ಸುಶಾಂತ್ಗೆ ಒತ್ತಾಯಪಡಿಸಿ ಡ್ರಗ್ಸ್ ನೀಡಲಾಗುತ್ತಿತ್ತು!
Team Udayavani, Sep 8, 2020, 3:42 AM IST
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಹೊಸ ಬೆಳವಣಿಗೆಯೆಂಬಂತೆ, ರಿಯಾ ಮತ್ತು ಆಕೆಯ ಆತ್ಮೀಯ ಬಳಗವು ಸುಶಾಂತ್ಗೆ ಒತ್ತಾಯಪೂರ್ವಕವಾಗಿ ಡ್ರಗ್ ನೀಡುತ್ತಿದ್ದರು ಎಂದು ಸುಶಾಂತ್ರ ಸ್ನೇಹಿತರೊಬ್ಬರು ಸೋಮವಾರ ಹೇಳಿದ್ದಾರೆ.
ಸುಶಾಂತ್ರ ಹಣಕಾಸು ವ್ಯವಹಾರದಿಂದ ಹಿಡಿದು ಎಲ್ಲವನ್ನೂ ರಿಯಾ ನಿಯಂತ್ರಿಸುತ್ತಿದ್ದರು. ಸುಶಾಂತ್ ಡ್ರಗ್ ಸೇವಿಸುತ್ತಿರಲಿಲ್ಲ. ಅಲ್ಲದೆ, ಇತರರಿಗೂ ಅದನ್ನು ಸೇವಿಸದಂತೆ ಸಲಹೆ ನೀಡುತ್ತಿದ್ದರು. ಆದರೆ, ರಿಯಾ ಮತ್ತು ಆಕೆಯ ಬಳಗವು ಭಾರೀ ಪ್ರಮಾಣ ದಲ್ಲಿ ಡ್ರಗ್ ಅನ್ನು ಸುಶಾಂತ್ಗೆ ನೀಡುತ್ತಿತ್ತು. ಅವರ ಮನೆಯಲ್ಲಿ ಸಾಕಷ್ಟು ಔಷಧಗಳು ಇದ್ದಿದ್ದನ್ನೂ ನಾನು ನೋಡಿದ್ದೇನೆ. ನಾನು ಈ ಕುರಿತ ಮಾಹಿತಿಯನ್ನು ಸಿಬಿಐಗೆ ನೀಡಿದ್ದೇನೆ ಎಂದೂ ಅವರು ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಇದೇ ವೇಳೆ, ಸತತ 2ನೇ ದಿನವೂ ರಿಯಾ ಎನ್ಸಿಬಿ ಮುಂದೆ ಹಾಜರಾಗಿದ್ದು, ಸೋಮ ವಾರವೂ ಸತತ ತನಿಖೆ ಎದುರಿಸಿದ್ದಾರೆ. ಅವರು ತನಿಖೆಯಲ್ಲಿ ಸೂಕ್ತ ಸಹಕಾರ ನೀಡುತ್ತಿದ್ದಾರೆ ಎಂದು ಎನ್ಸಿಬಿ ಹೇಳಿದೆ. ಭಾನುವಾರವಷ್ಟೇ
ಸತತ 6 ಗಂಟೆಗಳ ಕಾಲ ಅವರು ತನಿಖೆ ಎದುರಿಸಿದ್ದರು.
ಸುಶಾಂತ್ ಸೋದರಿ ವಿರುದ್ಧ ಕೇಸ್: ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ರಿಯಾ ಸೋಮವಾರ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಸುಶಾಂತ್ಗೆ ಔಷಧ ನೀಡುವಾಗ “ನಕಲು ಮಾಡಿದಂತಹ ವೈದ್ಯರ ಚೀಟಿ’ಯನ್ನು ಸಿದ್ಧಪಡಿಸಲಾಗಿತ್ತು ಎಂದು ರಿಯಾ ಆರೋಪಿಸಿದ್ದಾರೆ.
ಈ ನಡುವೆ, ಸುಶಾಂತ್ಗೆ ವಿಷವುಣಿಸಲಾಗಿತ್ತೇ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಏಮ್ಸ್ ವೈದ್ಯರ ತಂಡ ಪರೀಕ್ಷೆ ಆರಂಭಿಸಿದೆ. ಮುಂದಿನ 10 ದಿನಗಳಲ್ಲಿ ಈ ಕುರಿತು ವರದಿ ನೀಡಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ