ಹುಡುಗರು ಸಿದ್ಧರಿಲ್ಲ, ಅಂಕಲ್ಸ್ ಆದ್ರೂ ಓಕೆ: ನನ್ನ ತಾಯಿಗೆ 2ನೇ ಮದುವೆ ಮಾಡಬೇಕೆಂದ ನಟಿ
Team Udayavani, Mar 27, 2024, 5:52 PM IST
ಹೈದರಾಬಾದ್: ಟಾಲಿವುಡ್ ಸಿನಿರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಸುರೇಖಾ ವಾಣಿ ಅವರ ಬಗ್ಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಹತ್ತಾರು ಸಿನಿಮಾದಲ್ಲಿ ನಾನಾ ಪಾತ್ರಗಳನ್ನು ಮಾಡಿ ಸೈ ಎನ್ನಿಸಿರುವ ಸುರೇಖಾ ವಾಣಿ ಇತ್ತೀಚೆಗಿನ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಮ್ಮಿಯಾಗಿದೆ.
ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ಮಗಳು ಸುಪ್ರೀತಾ ಜೊತೆ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾರೆ. ಪ್ರವಾಸಿ ತಾಣಕ್ಕೆ ಹೋಗುತ್ತಾ ತಮ್ಮ ಲೈಫ್ ನ್ನು ಎಂಜಾಯ್ ಮಾಡುತ್ತಿದ್ದಾರೆ.
ಸುರೇಖಾ ವಾಣಿ ಅವರ ವಿವಾಹ ಕಿರುತೆರೆ ನಿರ್ದೇಶಕ ಸುರೇಶ್ ತೇಜಾ ಜೊತೆ ಆಗಿತ್ತು. ಆದರೆ ದೀರ್ಘಕಾಲದ ಅನಾರೋಗ್ಯದಿಂದ 2019 ಸುರೇಶ್ ತೇಜಾ ಕೊನೆಯುಸಿರೆಳೆದರು. ಆ ಬಳಿಕ ಮಗಳು ಸುಪ್ರೀತಾ ಜೊತೆಯೇ ಸುರೇಖಾ ದಿನ ಸಾಗಿಸುತ್ತಿದ್ದಾರೆ.
ಪತಿಯ ನಿಧನದ ಬಳಿಕ ಸುರೇಖಾ ಅವರ ಎರಡನೇ ಮದುವೆಯ ಬಗ್ಗೆ ಅನೇಕ ಬಾರಿ ಸುದ್ದಿಗಳು ಹರಿದಾಡಿದೆ. ಆದರೆ ಅದ್ಯಾವುದಕ್ಕೂ ಸುರೇಖಾ ತಲೆಕೆಡಿಸಿಕೊಂಡಿಲ್ಲ. ತಾಯಿಗೆ ಎರಡನೇ ಮದುವೆ ಮಾಡಿಸಬೇಕೆಂದು ಆಗಾಗ ಹೇಳುವ ಸುಪ್ರೀತಾ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ವೈರಲ್ ಆಗಿದೆ.
ಸುರೇಖಾ ಮಗಳು ಸುಪ್ರೀತಾ ಬಿಗ್ ಬಾಸ್ ಖ್ಯಾತಿಯ ಅಮರ್ ದೀಪ್ ಚೌಧರಿ ಜೊತೆಗಿನ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಟಾಲಿವುಡ್ ಗೆ ಎಂಟ್ರಿ ಆಗಲಿದ್ದಾರೆ. ಇತ್ತೀಚೆಗೆ ʼದಾವತ್ʼ ಎನ್ನುವ ತೆಲುಗು ಕಾರ್ಯಕ್ರಮದಲ್ಲಿ ಸುಪ್ರೀತಾ ಅವರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅವರು, ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಬೇಕೆಂಬ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. “ತಂದೆ ತೀರಿಕೊಂಡ ಬಳಿಕ ತನ್ನ ತಾಯಿಗೆ ಎರಡನೇ ಮದುವೆ ಆಗುವಂತೆ ಅನೇಕರು ಹೇಳಿದ್ದಾರೆ. ಆದರೆ ತಾಯಿ ಇದಕ್ಕೆ ಒಪ್ಪಿಲ್ಲ. ನನ್ನ ತಾಯಿಯನ್ನು ಮದುವೆ ಆಗಲು ಹುಡುಗರು ಸಿದ್ಧರಿಲ್ಲ. ಅಂಕಲ್ ಆದರೂ ಸರಿ ಆಕೆಯನ್ನು ಚೆನ್ನಾಗಿ ನೋಡಿಕೊಂಡು, ಆಕೆಗೆ ಕಷ್ಟ ನೀಡದವರಾಗಿದ್ದರೆ ಸಾಕು. ಮದುವೆ ಮಾಡಿಸುತ್ತೇನೆ” ಎಂದು ಹೇಳಿದ್ದಾರೆ.
ತಾನು ಈ ಹಿಂದೆ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಆತ ಸ್ಲಿವ್ ಲೆಸ್ ಹಾಕಬೇಡ. ಲಿಪ್ ಸ್ಟಿಕ್ ಹಾಕಬೇಡ, ನೇಲ್ ಪಾಲಿಶ್ ಮಾಡ್ಬೇಡ ಎಂದು ನಿರ್ಬಂಧವನ್ನು ಹಾಕಿದ್ದರು. ಇದನ್ನು ಸಹಿಸದೆ ಬ್ರೇಕಪ್ ಆಯಿತು.
ನಟಿಯಾಗಿ ಒಳ್ಳೆಯ ಹೆಸರು ಮಾಡುವ ಆಸೆಯಿದೆ. ವಿಜಯ್ ದೇವರಕೊಂಡ ಅಂದರೆ ಇಷ್ಟ. ಅವರೊಂದಿಗೆ ಸಿನಿಮಾ ಮಾಡುವ ಆಸೆಯಿದೆ ಎಂದಿದ್ದಾರೆ.
ಇನ್ನು ತಮ್ಮ ಮದುವೆ ಬಗ್ಗೆ ಮಾತನಾಡಿರುವ ಅವರು, ಲವ್ ಮ್ಯಾರೇಜ್ ಆದರೂ, ಆರೇಂಜ್ ಮ್ಯಾರೇಜ್ ಆದರೂ ಸರಿ ಅಮ್ಮ ಹೇಳಿದವರನ್ನು ನಾನು ಮದುವೆ ಆಗುತ್ತೇನೆ. ಅದಕ್ಕೆ ಇನ್ನು ಸಾಕಷ್ಟು ಸಮಯವಿದೆ ನೋಡೋಣ ಎಂದು ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್ ಟೀಸರ್ ಔಟ್
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ