ಪರಿಸರಕ್ಕೆ ವರವಾದ Lockdown: 20 ವರ್ಷದ ಬಳಿಕ ಪರಿಶುದ್ಧವಾದ ಹರಿದ್ವಾರ, ರಿಷಿಕೇಶ ಗಂಗಾ ನದಿ
ಇದೀಗ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ನದಿ ನೀರು ಶುದ್ಧವಾಗಿದೆ ಎಂದು ವರದಿ ವಿವರಿಸಿದೆ.
Team Udayavani, Apr 23, 2020, 1:01 PM IST
ನವದೆಹಲಿ:ಜಗತ್ತಿನ ಬಹುತೇಕ ದೇಶಗಳು ಲಾಕ್ ಡೌನ್ ನಲ್ಲಿದೆ. ಏತನ್ಮಧ್ಯೆ ಕಲುಷಿತಗೊಂಡಿದ್ದ ಪರಿಸರ ಶುದ್ಧವಾಗತೊಡಗಿದೆ. ಇದಕ್ಕೆ ಉದಾಹರಣೆ ಭಾರತದ ಗಂಗಾ ಮತ್ತು ಯಮುನಾ ನದಿ. ಈವರೆಗೂ ಸಂಪೂರ್ಣವಾಗಿ ಕಲುಷಿತಗೊಂಡಿದ್ದ ಈ ನದಿಗಳ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲವಾಗಿತ್ತು. ಆದರೆ ಇದೀಗ ಹರಿದ್ವಾರ, ರಿಷಿಕೇಶದಲ್ಲಿರುವ ಗಂಗಾ ನದಿ ನೀರು ಕುಡಿಯುವಷ್ಟು ಶುದ್ಧವಾಗಿದೆ ಎಂದು ವರದಿ ತಿಳಿಸಿದೆ.
ಗಂಗಾ ನದಿ ಶುದ್ದೀಕರಣವಾಗಿ ಹಲವು ಸರ್ಕಾರಗಳು ಕೋಟ್ಯಂತರ ರೂಪಾಯಿ ಯೋಜನೆ ರೂಪಿಸಿ, ವ್ಯಯಿಸಿದ್ದರು ಕೂಡಾ ಯಶಸ್ವಿಯಾಗಲು ವಿಫಲವಾಗಿದ್ದವು. ಆದರೆ ಇದೀಗ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ನದಿ ನೀರು ಶುದ್ಧವಾಗಿದೆ ಎಂದು ವರದಿ ವಿವರಿಸಿದೆ.
ಉತ್ತರಾಖಂಡ್ ನ ಮಾಲಿನ್ಯ ನಿಯಂತ್ರಣ ಮಂಡಳಿ, ಹರಿದ್ವಾರ ಮತ್ತು ರಿಷಿಕೇಶದಲ್ಲಿನ ಗಂಗಾ ನದಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿತ್ತು. ಇದೀಗ ನೀರಿನ ಗುಣಮಟ್ಟದ ಫಲಿತಾಶಂ ಪಾಸಿಟಿವ್ ಎಂದು ಬಂದಿದೆ.ಈ ಹಿನ್ನೆಲೆಯಲ್ಲಿ 2000ನೇ ಇಸವಿ ಬಳಿಕ ಮೊದಲ ಬಾರಿಗೆ ಹರಿದ್ವಾರ, ರಿಷಿಕೇಶದಲ್ಲಿನ ಗಂಗಾ ನದಿ ನೀರನ್ನು ಕುಡಿಯಬಹುದಾಗಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ