ಅಂತರ್ಜಲ ಕುಸಿತ: ಗ್ರಾಮಗಳಲ್ಲಿ ಜಲಕ್ಷಾಮ
ಪ್ಲಾಸ್ಟಿಕ್ ಕೊಡಗಳ ಖರೀದಿ ಜೋರು•ನದಿ ದಡದ ಗ್ರಾಮಗಳಲ್ಲೂ ನೀರಿಗೆ ಬರ
Team Udayavani, Jul 1, 2019, 9:52 AM IST
ಅಫಜಲಪುರ: ಚವಡಾಪುರ ತಾಂಡಾದಲ್ಲಿ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಿರುವ ಸೇವಾಲಾಲ್ ದೇವಸ್ಥಾನ ಬಳಿ ನೀರಿಗಾಗಿ ನಿಂತಿರುವ ತಾಂಡಾ ಜನತೆ.
•ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಕಳೆದ ವರ್ಷ ಮಳೆಗಾಲದಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿತವಾಗಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
ತಾಲೂಕಿನ ಚವಡಾಪುರ ಗ್ರಾಮ, ಚವಡಾಪುರ ತಾಂಡಾ ಹಾಗೂ ರೇವೂರ (ಕೆ), ಹೊಸೂರ, ಗೊಬ್ಬೂರ (ಬಿ), ಸ್ಟೇಷನ್ ಗಾಣಗಾಪುರ, ರೇವೂರ (ಬಿ), ದೇವಲ ಗಾಣಗಾಪುರ, ಕೋಗನೂರ, ಬಳೂರ್ಗಿ, ಅಂಕಲಗಾ, ಚಿಂಚೋಳಿ, ಮಾತೋಳಿ, ಹಳೀಯಾಳ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲೀಗ ಜಲಕ್ಷಾಮ ಉಂಟಾಗಿದೆ. ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡಿ ಸುಸ್ತಾಗಿದ್ದಾರೆ. ಮೈಲುಗಟ್ಟಲೆ ಅಲೆಯಬೇಕು ಹೊಲಗದ್ದೆ: ಅಂತರ್ಜಲ ಮಟ್ಟ ಕುಸಿತದಿಂದ ಗ್ರಾಮಗಳಲ್ಲಿರುವ ನೀರಿನ ಮೂಲಗಳೆಲ್ಲ ಖಾಲಿಯಾಗಿವೆ. ಅಂತರ್ಜಲ ಮಟ್ಟ ಕುಸಿದು ಹನಿ ನೀರೂ ಬಾರದಂತ ಪರಿಸ್ಥತಿ ನಿರ್ಮಾಣವಾಗಿದೆ. ಜನ ಸಾಮಾನ್ಯರು ನೀರಿಗಾಗಿ ಮೈಲಿಗಟ್ಟಲೆ ಅಲೆದಾಡಿ, ಹೊಲ ಗದ್ದೆ ತುಳಿದು ನೀರು ಹೊತ್ತು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಗಿದೆ ಎಂದರೆ ನದಿ ದಡದಲ್ಲಿರುವ ಸೊನ್ನ, ಇಂಚಗೇರಾ, ದೇವಲಗಾಣಗಾಪುರ, ಘತ್ತರಗಾ, ದೇಸಾಯಿ ಕಲ್ಲೂರ, ಸಾಗನೂರ, ಬಂದರವಾಡ, ಹವಳಗಾ, ಕೊಳ್ಳೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ.
ಟ್ಯಾಂಕರ್ ನೀರು ಸಾಕಾಗುತ್ತಿಲ್ಲ: ನೀರು ಪೂರೈಸಲು ಗ್ರಾ.ಪಂ.ನಿಂದ ಹಿಡಿದು ಸಂಬಂಧ ಪಟ್ಟ ಎಲ್ಲ ಇಲಾಖೆಗಳು ಹರಸಾಹಸ ಪಡುತ್ತಿವೆ. ಖಾಸಗಿಯಾಗಿ ನೀರು ಖರೀದಿಸಿ ಪೂರೈಕೆ ಮಾಡುವುದು, ಟ್ಯಾಂಕರ್ ನೀರು ಒದಗಿಸುವುದು ನಡೆದಿದೆ. ಆದರೆ ಈ ನೀರು ಸಾಕಾಗುತ್ತಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ನೀರು ಸರಬರಾಜು ಮಾಡಲು ಕಡ್ಡಾಯವಾಗಿ ವಿದ್ಯುತ್ ಸೌಕರ್ಯ ಬೇಕು. ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಇರುವುದಿಲ್ಲ. ಹೀಗಾಗಿ ವಿದ್ಯುತ್ ಬಂದಾಗ ಮಾತ್ರ ನೀರಿನ ಸರಬರಾಜು ಆಗುತ್ತಿದೆ.
ಸಂಬಂಧಪಟ್ಟವರು ಗ್ರಾಮೀಣ ಭಾಗದಲ್ಲಿ ಬೆಳಗಿನ ಜಾವ ವಿದ್ಯುತ್ ಕಡಿತಗೊಳಿಸದಿದ್ದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ಲಾಸ್ಟಿಕ್ ಕೊಡಗಳ ಖರೀದಿ ಜೋರು: ದೂರದಿಂದ ನೀರು ಹೊತ್ತು ತಂದು ಸಂಗ್ರಹಿಸಿಡುವ ಕೆಲಸ ಜನಸಾಮಾನ್ಯರಿಗೆ ತಲೆ ನೋವಾಗಿದೆ. ನೀರು ಸಂಗ್ರಹಿಸಿಡಲು ಜನತೆ ಪ್ಲಾಸ್ಟಿಕ್ ಕೊಡಗಳ ಮೊರೆ ಹೋಗಿದ್ದಾರೆ. ಅಗತ್ಯಕ್ಕೂ ಮಿರಿ ಪ್ಲಾಸ್ಟಿಕ್ ಕೊಡಗಳನ್ನು ಖರೀದಿಸಿ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಡಗಳ ಮಾರಾಟ ಜೋರಾಗಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ