Tragedy: ಮೊಬೈಲ್ ಬಿಡು ಅಂದಿದ್ದಕ್ಕೆ ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ
Team Udayavani, Mar 7, 2024, 11:01 AM IST
ಬಾದಾಮಿ : ನಿತ್ಯ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆಗೆ ಹೆತ್ತವರು ಬುದ್ದಿ ಹೇಳಿದ್ದನ್ನೆ ಮಾನಸಿಕ ಮಾಡಿಕೊಂಡ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾದಾಮಿ ರೈಲ್ವೆ ಸ್ಟೇಶನ್ ಏರಿಯಾದ ಮನೆಯಲ್ಲಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ವಿದ್ಯಾ ಹನಮಂತ ದೊಡಮನಿ (28) ಎಂದು ಗುರುತಿಸಲಾಗಿದೆ.
ವಿದ್ಯಾ ನಿತ್ಯ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಳು. ಮನೆಯ ಕೆಲಸ ಮಾಡದೇ ಮೊಬೈಲ್ ನೋಡುತ್ತ, ಹಾಡು ಕೇಳುತ್ತ ಕಾಲ ಕಳೆಯುತ್ತಿದ್ದಳು. ಹಾಗೆಲ್ಲ ಮಾಡಬೇಡ, ಮೊಬೈಲ್ ಬಿಟ್ಟು ಮನೆ ಕೆಲಸ ಮಾಡು ಎಂದು ಬುದ್ದಿಮಾತು ಹೇಳಿದ್ದರು. ಅದನ್ನೆ ಮಾನಸಿಕವಾಗಿ ತೆಗೆದುಕೊಂಡು ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು. ಕೂಡಲೇ ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅಸುನೀಗಿದ್ದಾಳೆ.
ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Summons ನಿಂದ ಪರಾಗಬೇಕಾದರೆ ಆ ಪಕ್ಷ ಸೇರಬೇಕು… ಕಿಡಿಕಾರಿದ ಕೇಜ್ರಿವಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ