ಆಶ್ವಾಸನೆಗಷ್ಟೇ ಸೀಮಿತವಾದ ಎಂಎಲ್‌ಎ


Team Udayavani, Nov 11, 2018, 11:19 AM IST

pratham-sonal.jpg

ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಜಕೀಯ ರಂಗ, ರಂಗು-ರಂಗಾಗಿರುತ್ತದೆ. ಇಂತಹ ರಾಜಕೀಯವನ್ನು ಚಿತ್ರದ ಮೂಲಕ ತೆರೆಮೇಲೆ ತಂದರೆ ಅದರ ರಂಗು ಹೇಗಿರಬಹುದು? ಇಂಥದ್ದೊಂದು ರಾಜಕೀಯ ಚಿತ್ರಣವನ್ನು ತೆರೆಮೇಲೆ ಕಟ್ಟಿಕೊಡಲು ಹೊರಟಿರುವುದು “ಎಂಎಲ್‌ಎ’ ಚಿತ್ರ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ಪಡ್ಡೆ ಹುಡುಗರ ತುಂಟಾಟ, ರಾಜಕೀಯ ಚದುರಂಗದಾಟ, ನಡುವೆ ಪ್ರೀತಿಯ ಕಣ್ಣಾಮುಚ್ಚಾಲೆ ಇವಿಷ್ಟೂ ಸೇರಿದರೆ, “ಎಂಎಲ್‌ಎ’ ಚಿತ್ರವಾಗುತ್ತದೆ. 

ಕೆಲಸ-ಕಾರ್ಯವಿಲ್ಲದೆ, ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದುವ ಒಳ್ಳೆ ಹುಡ್ಗ ಪ್ರಥಮ್‌ಗೆ ಒಂದಷ್ಟು ತರಲೆ ಸ್ನೇಹಿತರು. ಹೀಗೆ ಒಂದಷ್ಟು ತರಲೆ ಕೆಲಸಗಳನ್ನು ಮಾಡಿಕೊಂಡಿರುವಾಗಲೇ ನಡುವೆ ಸಿಗುವ‌ ಹುಡುಗಿಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಇದೇ ಹೊತ್ತಿಗೆ ಚುನಾವಣೆ ಕೂಡ ಘೋಷಣೆಯಾಗುತ್ತದೆ. ಅಚಾನಕ್‌ ಆಗಿ ನಡೆಯುವ ಸನ್ನಿವೇಶದಲ್ಲಿ ಒಳ್ಳೆ ಹುಡ್ಗ ಪ್ರಥಮ್‌ ಹಾಲಿ ನಗರಾಭಿವೃದ್ಧಿ ಸಚಿವರ ವಿರುದ್ದ ಚುನಾವಣೆಗೆ ನಿಲ್ಲಬೇಕಾಗುತ್ತದೆ.

ಅಲ್ಲಿಯವರೆಗೆ ಮಾಡಿದ ಪರೋಪಕಾರಿ ಕೆಲಸಗಳು ಈಗ ಪ್ರಥಮ್‌ ಕೈ ಹಿಡಿಯುತ್ತವೆ. ಕೇವಲ ನೂರು ವೋಟ್‌ ತೆಗೆದುಕೊಂಡು ತನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಎಂದು ಹೊರಟ ಪ್ರಥಮ್‌, ನೋಡುನೋಡುತ್ತಿದ್ದಂತೆ ಸಾವಿರಾರು ವೋಟ್‌ ಲೀಡ್‌ ತೆಗೆದುಕೊಂಡು ಹಾಲಿ ಸಚಿವರನ್ನು ಸೋಲಿಸಿ, ಎಂಎಲ್‌ಎ ಪ್ರಥಮ್‌ ಆಗುತ್ತಾನೆ. ಸರ್ಕಾರ ರಚನೆಗೆ ಕೇವಲ ಒಂದೇ ಒಂದು ಮತ ಮ್ಯಾಜಿಕ್‌ ನಂಬರ್‌ ಆಗಿದ್ದರಿಂದ, ಪಕ್ಷೇತರ ಎಂಎಲ್‌ಎ ಪ್ರಥಮ್‌ಗೆ ಎಲ್ಲಿಲ್ಲದ ಬೇಡಿಕೆ!

ಇದೇ ಅವಕಾಶವನ್ನು ಬಳಸಿಕೊಂಡು ತನ್ನ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟು ಎಂಎಲ್‌ಎ ಪ್ರಥಮ್‌ ಅಂದುಕೊಂಡಂತೆ ನಗರಾಭಿವೃದ್ಧಿ ಸಚಿವನಾಗುತ್ತಾನೆ. ರಾಜಕೀಯದ ಆಳ-ಅಗಲ ಗೊತ್ತಿಲ್ಲ ಎಂಎಲ್‌ಎ ಕಂ ನಗರಾಭಿವೃದ್ಧಿ ಸಚಿವ ಮುಂದೇನು ಮಾಡುತ್ತಾನೆ? ಪ್ರಥಮ್‌ ಅಧಿಕಾರವಧಿಯಲ್ಲಿ ಏನೇನು ಕೆಲಸ-ಕಾರ್ಯಗಳು ಆಗುತ್ತವೆ? ಬಚ್ಚಾ ಎಂದು ಕರೆಸಿಕೊಳ್ಳುವ ಹುಡ್ಗ ಹೇಗೆ ಅಚ್ಚಾ ಎಂದೆನಿಸಿಕೊಳ್ಳುತ್ತಾನಾ? ಅನ್ನೋದೇ ಚಿತ್ರದ ಕಥಾಹಂದರ.

ಇದನ್ನ ಕಣ್ಣಾರೆ ಕಾಣಬೇಕೆಂಬ ಕುತೂಹಲವಿದ್ದರೆ, ನೀವು “ಎಂಎಲ್‌ಎ’ ಚಿತ್ರವನ್ನು ನೋಡಬಹುದು. ಯಾವುದೇ ಹೊಸತನವಿಲ್ಲದೆ ಸರಳ ಕಥೆಯೊಂದನ್ನು, ಒಂದಷ್ಟು ಮೇಲೊಗರ, ಒಗ್ಗರಣೆ ಸೇರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಮೌರ್ಯ. ಕಥೆಗಿಂತ ಹೆಚ್ಚಾಗಿ ಸನ್ನಿವೇಶಗಳ ಮೂಲಕ ನೋಡುಗರನ್ನು ರಂಜಿಸಲು ಮುಂದಾಗಿರುವ ನಿರ್ದೇಶಕರು ಅದಕ್ಕೆ ತಕ್ಕಂತೆ ದೃಶ್ಯಗಳನ್ನು ಜೋಡಿಸಿ ಜಾಣ್ಮೆ ಮೆರೆದಿದ್ದಾರೆ.

ಅದನ್ನೂ ಹೊರತುಪಡಿಸಿದರೆ, ಚಿತ್ರದ ಬೇರಾವ ಸಂಗತಿಗಳು ಗಮನ ಸೆಳೆಯುವುದಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಪ್ರಥಮ್‌ ಬಿಗ್‌ಬಾಸ್‌ ಮನೆಯೊಳಗೆ-ಹೊರಗೆ ಹೇಗೆ ವರ್ತಿಸುತ್ತಿದ್ದರೊ ಅದೇ ವರ್ತನೆ ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ನಾಯಕಿ ಸೋನಾಲ್‌ ಮೊಂತೆರೋ ಮತ್ತು ರೇಖಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಪ್ರೇಕ್ಷಕರನ್ನು ನಗಿಸುವ ಸಲುವಾಗಿಯೇ ಸೃಷ್ಟಿಸಿದ ಕುರಿ ಪ್ರತಾಪ್‌ ಮತ್ತಿತರ ಪಾತ್ರಗಳು ಅಲ್ಲಲ್ಲಿ ಒಂದಷ್ಟು ನಗುತರಿಸುತ್ತವೆ.

ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ವಿಕ್ರಮ್‌ ಸುಬ್ರಮಣ್ಯ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿವೆ. ಕೃಷ್ಣ ಸಾರಥಿ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಕೆ.ಆರ್‌ ಲಿಂಗರಾಜು ಸಂಕಲನ ಕೆಲವು ಕಡೆಗಳಲ್ಲಿ ಇನ್ನಷ್ಟು ಮೊನಚಾಗಿದ್ದರೆ, ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗುವವರಿಗೆ “ಎಂ.ಎಲ್‌.ಎ’ ಹಿಡಿಸುವುದು ತುಸು ಕಷ್ಟ ಎನ್ನಬಹುದು. 

ಚಿತ್ರ: ಎಂಎಲ್‌ಎ
ನಿರ್ಮಾಣ: ವೆಂಕಟೇಶ್‌ ರೆಡ್ಡಿ 
ನಿರ್ದೇಶನ: ಮೌರ್ಯ
ತಾರಾಗಣ: ಪ್ರಥಮ್‌, ಸೋನಾಲ್‌ ಮಂತೇರೋ, ರೇಖಾ, ಕುರಿ ಪ್ರತಾಪ್‌, ರಾಜಶೇಖರ್‌, ನವೀನ್‌ ಪಡೀಲ್‌, ಚಂದ್ರಕಲಾ ಮೋಹನ್‌, ಕುರಿರಂಗ, ಹೆಚ್‌.ಎಂ ರೇವಣ್ಣ ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.