ಬಾಗಲಕೋಟೆ: ದೇಶಿ ಪೈಲ್ವಾನರಿಗೆ ಬೇಕಿದೆ ನೆರವಿನ ಗ್ಯಾರಂಟಿ


Team Udayavani, Jan 18, 2024, 4:12 PM IST

ಬಾಗಲಕೋಟೆ: ದೇಶಿ ಪೈಲ್ವಾನರಿಗೆ ಬೇಕಿದೆ ನೆರವಿನ ಗ್ಯಾರಂಟಿ

ಉದಯವಾಣಿ ಸಮಾಚಾರ
ಬಾಗಲಕೋಟೆ: ಮೈಸೂರು ರಾಜರು, ಜಮಖಂಡಿಯ ಪಟವರ್ಧನ ಮಹಾರಾಜರು, ಮುಧೋಳದ ಘೋರ್ಪಡೆ, ವಿಜಯಪುರದ
ಆದಿಲ್‌ಶಾಹಿಗಳು ಸೇರಿದಂತೆ ನಾಡಿನ ಹಲವಾರು ಸಂಸ್ಥಾನಗಳ ಮಹಾರಾಜರು ಅತ್ಯಂತ ರಾಜಮರ್ಯಾದೆಯಿಂದ ಕಾಣುತ್ತಿದ್ದ ಶಕ್ತಿ ಪ್ರದರ್ಶನ ಸಾಹಸಿಗರು ವಿಶ್ವ ದಾಖಲೆ ಮಾಡಲು ತುದಿಗಾಲಲ್ಲಿದ್ದಾರೆ. ಆದರೆ, ಅವರಿಗೆ ಸರ್ಕಾರದ ಸೂಕ್ತ ನೆರವಿನ ಸಹಕಾರ ಸಿಗುತ್ತಿಲ್ಲ ಎಂಬ ಕೊರಗು ಕೇಳಿ ಬರುತ್ತಿದೆ.

ಇಡೀ ದೇಶದಲ್ಲಿ ಭಾರ ಎತ್ತುವ ಕ್ರೀಡೆ ಇಂದಿಗೂ ಜೀವಂತವಾಗಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಸಾಧಕ ಸಾಹಿಸಿಗರಿದ್ದಾರೆ. ಇನ್ನೂ ಹಲವೆಡೆ ಇದ್ದಾರಾದರೂ ಅವರು 100
ಕೆಜಿಗಿಂತ ಹೆಚ್ಚಿನ ಭಾರ ಎತ್ತಿ ಸಾಧನೆ ಮಾಡಿದವರಲ್ಲ. ಈವರೆಗೆ ಅತಿ ಹೆಚ್ಚು ಭಾರ ಎತ್ತಿ, ವಿಶ್ವ ದಾಖಲೆ ಮಾಡಿದ ಕೀರ್ತಿ (215 ಕೆಜಿ) ವೇಲ್ಸನ್‌ ದೇಶದ ಮಾರ್ಕ್‌ ಜೀಸನ್‌ ಹೆಸರಿನಲ್ಲಿದೆ.

ರಾಜ್ಯದ ಸಾಹಸಿಗರು ಇವರು: ಈವರೆಗೆ ಇರುವ 215 ಕೆಜಿಯ ವಿಶ್ವ ದಾಖಲೆ ಮುರಿದು, ಹೊಸ ದಾಖಲೆ ಮಾಡಲು ನಮ್ಮ ಭಾಗದ ಪೈಲ್ವಾನರು ತಯಾರಿದ್ದಾರೆ. ಆದರೆ, ಅದಕ್ಕೆ ಸೂಕ್ತ ತರಬೇತಿಯ ಜತೆಗೆ ಅಗತ್ಯ ಸೌಲಭ್ಯ, ನೆರವು, ಸಹಕಾರ ಬೇಕಿದೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬೀರಪ್ಪ ಪೂಜಾರಿ ಎಂಬ ಪೈಲ್ವಾನ್‌, ಇಡೀ ದೇಶದಲ್ಲಿ ಅತಿ ಹೆಚ್ಚು ಭಾರ ಎತ್ತಿದ ದಾಖಲೆಯ ಸಾಹಸಿಗರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಈ ಸಾಹಸಿ ಪೈಲ್ವಾನ್‌ ಈವರೆಗೆ 208 ಕೆಜಿ ಭಾರ ಎತ್ತಿ ಸಾಧನೆ
ಮೆರೆದಿದ್ದಾರೆ. ಗುನ್ನಾಪುರದ ಶಿವಲಿಂಗ ಶಿರೂರ (195 ಕೆಜಿ), ಯಡ್ರಾಮಿಯ ಕರೆಪ್ಪ ಹೊಸಮನಿ (190 ಕೆಜಿ), ಹಳ್ಳೂರಿನ ಚಂದ್ರಶೇಖರ ಯಾಳವಾರ (180 ಕೆಜಿ) ಅತಿ ಹೆಚ್ಚು ಭಾರದ ಗುಂಡು ಎತ್ತಿದ್ದಾರೆ.

ರಾಜ ಮರ್ಯಾದೆ ಇತ್ತು: ಗುಂಡು ಕಲ್ಲು ಎತ್ತಿ ಸಾಹಸ ಮೆರೆಯುವ ಸಾಹಸಿಗರಿಗೆ ಹಿಂದಿನ ಸಂಸ್ಥಾನಗಳ ರಾಜ, ಮಹಾರಾಜರು ರಾಜಮರ್ಯಾದೆ ಕೊಡುತ್ತಿದ್ದರು. ಶಕ್ತಿ ಪ್ರದರ್ಶನ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಕತ್ತಿವರಸೆ, ಸಂಗ್ರಾಮ ಕಲ್ಲು, ಕಲ್ಲಿನ ಗುಂಡು ಎತ್ತುವ ಪೈಲ್ವಾನರಿಗೆ ರಾಜಾಶ್ರಯ ಕಲ್ಪಿಸಿ, ತಮ್ಮ ಸೇನೆಯಲ್ಲಿ ಹುದ್ದೆ ನೀಡಿ, ಸೈನಿಕರ ಶಕ್ತಿ ಹೆಚ್ಚಿಸಿಕೊಳ್ಳುತಿದ್ದರು. ತಮ್ಮ ಸಾಮ್ರಾಜ್ಯದ ವರ್ಚಸ್ಸನ್ನೂ ಇಮ್ಮಡಿಗೊಳಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರ ಪ್ರಭಾವದಿಂದ ದೇಶಿ ಕ್ರೀಡೆಗಳ ಬದಲು ಕ್ರಿಕೆಟ್‌, ಫ‌ುಟ್ಬಾಲ್‌ನಂಥ ವಿದೇಶಿ ಕ್ರೀಡೆಗಳತ್ತ ಯುವಕರು ವಾಲುತ್ತಿದ್ದಾರೆ. ಇಂಥ ಹೈಬ್ರಿàಡ್‌ ಕ್ರೀಡೆಗಳಿಗೆ ಧಾರಾಳವಾಗಿ ನೆರವು ನೀಡುವ ಸರ್ಕಾರ, ಜವಾರಿ ಕ್ರೀಡೆಗಳನ್ನು ಕಡೆಗಣಿಸುತ್ತಿರುವ ದುರಂತದ ಸಂಗತಿ ಎನ್ನುತ್ತಾರೆ ಸಾವಳಗಿಯ ಪೈಲ್ವಾನ್‌ ರವಿ ಜಾಧವ.

ವಿಶ್ವ ದಾಖಲೆಗೆ ಸಜ್ಜು
ಸದ್ಯ ವೇಲ್ಸನ್‌ ಮಾರ್ಕ್‌ ಜೀಸನ್‌ ಎಂಬ ಪೈಲ್ವಾನ 215 ಕೆಜಿ ತೂಕದ ಗುಂಡು ಎತ್ತಿ ವಿಶ್ವ ದಾಖಲೆ ಮಾಡಿದ್ದಾನೆ. ದುರ್ದೈವವೆಂದರೆ ಮಾಕ್‌ ಜೀಸನ್‌ ವಿಶ್ವದಾಖಲೆಯ ಸಮೀಪದಲ್ಲಿ ನಮ್ಮ ಕರ್ನಾಟಕದ ಹಲವು ಜನ ಪೈಲ್ವಾನರಿದ್ದಾರೆ ಎಂಬುದನ್ನು ಸರ್ಕಾರ ಮರೆತಿದೆ.

ವಿಶ್ವದಾಖಲೆಯ ಸಮೀಪದವರಲ್ಲಿ ಪ್ರಮುಖರಲ್ಲಿ ಸದ್ಯ 207 ಕೆಜಿಯ ಗುಂಡು ಎತ್ತುವ ವಿಜಯಪುರ ಜಿಲ್ಲೆಯ ನಾಗಠಾಣದ ಬೀರಪ್ಪ ಪೂಜಾರಿ, ಆ ಭಾಗದಲ್ಲಿ ಬಲಭೀಮ ಎಂದೇ ಕರೆಯಲಾಗುತ್ತಿದೆ. ಅವರನ್ನು ಸರ್ಕಾರ ಗುರುತಿಸಿ ಸಹಾಯ ಹಸ್ತ ನೀಡಿ ಸೂಕ್ತ ತರಬೇತಿ ನೀಡಿದರೆ ವಿಶ್ವದಾಖಲೆಯಲ್ಲಿ ಕರುನಾಡು ಅಷ್ಟೇ ಅಲ್ಲ, ಭಾರತದ ಧ್ವಜ ಹಾರಿಸುವ ತಾಕತ್ತು ಅವರಲ್ಲಿದೆ.
ಸರ್ಕಾರದಿಂದ ಉದಾಸೀನಕ್ಕೊಳಗಾದ ದೇಶೀಯ ಕ್ರೀಡೆಗಳಲ್ಲಿ ಗುಂಡು ಕಲ್ಲು ಎತ್ತುವ ಸ್ಪರ್ಧೆ ಕೂಡ ಒಂದು. ಈ ಸ್ಪರ್ಧೆಯಲ್ಲಿ ಹಲವಾರು ಜನ ತಮ್ಮ ಶಕ್ತಿ ಪ್ರದರ್ಶನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕಸರತ್ತೇ ಇಲ್ಲದ ಕಮರ್ಷಿಯಲ್‌ ಕ್ರೀಡೆಗಳಿಗೆ ಒತ್ತು ಕೊಡುವ ಬದಲು ಕಸುವಿನ, ಕಸರತ್ತಿನ, ಗತ್ತಿನ ದೇಶೀಯ ಕ್ರೀಡೆಗಳಿಗೆ ಒತ್ತು ಕೊಟ್ಟರೆ ನಮ್ಮ ನಾಡಿನ ಶಕ್ತಿವಂತ ಪೈಲ್ವಾನರು ಬೆಳಕಿಗೆ ಬರುತ್ತಾರೆ ಎಂಬುದು ಹಲವರ ಒತ್ತಾಯ.

ಇತ್ತೀಚಿನ ದಿನಗಳಲ್ಲಿ ದೇಶಿ ಕ್ರೀಡೆಗಳನ್ನು ಯುವಕರು ಮರೆಯುತ್ತಿದ್ದಾರೆ. ಸರ್ಕಾರದಿಂದ ಭಾರ ಎತ್ತುವ ಪೈಲ್ವಾನರಿಗೆ ಕರ್ನಾಟಕ ಕ್ರೀಡಾ ರತ್ನ ಹೊರತುಪಡಿಸಿ ಯಾವುದೇ ಪ್ರಶಸ್ತಿಗಳಿಲ್ಲ. ಮಾಜಿ ಪೈಲ್ವಾನರಿಗೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಸಾಶನ ನೀಡಬೇಕು. ಗುಂಡು ಎತ್ತುವ ಸಾಹಸಿಗರಿಗೆ ಅಗತ್ಯ ಸಹಕಾರ ನೀಡಬೇಕು.
*ರವಿ ಜಾಧವ, ಮಾಜಿ ಪೈಲ್ವಾನ್‌

*ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.