ದುಶ್ಚಟಗಳಿಗೆ ದಾಸರಾಗಬೇಡಿ
ಅಂಕಲಗಿ ಜಾತ್ರೆ ವೇಳೆ ಚಟ ಮುಕ್ತರಾಗಿಪುನಃ ಚಟಕ್ಕೆ ದಾಸರಾದರೆ ದೊಡ್ಡ ಪಾಪ
Team Udayavani, Apr 5, 2019, 12:51 PM IST
ಅಫಜಲಪುರ: ಅಂಕಲಗಿ ಗ್ರಾಮದಲ್ಲಿ ಬಡದಾಳ ತೇರಿನ ಮಠದ ಅಭಿನವ ಚನ್ನಮಲ್ಲ ಶಿವಯೋಗಿಗಳು ಚಟಗಳನ್ನು ಜೋಳಿಗೆಗೆ ಹಾಕಿ ಎನ್ನುವ ವಿಭಿನ್ನ ಅಭಿಯಾನ ನಡೆಸಿದರು.
ಅಫಜಲಪುರ: ದುಶ್ಚಟಗಳಿಗೆ ದಾಸರಾಗದೆ ಸಜ್ಜನರಾಗಿ ಬದುಕು ನಡೆಸಿ ಎಂದು ಬಡದಾಳ ತೇರಿನ ಮಠದ ಅಭಿನವ ಚನ್ನಮಲ್ಲ ಶಿವಯೋಗಿಗಳು ಯುವ ಜನಾಂಗಕ್ಕೆ ಕರೆ ನೀಡಿದರು.
ತಾಲೂಕಿನ ಅಂಕಲಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ 21ನೇ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಮ್ಮ ಚಟಗಳನ್ನು ನಮ್ಮ ಜೋಳಿಗೆಯಲ್ಲಿ ಹಾಕಿ ಎನ್ನುವ ವಿನೂತನ ಅಭಿಯಾನ ನಡೆಸಿದರು.
ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಯುವಕರು
ದೇಶದ ಸಂಪತ್ತು. ಜಗತ್ತಿನ ಅತಿ ಹೆಚ್ಚು ಯುವಕರು ಹೊಂದಿರುವ ದೇಶ ನಮ್ಮದು. ಆದರೆ ಅನೇಕ ಚಟಗಳಿಗೆ ದಾಸರಾಗಿ ಯುವಕರು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹೊಸ
ವರ್ಷದ ಶುಭ ಸಂದರ್ಭದಲ್ಲಿ ಅಂಕಲಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಮಯದಲ್ಲಿ ಗ್ರಾಮಸ್ಥರು ಚಟ ಮುಕ್ತರಾಗಿ
ಉತ್ತಮ ಜೀವನ ನಡೆಸಬೇಕು. ಯಾರು ಚಟ ಬಿಡುತ್ತೇವೆಂದು ಜೋಳಿಗೆಗೆ ಹಾಕಿ ಪ್ರಮಾಣ ಮಾಡಿದ್ದಿರಿ ಅವರ ಭವಿಷ್ಯ
ಉಜ್ವಲವಾಗಲಿದೆ, ಒಂದು ವೇಳೆ ಕದ್ದು ಪುನಃ ಅದೇ ಚಟಕ್ಕೆ ದಾಸರಾದರೆ ಅದಕ್ಕಿಂತ ದೊಡ್ಡ ಪಾಪ ಮತ್ತೂಂದಿಲ್ಲ ಎಂದರು.
ಈಗಿನ ಬಿಸಿಲು ನೋಡಿದಾಗ ಎಲ್ಲರಿಗೂ ಭಯ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಗಿಡ, ಮರಗಳನ್ನು ದುರಾಸೆಗಾಗಿ ಕಡಿದು
ಮಾರಲಾಗುತ್ತಿದೆ. ಹೀಗಿ ಮುಂದುವರಿದರೆ ಬರುವ ವರ್ಷಗಳಲ್ಲಿ ಹನಿ ನೀರಿಗಾಗಿಯೂ ಎಲ್ಲರೂ ಪರದಾಡಬೇಕಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ನಾಡು
ಸಮೃದ್ಧವಾಗಿರಬೇಕಾದರೆ ಗಿಡ-ಮರಗಳನ್ನು ನೆಟ್ಟು ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಮಳೆಗಾಲ ಆರಂಭದಲ್ಲಿ ಮಠದ ವತಿಯಿಂದ ಪ್ರತಿ ಮನೆಗೂ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಎಲ್ಲರೂ ಸಸಿ ನೆಟ್ಟು ಅವುಗಳನ್ನು ಮಕ್ಕಳಂತೆ
ಬೆಳೆಸಬೇಕು ಎಂದು ಹೇಳಿದರು.
ಪಂಚಾಕ್ಷರಿ ದೇವರು ಮಾತನಾಡಿ, ಗುರುವಿನ ನೆನೆದರೆ ಯಾರಿಗೂ ಕೇಡಿಲ್ಲ. ಚನ್ನಮಲ್ಲ ಶಿವಯೋಗಿಗಳೆ ಸ್ವತಃ ಮನೆ
ಬಾಗಿಲಿಗೆ ಬಂದು ದುಶ್ಚಟ ಬಿಟ್ಟು ಸಜ್ಜನರಾಗಿ ಎಂದು ಸಲಹೆ ನೀಡುತ್ತಿರುವಾಗ, ನಾವೆಲ್ಲ ಚಟ ಬಿಟ್ಟು ಸಜ್ಜನರಾಗದಿದ್ದರೆ ದೇವರು ಮೆಚ್ಚುವುದಿಲ್ಲ ಎಂದರು.
ಮುಖಂಡರಾದ ಚಂದ್ರಕಾಂತ ಪೊಲೀಸ ಪಾಟೀಲ, ಸಾಹೇಬಗೌಡ ಮೂಲಗೆ, ವಿಠ್ಠಲ ರಾವ್ ಪಡಶೆಟ್ಟಿ, ಘೋಷಯ್ಯ ಸ್ವಾಮಿ, ಗುರು ಸ್ವಾಮಿ ಹಿರೇಮಠ, ಅಣ್ಣಾರಾವ ಪಡಶೆಟ್ಟಿ, ಏಸಣ್ಣ, ಶಿವರಶಣ ಪಾಟೀಲ, ಬಸಣ್ಣ ಕುಂಬಾರ, ಕಾಶಿರಾಯ ಮೂಲಗೆ, ಬಸಪ್ಪ ಪಾಟೀಲ ಹಾಗೂ ಇತರರು ಇದ್ದರು. ತಬಲಾ ವಾದಕ ಮಹಾಂತೇಶ ಸುತಾರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ