Desi Swara: ಪೀಸಾ ನಗರದ ದೀಪಾವಳಿ ಬೆಳಗು

ನಮ್ಮ ಆಚಾರಗಳನ್ನು ಪಾಲಿಸುವುದರಲ್ಲಿ ಹೆಮ್ಮೆ ಅನ್ನಿಸಿತು.

Team Udayavani, Nov 18, 2023, 10:26 AM IST

Desi Swara: ಪೀಸಾ ನಗರದ ದೀಪಾವಳಿ ಬೆಳಗು

ದೀಪಾವಳಿ ಎಂದರೆ ಬೆಳಕಿನ ಸಡಗರ. ಭಾರತೀಯರಾದ ನಮಗೆ ದೀಪಾವಳಿ ಎಲ್ಲಿಲ್ಲದ ಸಂಭ್ರಮವನ್ನು ತಂದುಕೊಡುತ್ತದೆ. ಭಾರತದ ನೆಲದಿಂದ ದೂರವಿರುವ ಪೀಸಾದಲ್ಲಿಯೂ ದೀಪಗಳ ತೋರಣ ಹೊಸ ಬೆಳಕನ್ನು ಮೂಡಿಸಿತ್ತು. ಆತ್ಮೀಯತೆ, ಪ್ರೀತಿ, ವಿಶ್ವಾಸಕ್ಕೆ ಈ ದೀಪಾವಳಿ ಸಾಕ್ಷಿಯಾಗಿತ್ತು. ಇದು ಕನಸಾ ಅಥವಾ ನನಸಾ ಎಂದು ತಿಳಿಯಲು ಕ್ಷಣ ಕಾಲ ಬೇಕಾಯಿತು. ಸಂಜಯ್‌, ನೀರಜ್‌, ಭಾಸ್ಕರ್‌, ರೇಣುಕಾ, ಆಯುಷಿ, ಮೇಘನಾ, ಆಂಜೆಲಾ ಮತ್ತಿತರರ ಕಲರವ ಧ್ವನಿ ಊಹಾಲೋಕವಲ್ಲ ಎಂದು ನಿಶ್ಚಯವಾಯಿತು.

ಪ್ರೀತಿ, ವಿಶ್ವಾಸದ ಮಾತುಗಳು ಕಿವಿ ನಿಮಿರಿಸಿದವು. ರಫಿ ಅವರ ಹಾಡು “ಏಕ್‌ ವೋ ಭಿ ದಿವಾಲೀ ಥಿ ‘ ಅಂತರದಿಂದ ಕೇಳಿದಾಗ ನಮ್ಮ ಮುಂಬಯಿಯ ಟಿಐಎಫ್ಆರ್‌ ಸದನದಲ್ಲಿ ನೂರು ಸಂಸಾರಗಳು ಒಟ್ಟಿಗೆ ಸಂಭ್ರಮದಿಂದ ಆಚರಿಸುತ್ತಿದ್ದ ದೀಪಾವಳಿ ನೆನಪಿನಾಳದಿಂದ ಹೊರಬಂತು.

ಪೀಸಾ ನಗರದ ನೀರವತೆ ಇದ್ದಕ್ಕಿದ್ದಂತೆ ಮಾತುಕತೆಗಳ, ಮಿತ್ರರ ಸಂಧಿಸಿದ ಆನಂದ, ಭಾರತದ ಯುವಕರು ಯುವತಿಯರ (indian gems) ಸಂಭಾಷಣೆ, ವೈವಿಧ್ಯತೆಯಲ್ಲಿ ಏಕತ್ವ ಸಾರುತ್ತ ನಗುವಿನ ಅಲೆಗಳಲ್ಲಿ ತೇಲುತ್ತ ಇದ್ದ ವಾತಾವರಣ ಬಣ್ಣ ಬಣ್ಣದ ಚಿಲುಮೆಯಾಗಿ ಮಾರ್ಪಟ್ಟಿತ್ತು.

ಗಾಂಧಿ ರೆಸ್ಟೋರೆಂಟ್‌ ರಂಗೋಲಿ ದೀಪಗಳಿಂದ ನಮ್ಮನ್ನು ಸ್ವಾಗತಿಸಿತ್ತು. ಒಳಗೆ ನಡೆಯುತ್ತಿದ್ದಂತೆ ಒಂದು ಚಿಕ್ಕ ಚೊಕ್ಕ ಪೂಜಾ ಮಂಟಪ, ಗಣೇಶನ ಹಾಗೂ ಲಕ್ಷ್ಮೀಯ ವಿಗ್ರಹಗಳು ಮನಸೆಳೆಯಿತು. ಭಾರತೀಯರ ಸಂಗಡ ದೇವಿಗೆ ಆರತಿ ಮಾಡಿದಾಗ ಸ್ವರ್ಗ ಮೂರೇ ಗೇಣು ಅನ್ನಿಸಿತು. ಇದೊಂದು ಮರೆಯಲಾಗದ ಅನುಭವ. ತಮ್ಮ ಪಾದರಕ್ಷೆಗಳನ್ನು ತೆಗೆದು ಭಕ್ತಿಯಿಂದ ಕೈಮುಗಿದು “ಓಂ ಜೈ ಲಕ್ಷ್ಮೀ ಮಾತಾ’ ಅಂತ ಹಾಡಿ ಕಣ್ಣುಮುಚ್ಚಿ ಪ್ರಾರ್ಥನೆ ಸಲ್ಲಿಸಿದಾಗ ನಮ್ಮ ಯುವಜನಾಂಗವು ನಮ್ಮ ಗೌರವ, ನಮ್ಮ ಆಚಾರಗಳನ್ನು ಪಾಲಿಸುವುದರಲ್ಲಿ ಹೆಮ್ಮೆ ಅನ್ನಿಸಿತು.

ಪೂಜೆಯ ಅನಂತರ ಊಟದ ಸಂಭ್ರಮ. ಸಮೋಸದಿಂದ ಹಿಡಿದು ಜಾಮೂನ್‌ ವರೆಗೂ ರುಚಿಕರ ಸ್ವಾದಿಷ್ಟ ಊಟ. ಹೊಟೇಲ್‌ ಸ್ಟಾಫ್ನವರ ನಗುಮುಖದ ಆತ್ಮೀಯತೆ ಊಟವನ್ನು ಬಡಿಸುವುದರಲ್ಲಿ ಕಾಣಬಹುದಿತ್ತು. ಊಟ ಮುಗಿಯುತ್ತಿದ್ದಂತೆ ಎಲ್ಲರೂ ಸಂಭಾಷಣೆಯಲ್ಲಿ ತೊಡಗಿದರು. ನನಗೆ ವಿಶೇಷ ಮರ್ಯಾದೆ. “ನೀವು ಬಂದಿದ್ದು ಸಂತೋಷ’ ಅಂದಾಗ ಕಣ್ಣುಗಳು ತೇವಗೊಂಡವು.

ಸಂಗೀತ ನೃತ್ಯ ಪ್ರಿಯರಲ್ಲವೇ ಭಾರತೀಯರು ! ಹೊಟೇಲ್‌ ಮಾಲಕರು ಹಾಕಿದ್ದ ಬಾಲಿವುಡ್‌ ಹಾಡುಗಳಿಗೆ ಗುಂಪಿನ ನೃತ್ಯ! ಒಂದು ತಾಸು ನೃತ್ಯ ಮುಗಿದ ಮೇಲೆ “ಪಟಾಕಿಗಳಿಲ್ಲದ ದೀಪಾವಳಿ ಬರಡು ಭೂಮಿಯಂತೆ’ ಇಲ್ಲಿಯ ನಿಯಮದ ಪ್ರಕಾರ ದೊಡ್ಡ ಪಟಾಕಿಗಳನ್ನು ನಾವು ಹೊಡೆಯುವ ಹಾಗಿಲ್ಲ . ಸ್ಪಾಕ್ಲìರ್ಸ್‌ ಹಿಡಿದು ಮಕ್ಕಳು, ಹಿರಿಯರು, ಯುವಕ ಯುವತಿಯರು ಹೊರಗೆ ಬಂದು ಹಚ್ಚಿದಾಗ ಪೀಸಾದ ಕತ್ತಲು ಬೆಳಕಾಗಿ ಮಾರ್ಪಟ್ಟು ಎಲ್ಲರಿಗೂ ಆನಂದ ತಂದಿತ್ತು.

ವೇಳೆ ಮುಂದಕ್ಕೆ ಹೋಗಿತ್ತು. ಎಲ್ಲರು ನನ್ನನ್ನು ಬೀಳ್ಕೊಟ್ಟಾಗ ಭಗವಂತ ನಿಮ್ಮೆಲ್ಲರ ಆಸೆ ಆಕಾಂಕ್ಷೆ ಗಳನ್ನು ಪೂರೈಸಲಿ ಎಂದು ಮನೆಕಡೆ ಹೊರಟಾಗ ಹೃದಯ ತುಂಬಿ ಬಂತು. ಕಳೆದ ಒಂದೆರಡು ತಾಸುಗಳು ನೆನಪಿನಾಳದಲ್ಲಿ ಶಾಶ್ವತವಾಗಿ ಬೆಳಕಿನಂತೆ ಬೆಲೆ ಊರಿತ್ತು.

*ಜಯಮೂರ್ತಿ, ಇಟಲಿ

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.