕ ಸುಶಾಂತ್ ಸಾವಿನ ಕುರಿತ ಅನುಮಾನಗಳು ಮತ್ತಷ್ಟು ಹೆಚ್ಚಾಗತೊಡಗಿದೆ ಎಂದು ವರದಿ ತಿಳಿಸಿದೆ.
ದಾವೂದ್ ನಿಂದ ಸುಶಾಂತ್ ಸಿಂಗ್ ಹತ್ಯೆ!
ಭೂಗತ ಪಾತಕಿ ದಾವೂದ್ ಇಬ್ರಾಹಿಂ ವ್ಯವಸ್ಥಿತ ಸಂಚು ನಡೆಸುವ ಮೂಲಕ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸಹಚರರ ಮೂಲಕ ಹತ್ಯೆಗೈದಿರುವುದಾಗಿ ಸೂದ್ ಆರೋಪಿಸಿದ್ದಾರೆ. ರಾ ಮಾಜಿ ಅಧಿಕಾರಿ ಸೂದ್ ವಿಡಿಯೋದಲ್ಲಿ ತಿಳಿಸಿರುವಂತೆ, ದಾವೂದ್ ಈಗ ಮುಂಬೈನಲ್ಲಿ ಇಲ್ಲದಿರಬಹುದು. ಆದರೆ ಇಡೀ ಮುಂಬೈ ನಗರಿ ಹಾಗೂ ಬಾಲಿವುಡ್ ಮೇಲೆ ದಾವೂದ್ ಬಲಿಷ್ಠವಾದ ಹಿಡಿತ ಹೊಂದಿದ್ದಾನೆ ಎಂದು ತಿಳಿಸಿದ್ದಾರೆ. ಸುಶಾಂತ್ ಸಾಯುವ ಮುನ್ನ ದಾವೂದ್ ಸಹಚರರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿಂಗ್ 50 ಬಾರಿ ಸಿಮ್ ಕಾರ್ಡ್ ಬದಲಾಯಿಸಿದ್ದರು. ತಾನು ಮನೆಯಲ್ಲಿ ಮಲಗಿದರೆ ತನ್ನನ್ನು ಹತ್ಯೆಗೈಯಬಹುದು ಎಂಬ ಜೀವ ಭಯದಿಂದ ಸುಶಾಂತ್ ಕಾರನ್ನು ದೂರದಲ್ಲಿಟ್ಟು ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ.
ಸಿಂಗ್ ಸಾವಿನ ಕುರಿತು ಸೂದ್ ವಾದವೇನು?
ಸೂದ್ ಅವರ ಪ್ರಕಾರ, ಸುಶಾಂತ್ ಅವರನ್ನು ಪ್ರೊಫೆಶನಲ್ ಕ್ರಿಮಿನಲ್ ಗಳೇ ಹತ್ಯೆಗೈದಿದ್ದಾರೆ. ಸುಶಾಂತ್ ಸಾವಿಗೂ ಮುನ್ನ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿದ್ದ ಸಿಸಿಟಿವಿ ಹಾಳಾಗಿದ್ದೇಕೆ? ಮನೆಯ ಡೂಪ್ಲಿಕೇಟ್ ಕೀ ಕೂಡಾ ಮಿಸ್ ಆಗಿದೆ. ಇವೆಲ್ಲವೂ ನಟ ಸುಶಾಂತ್ ಅವರನ್ನು ಕೊಲೆಗೈಯಲಾಗಿದೆ ಎಂಬುದಕ್ಕೆ ಪುರಾವೆಯಾಗಿದೆ ಎಂದು ದೂರಿದ್ದಾರೆ.
ಸುಶಾಂತ್ ಎದುರಿಸುತ್ತಿದ್ದ ಜೀವ ಭಯದ ಬಗ್ಗೆ ಆತನ ಪ್ರೇಯಸಿ ರಿಯಾ ಚಕ್ರವರ್ತಿ, ಆತನ ಆಪ್ತ ಸ್ನೇಹಿತ ಸಂದೀಪ್ ಸಿಂಗ್ ಹಾಗೂ ಮನೆಯ ಕೆಲಸದಾಳಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವರೆಲ್ಲರು ಇವೆಲ್ಲದರಿಂದ ದೂರ ಸರಿದ ಪರಿಣಾಮ ನಟ ಸಿಂಗ್ ಒಬ್ಬಂಟಿಯಾಗುವಂತಾಗಿತ್ತು ಎಂದು ತಿಳಿಸಿದ್ದಾರೆ.
ಸೂದ್ ಅವರ ವಿಡಿಯೋದಲ್ಲಿ ಬಾಲಿವುಡ್ ಬಿಗ್ ಸ್ಟಾರ್ ಗಳಾದ ಸಲ್ಮಾನ್ ಖಾನ್ ಮತ್ತು ಕರಣ ಜೋಹರ್ ಹೆಸರನ್ನು ಪ್ರಸ್ತಾಪಿಸಿದ್ದದಾರೆ, ಆದರೆ ಇವರ ಬಗ್ಗೆ ಯಾವುದೇ ಹೆಚ್ಚಿನ ವಿಷಯ ಬಹಿರಂಗಪಡಿಸಿಲ್ಲ. ಮುಂಬೈ ಪೊಲೀಸರು ತಾವು ಈ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ತೋರಿಸುತ್ತಿದ್ದಾರೆ. ಆದರೆ ಸತ್ಯಾಂಶ ಏನೆಂದರೆ ಅವರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ