Desi Swara: ವಿಜೃಂಭಣೆಯ 39ನೇ ಗಣೇಶೋತ್ಸವ ಆಚರಣೆ

ಧನ್ಯಾ ರತೀಶ್‌ ಮತ್ತು ತಂಡದ ವೀಣಾ ವಾದನವು ಜನರ ಮನಸ್ಸನ್ನು ಸೆಳೆಯಿತು.

Team Udayavani, Oct 7, 2023, 10:37 AM IST

Desi Swara: ವಿಜೃಂಭಣೆಯ 39ನೇ ಗಣೇಶೋತ್ಸವ ಆಚರಣೆ

ಮಸ್ಕತ್: ಇಲ್ಲಿನ ಗಣೇಶ ಸೇವಾ ಸಮಿತಿಯಿಂದ 39ನೇ ವರ್ಷದ ಗಣೇಶ ಚತುರ್ಥಿಯನ್ನು ಇಲ್ಲಿನ ಶಿವ ದೇವಾಲಯದಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಮುಖ್ಯ ಅರ್ಚಕರಾದ ಶಂಕರನಾರಾಯಣ ಅಡಿಗರು, ಗುರುದಾಸ್‌ ಪೆಜತ್ತಾಯ, ಎನ್‌. ಬಾಲಸುಬ್ರಹ್ಮಣ್ಯಂ, ವಿ. ರಾಮನ್‌, ರಾಜೇಶ್‌ ನಿಂಜೂರ್‌ ಮತ್ತು ಇನ್ನಿತರು ಅರ್ಚಕರ ಸಹಕಾರದೊಂದಿಗೆ ಮಂತ್ರಘೋಷಗಳೊಂದಿಗೆ, ವಿಧಿ ವಿಧಾನ ಬದ್ಧವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಓಂ ಶ್ರೀ ಗಣೇಶ ವೃಂದವು ಗಣಪತಿ ಸಹಸ್ರನಾಮವನ್ನು ಪಠಿಸಿ ಹಬ್ಬದ ವಾತಾವರಣಕ್ಕೆ ಕಳೆಕಟ್ಟಿದರು. ಹಲವು ಬಗೆಯ ಸೇವೆಗಳನ್ನು ಮೂರು ದಿನವೂ ಗಣಪನಿಗೆ ಭಕ್ತಿ ಪೂರ್ವಕವಾಗಿ ಸಲ್ಲಿಸಲಾಯಿತು.

ಪ್ರತಿಷ್ಠಾಪನೆಯಿಂದ ವಿಸರ್ಜನೆಯ ತನಕ ಗಣೇಶನ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆಗಳು, ನೃತ್ಯ ಸೇವೆಗಳು ನಿರಂತರವಾಗಿ ನಡೆದವು . ವೈದ್ಯನಾಥನ್‌ ಅವರ ಶಿಷ್ಯರಿಂದ ವೇದ ಪಠಣ, ಎ.ವಿ.ಮನೋಹರ್‌ ಅವರ ಶುಕ್ಲ ಯಜುರ್ವೇದ ಪಠಣಗಳನ್ನು ಪ್ರಸ್ತುತಪಡಿಸಲಾಯಿತು.

ಟವಲ್‌ ಎಂಜಿನಿಯರಿಂಗ್‌ ತಂಡ, ಆರಾಧನಾ ತಂಡ, ಚಿನ್ಮಯ ಬಾಲವಿಹಾರದ ತಂಡ, ಶ್ರೀಮತಿ ಮೀನಾಕ್ಷಿ/ ಪದ್ಮಜಾ ರಾಮಾನುಜಂ ಮತ್ತು ತಂಡ, ಹರೆ ಕೃಷ್ಣ ತಂಡ, ಮಾತಾ ಅಮೃತಾನಂದಮಯಿ ತಂಡ, ಶ್ರೀಮತಿ ಮುಕ್ತಕಲಾ ಅವರ ಗುಂಪು, ಡಿವೈನ್‌ ಸ್ಪಾರ್ಕ್‌ ತಂಡ, ಓಂಕಾರ ಮಹಿಳೆಯರ ಭಜನ ಗುಂಪು, ತ್ಯಾಗರಾಜ ಸಮಿತಿ, ಸಾಯಿ ಭಕ್ತರ ಗುಂಪು, ಜಿಎಸ್‌ಬಿ ಗುಂಪು, ನಳಿನಿ ಕಣ್ಣನ್‌ ಮತ್ತು ಶಿಷ್ಯರು, ಜಯಶ್ರೀ ಮತ್ತು ಶಿಷ್ಯರು, ಕಾಂತಿಬಾಯ್‌ ಮತ್ತು ಬಳಗ, ಒಮಾನ್‌ ಬಿಲ್ಲವ ಬಳಗ ಮುಂತಾದ ಭಜನ ಮಂಡಳಿಗಳು, ಸುದರ್ಶನ್‌ ಭಟ್‌ ಮೂಡುಬಿದಿರೆ ಮತ್ತು ಈ ಕಾರ್ಯಕ್ರಮಕ್ಕೆಂದೇ ಸ್ವದೇಶದಿಂದ ಆಗಮಿಸಿದ್ದ ಕರುಣಾಕರ್‌ ರಾವ್‌ ಅವರ ಹಾರ್ಮೋನಿಯಂನ ಅದ್ಭುತ ಸಹಕಾರದೊಂದಿಗೆ, ಡಾ| ಸಿ.ಕೆ. ಅಂಚನ್‌, ಸಚಿನ್‌ ಕಾಮತ್‌ರವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮಗಳನ್ನು ಭಕ್ತಿ ಪೂರ್ವಕವಾಗಿ ವಿಘ್ನೇಶ್ವರನ ಚರಣಕ್ಕೆ ಸಮರ್ಪಿಸಿದರು.

ವಿದುಷಿ ತೀರ್ಥ ಕಟೀಲ್‌, ನಳಿನಿ ಕಣ್ಣನ್‌, ಪದ್ಮಿನಿ ಕೃಷ್ಣಮೂರ್ತಿ ಮತ್ತು ಪ್ರಮೀಳಾ ರಮೇಶ್‌ ಅವರ ತಂಡಗಳ ಭಕ್ತಿಪೂರ್ವಕ ನೃತ್ಯ ಸೇವೆಗಳನ್ನು ನೀಡಿದರು. ಧನ್ಯಾ ರತೀಶ್‌ ಮತ್ತು ತಂಡದ ವೀಣಾ ವಾದನವು ಜನರ ಮನಸ್ಸನ್ನು ಸೆಳೆಯಿತು.

ಮೂರು ದಿನದ ವಿಜೃಂಭಣೆಯ ಸಮಾರಂಭವು ಗಣೇಶ ವಿಸರ್ಜನೆಯೊಂದಿಗೆ ಸಾಂಪ್ರದಾಯಿಕ ಪೂಜೆಗಳು ಮತ್ತು ನೆರೆದ ಭಕ್ತ ಸಮೂಹದ ಒಕ್ಕೊರಲಿನ “ಗಣಪತಿ ಬಪ್ಪ ಮೊರೆಯ’ ನಾದದ ಮೂಲಕ ಕೊನೆಗೊಂಡಿತು.

ಒಮಾನ್‌ ದೇಶದ ಭಾರತದ ರಾಯಭಾರಿ, ಇಲ್ಲಿನ ಭಾರತೀಯ ಮೂಲದ ಉದ್ಯಮಿ ಶೇಕ್‌ ಅನಿಲ್‌ ಕಿಂಜಿ, ಅಶ್ವಿ‌ನ್ನಾನ್ಸಿ ಧಾರಾಂಸಿ, ಬಕುಲ್ಭಾಯೆ¾ಹ್ತಾ ಮುಂತಾದ ಗಣ್ಯರು ಉತ್ಸವದಲ್ಲಿ ಭಾಗವಹಿಸಿ ಉತ್ಸವದ ಕಳೆಯನ್ನು ಹೆಚ್ಚಿಸಿದರು.

ಒಮಾನ್‌ ಗಣೇಶೋತ್ಸವ ಸಮಿತಿಯು ಎಸ್‌. ಕೆ. ಪೂಜಾರಿಯವರ ನೇತೃತ್ವದಲ್ಲಿ ಶಶಿಧರ್‌ಶೆಟ್ಟಿ ಮಲ್ಲಾರ್‌, ಉಮೇಶ್‌ ಬಂಟ್ವಾಳ್‌, ನಾಗೈಶ್‌ ಶೆಟ್ಟಿ ಕಿನ್ನಿಗೋಳಿ, ಡಾ| ಸಿ.ಕೆ.ಅಂಚನ್‌, ರವಿ ಕಾಂಚನ್‌, ಗುರುದಾಸ್‌ ಪೆಜತ್ತಾಯ, ದೇವಾನಂದ್‌ ಅಮೀನ್‌, ಸುಕುಮಾರ್‌ ಅಂಚನ್‌, ಸಚಿನ್‌ ಕಾಮತ್‌, ರಮಾನಂದ್‌ ಕುಂದರ್‌ ಮತ್ತು ನೂರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ಪದ್ಧತಿ ಪೂರ್ವಕವಾಗಿ ಜರಗಿಸಲು ಶ್ರಮಿಸಿದ್ದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.