ಭಗವಾನ್ ಮಹಾವೀರ-ಡಾ|ಜಗಜೀವನರಾಮ್ ಜಯಂತಿ
ಜಿಲ್ಲಾಡಳಿತದಿಂದ ಸರಳವಾಗಿ ಜಯಂತಿ ಆಚರಣೆ
Team Udayavani, Apr 7, 2020, 6:04 PM IST
ಬಾಗಲಕೋಟೆ: ಜಿಲ್ಲಾಡಳಿತದಿಂದ ಭಗವಾನ್ ಮಹಾವೀರ ಜಯಂತಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಅವರು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಶಿರೂರ, ಕೃಷಿ ಇಲಾಖೆಯ ಉಪ ನಿರ್ದೇಶಕ ಕೊಂಕವಾಡ ಉಪಸ್ಥಿತರಿದ್ದರು.
ಡಾ|ಬಾಬು ಜಗಜೀವನರಾಮ್ ಜಯಂತಿ: ದೇಶದ ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ಬೆನಕಟ್ಟಿ ಗ್ರಾಮದಲ್ಲಿ ಕೊರೊನಾ
ಲಾಕ್ಡೌನ್ ಹಿನ್ನೆಲೆಯಲ್ಲಿ ಡಾ|ಬಾಬು ಜಗಜೀವನರಾಮ್ ಮತ್ತು ಡಾ|ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ರೀತಿಯಲ್ಲಿ ಅವರ ಜಯಂತಿ ಆಚರಿಸಿ ಕೊರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಯಿತು. ಡಾ| ಬಾಬು ಜಗಜೀವನರಾಮ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹನಮಂತ ಮಾದರ, ಉಪಾಧ್ಯಕ್ಷ ಮಲ್ಲು ಬಡಿಗೇರ, ಕಾರ್ಯದರ್ಶಿ ನಾಗರಾಜ ಕಟ್ಟಿಮನಿ, ಖಜಾಂಚಿ ಕನಕಪ್ಪ ಮಾದರ ಉಪಸ್ಥಿತರಿದ್ದರು.