ಸುಳ್ಳು ಹೇಳಿ ಮತದಾರರಿಗೆ ಬಿಜೆಪಿ ಮೋಸ
Team Udayavani, Apr 19, 2019, 2:40 PM IST
ಬಾಗಲಕೋಟೆ: ದೇಶದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಚುನಾವಣೆ ನಡೆಯುತ್ತಿದೆ. ದೇಶದ ಅಭಿವೃದ್ಧಿ ಮಾಡದೇ ಸುಳ್ಳು ಹೇಳಿ ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ. ಬಿಜೆಪಿ ಬಡವರಿಗೆ, ರೈತರಿಗೆ, ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.
ಜಿಲ್ಲೆಯ ಮುಧೋಳದ ರನ್ನ ಬೆಳಗಲಿಯಲ್ಲಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜಿಪಂ ಅಧ್ಯಕ್ಷೆಯಾಗಿ ವೀಣಾ ಕಾಶಪ್ಪನವರ ಜಿಲ್ಲೆಯ ಜನರ ನೋವು ನಲಿವಿಗೆ ಸ್ಪಂದಿಸಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ರೈತಾಪಿ ವರ್ಗದವರಿಗೆ 72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು.
ಕಾಂಗ್ರೆಸ್ ಪಕ್ಷದ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಈ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿಯವರು ಸುಳ್ಳು ಹೇಳಿ ಶೂನ್ಯ ಅಭಿವೃದ್ಧಿ ಮಾಡಿದ್ದಾರೆ. ರಾಮಮಂದಿರ ಕಟ್ಟುತೇ¤ವೆ ಎಂದು ಭರವಸೆ ನೀಡಿ ಮಂದಿರ
ಕಟ್ಟಲಿಲ್ಲ. ರಾಮನ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚಿದ್ದಾರೆ. ದೇಶ ಭಕ್ತರೆಂದು ಬಿಜೆಪಿಯವರು ಸೋಗು ಹಾಕುತ್ತಾರೆ ಎಂದು ಆರೋಪಿಸಿದರು. ಬಿಜೆಪಿಯವರಿಗೆ ನಾಡಿನ ಬಗ್ಗೆ ಜನರ ಹಿತ, ನೋವು ನಲಿವಿಗೆ ಸ್ಪಂದಿಸುವ ಗುಣವಿಲ್ಲ. ಜಿಲ್ಲೆಯಲ್ಲಿ ಗದ್ದಿಗೌಡರ ಅವರ ಮುಖವನ್ನೂ ನೋಡಿಲ್ಲ ಅಂತ ಜನರು ಹೇಳುತ್ತಾರೆ. ಬಸ್ಸ್ಟ್ಯಾಂಡ್, ನೀರಿನ ಸಮಸ್ಯೆ, ರೈಲ್ವೆ ಹೋರಾಟದ ಬಗ್ಗೆ ಸಂಸತ್ನಲ್ಲಿ ಮಾತಾಡಿದ್ದಾರಾ. ಸುಳ್ಳು ಹೇಳುವ ಮೋದಿ, ನಿದ್ದೆ ಮಾಡುವ ಗದ್ದಿಗೌಡರನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದರು.