ಭಾರತಕ್ಕೆ ಸಂಕಟ ತಂದ ಚೀನದ ಕಳಪೆ ಕಿಟ್‌ ;ದೋಷಪೂರಿತ ಕಿಟ್‌ ರವಾನಿಸಿದ ಕಮ್ಯೂನಿಸ್ಟ್‌ ರಾಷ್ಟ್ರ

2 ದಿನ ಕಿಟ್‌ ಬಳಸದಂತೆ ಕೇಂದ್ರ ಸೂಚನೆ; ತಜ್ಞರ ತಂಡದಿಂದ ಪರಿಶೀಲಿಸಿ ಕ್ರಮ

Team Udayavani, Apr 22, 2020, 5:11 AM IST

ಭಾರತಕ್ಕೆ ಸಂಕಟ ತಂದ ಚೀನದ ಕಳಪೆ ಕಿಟ್‌ ;ದೋಷಪೂರಿತ ಕಿಟ್‌ ರವಾನಿಸಿದ ಕಮ್ಯೂನಿಸ್ಟ್‌ ರಾಷ್ಟ್ರ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಕೋವಿಡ್ 19 ವೈರಸ್ ವಿಚಾರದಲ್ಲಿ ಸುಳ್ಳುಗಳ ಸರಮಾಲೆಯನ್ನೇ ಹೆಣೆಯುತ್ತ ಬಂದಿರುವ ಕಮ್ಯೂನಿಸ್ಟ್‌ ರಾಷ್ಟ್ರ ಚೀನವು ಈಗ ಭಾರತವೂ ಸೇರಿದಂತೆ ವಿದೇಶಗಳಿಗೆ ಕಳಪೆ ಕೋವಿಡ್ 19 ವೈರಸ್ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿದ್ದು, ಸಮಸ್ಯೆ ಸೃಷ್ಟಿಸಿದೆ.

ಚೀನ ಕಳುಹಿಸಿರುವ ಕಿಟ್‌ಗಳು ಲೋಪ ದೋಷಗಳಿಂದ ಕೂಡಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೊರೊನಾ ಮೂಲ ಮತ್ತು ತನ್ನಲ್ಲಿ ಆಗಿರುವ ಸಾವಿನ ಸಂಖ್ಯೆಯ ಬಗ್ಗೆ ಸತ್ಯ ಮುಚ್ಚಿಟ್ಟಿರುವ ಆರೋಪ ಎದುರಿಸುತ್ತಿರುವ ಕಮ್ಯೂನಿಸ್ಟ್ ರಾಷ್ಟ್ರದ ಕೋವಿಡ್‌ ಪರೀಕ್ಷಾ ಕಿಟ್‌ಗಳಲ್ಲಿ ಇರುವ ದೋಷ ಆತಂಕ ಹುಟ್ಟಿಸಿದೆ.

ಚೀನದಿಂದ ಆಮದಾಗಿರುವ ಕೋವಿಡ್ 19 ವೈರಸ್ ಸೋಂಕು ಪರೀಕ್ಷೆ ನಡೆಸುವ ಕಿಟ್‌ಗಳಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ 2 ದಿನ ಯಾರೂ ರ್ಯಾಪಿಡ್‌ ಟೆಸ್ಟ್ ಕೈಗೊಳ್ಳಬೇಡಿ ಎಂದು ರಾಜ್ಯ ಸರಕಾರಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ಮಂಗಳವಾರ ಸೂಚಿಸಿದೆ.

ರ್ಯಾಪಿಡ್‌ ಟೆಸ್ಟ್ ಕಿಟ್‌ಗಳ ಫ‌ಲಿತಾಂಶದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ ಎಂದು ಅನೇಕ ರಾಜ್ಯಗಳು ಆರೋಪಿಸಿದ್ದವು. ರಾಜಸ್ಥಾನ ಸರಕಾರ ಕೂಡ ಅಸ್ಪಷ್ಟ ಫ‌ಲಿತಾಂಶ ಬರುತ್ತಿರುವ ಕಾರಣ ಇಂಥ ಕಿಟ್‌ಗಳ ಬಳಕೆ ನಿಲ್ಲಿಸುತ್ತಿರುವುದಾಗಿ ಐಸಿಎಂಆರ್‌ಗೆ ಮಂಗಳವಾರ ಮಾಹಿತಿ ನೀಡಿತ್ತು. ಪಶ್ಚಿಮ ಬಂಗಾಲ ಸರಕಾರ ಕೂಡ ಕೇಂದ್ರ ನೀಡಿರುವ ಕಿಟ್‌ನಿಂದ ಸರಿಯಾದ ಫ‌ಲಿತಾಂಶ ಲಭಿಸುತ್ತಿಲ್ಲ ಎಂದೂ ದೂರಿತ್ತು.

ತಜ್ಞರ ತಂಡದಿಂದ ಪರೀಕ್ಷೆ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಐಸಿಎಂಆರ್‌ನ ಹಿರಿಯ ವಿಜ್ಞಾನಿ ಡಾ| ರಾಮನ್‌ ಗಂಗಾಖೇಡ್ಕರ್‌, ಇದೊಂದು ಹೊಸ ಕಾಯಿಲೆ. ಕಳೆದ ಮೂರೂವರೆ ತಿಂಗಳಲ್ಲಿ ವಿಜ್ಞಾನಿಗಳು ಪಿಸಿಆರ್‌ ಕಿಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಐದು ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸಲು ಆರಂಭಿಸಲಾಗಿದೆ. ಹಿಂದೆಂದೂ ಯಾವುದೇ ರೋಗ ಬಂದಾಗಲೂ ಇಂಥ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಈಗ ಪರೀಕ್ಷಾ ಕಿಟ್‌ಗಳಲ್ಲಿ ಲೋಪದೋಷಗಳು ಇರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮೂರು ರಾಜ್ಯಗಳೊಂದಿಗೆ ಚರ್ಚಿಸಿದ್ದೇವೆ.

ದಯವಿಟ್ಟು ಮುಂದಿನ ಎರಡು ದಿನಗಳ ಕಾಲ ಯಾರೂ ರ್ಯಾಪಿಡ್‌ ಟೆಸ್ಟ್ ಕಿಟ್‌ ಮತ್ತು ಆರ್‌ಟಿ-ಪಿಸಿಆರ್‌ ಕಿಟ್‌ಗಳನ್ನು ಬಳಸಬೇಡಿ. ಆರೋಗ್ಯ ಸಚಿವಾಲಯದ ತಜ್ಞರ ತಂಡವು ಕಿಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೀಡಲಿದೆ. ಅದಾದ ಬಳಿಕ ಸಚಿವಾಲಯವೇ ಈ ಕುರಿತು ಮುಂದಿನ ನಿರ್ಧಾರ ಘೋಷಿಸಲಿದೆ ಎಂದಿದ್ದಾರೆ.

ಜತೆಗೆ ಒಂದು ವೇಳೆ ಹೆಚ್ಚಿನ ಕಿಟ್‌ಗಳಲ್ಲಿ ಇಂಥ ಲೋಪಗಳು ಕಂಡುಬಂದರೆ ನಾವು ಅವನ್ನು ವಾಪಸ್‌ ಕಳುಹಿಸಿ ಬದಲಿಸಿಕೊಡುವಂತೆ ಕಂಪೆನಿಗಳಿಗೆ ಸೂಚಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಬಳಕೆ ನಿಲ್ಲಿಸಿದ ರಾಜಸ್ಥಾನ
ಕಳಪೆ ಫಲಿತಾಂಶದ ಕಾರಣದಿಂದಾಗಿ, ಕ್ಷಿಪ್ರ ಪರೀಕ್ಷಾ ಕಿಟ್‌ (ಆರ್‌ಟಿಕೆ)ಗಳ ಬಳಕೆಯನ್ನು ರಾಜಸ್ಥಾನ ಸರಕಾರ ನಿಲ್ಲಿಸಿದೆ. ಸೋಂಕಿನ ಪರೀಕ್ಷೆಗೆ ಬಳಸಲಾಗುವ ಈ ಕಿಟ್‌ಗಳು ನಿಖರ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಅವುಗಳನ್ನು ಬಳಸದಿರಲು ಸರಕಾರ ನಿರ್ಧರಿಸಿದೆ. ಈ ಕಿಟ್‌ಗಳು ಕೇವಲ ಶೇ.5.4ರಷ್ಟು ನಿಖರ ಫಲಿತಾಂಶ ನೀಡುತ್ತಿವೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಚೀನದಿಂದ ಪಿಪಿಇ ಕಳ್ಳ ದಾಸ್ತಾನು?
ಚೀನ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇರುವ ಅಮೆರಿಕ, ಈಗ ಮತ್ತೂಮ್ಮೆ ಮುಗಿಬಿದ್ದಿದೆ. ವೈದ್ಯರಿಗೆ ಅಗತ್ಯವಾದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳು ಮತ್ತು ಮಾಸ್ಕ್ ಗಳನ್ನು ಚೀನ ಸರಕಾರವು ಕಳ್ಳ ದಾಸ್ತಾನು ಮಾಡಿಟ್ಟುಕೊಂಡಿದ್ದು, ಈಗ ಅತ್ಯಧಿಕ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಟಾಪ್ ನ್ಯೂಸ್

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ISREL

Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್‌ ಪ್ರಶ್ನೆ

Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್‌ ಪ್ರಶ್ನೆ

arrest-lady

Goa; ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಯುವತಿ ಬಂಧನ

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.