ಸಾವಿನ ಘೋಷಣೆಗೆ ಸಿದ್ಧತೆ ನಡೆದಿತ್ತು ; ಸಂದರ್ಶನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಉಲ್ಲೇಖ
Team Udayavani, May 5, 2020, 12:56 AM IST
ಲಂಡನ್: ಕೋವಿಡ್ ಸೋಂಕಿತರಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಪರಿಸ್ಥಿತಿ ಕೈಮೀರಿದೆ ಎಂಬ ಅರಿವಿತ್ತು. ವೈದ್ಯರು ನನ್ನ ಸಾವಿನ ಘೋಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಬ್ರಿಟನ್ನ ‘ದಿ ಸನ್’ ಪತ್ರಿಕೆಗೆ ಭಾನುವಾರ ಸಂದರ್ಶನ ನೀಡಿರುವ ಅವರು, ಕೋವಿಡ್ ಸೋಂಕಿತರಾಗಿದ್ದಾಗ ಎದುರಿಸಿದ ಸನ್ನಿವೇಶ ಕಠಿಣ ಕ್ಷಣಗಳಾಗಿದ್ದವು. ಇದರಿಂದ ಪಾರಾಗುವುದು ಹೇಗೆ ಎಂದು ಚಿಂತಿಸುತ್ತಿದ್ದೆ.
ಆದರೆ, ಸಾಯುತ್ತೇನೆ ಎಂದು ಯೋಚಿಸಲಿಲ್ಲ, ಐಸಿಯುನಲ್ಲಿ ನನಗೆ ಲೀಟರ್ಗಟ್ಟಲೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಆಗ ನಿರಾಶೆಗೊಂಡಿದ್ದೆ. ಆಕ್ಸಿಜನ್ ವ್ಯವಸ್ಥೆಯಲ್ಲಿ ನನ್ನನ್ನು ಇಡಬೇಕಾ ಎಂಬ ಬಗ್ಗೆ ವೈದ್ಯರು ಚರ್ಚಿಸುತ್ತಿದ್ದಾಗ ನನಗೆ ವಾಸ್ತವ ಅರಿವಾಯಿತು.
ಈ ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಏನು ಮಾಡಬೇಕು ಎಂದು ವೈದ್ಯರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅಂದು ಸಾವಿನ ಘೋಷಣೆ ಮಾಡಲು ತಯಾರಿ ನಡೆಯುತ್ತಿದೆ ಎಂಬುದು ನನಗೆ ಅರಿವಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ನನಗೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕೋವಿಡ್ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿದ್ದು ಎಂದಿಗೂ ಮರೆಯಲಾರದ ಕ್ಷಣ ಎಂದು ಬ್ರಿಟನ್ ಪ್ರಧಾನಿ ಆಸ್ಪತ್ರೆ ವಾಸದ ಕ್ಷಣಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಪುತ್ರನಿಗೆ ವೈದ್ಯರ ಹೆಸರು?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಗೆಳತಿ ಕ್ಯಾರಿ ಸೈಮಂಡ್ಸ್ ಜೋಡಿಗೆ ಜನಿಸಿದ ಪುತ್ರನಿಗೆ ವಿಲ್ಫ್ರೆಡ್ ಲಾವ್ರಿ ‘ನಿಕೋಲಸ್’ ಜಾನ್ಸನ್ ಎಂದು ನಾಮಕರಣ ಮಾಡಲಾಗಿದೆ.
ಕೋವಿಡ್ ವೈರಸ್ ಬಾಧಿತರಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬೋರಿಸ್ ಜಾನ್ಸನ್ಗೆ ಇಬ್ಬರು ವೈದ್ಯರಾದ ಡಾ| ನಿಕ್ ಪ್ರಿನ್ಸ್ ಹಾಗೂ ಡಾ|ನಿಕ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಅವರ ಹೆಸರನ್ನು ಪುತ್ರನಿಗೆ ಇರಿಸಲಾಗಿದೆ. ಫೋಟೋವನ್ನು ಜಾನ್ಸನ್ ಗೆಳತಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ