ಚೆಕ್ ಬೌನ್ಸ್:3.5 ಲಕ್ಷ ಪರಿಹಾರ, 6 ತಿಂಗಳ ಶಿಕ್ಷೆ
Team Udayavani, Sep 11, 2021, 7:57 PM IST
ಬನಹಟ್ಟಿ : ಮೂರು ವರ್ಷದ ಹಿಂದಿನ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆರೋಪಿತನು ಅರ್ಜಿದಾರರಿಗೆ 3.5 ಲಕ್ಷ ರೂ. ಪರಿಹಾರ ಹಾಗೂ 5 ಸಾವಿರ ದಂಡ ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ವಿಧಿಸಿ ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಲಯ ಆದೇಶಿಸಿದೆ.
ಬನಹಟ್ಟಿಯ ಮಂಗಳವಾರ ಪೇಟೆಯ ನಿವಾಸಿ ಶಂಕರ ಖವಾಸಿ ಎಂಬ ಆರೋಪಿಯೇ ಅರ್ಜಿದಾರ ಇನತೆಕಾಬ್ ಸೌದಾಗರ ಅವರಿಗೆ 3.5 ಲಕ್ಷ ರೂ. ನೀಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
2008 ರಲ್ಲಿ 3.5 ಲಕ್ಷ ರೂ. ಹಣವನ್ನು ಪೂರ್ಣ ಪ್ರಮಾಣದಲ್ಲಿ ನೀಡದೆ ಒಂದು ಚೆಕ್ ನೀಡಿದ್ದರು. ಆ ಚೆಕ್ ನಗದೀಕರಣಕ್ಕಾಗಿ ಬ್ಯಾಂಕ್ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿತ್ತು. ಇನತ್ಕಾಬ್ ಸೌದಾಗರ ಅವರು ಶಂಕರ ಖವಾಸಿ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ಆರು ತಿಂಗಳಲ್ಲಿ ನಾಲ್ವರು ಸಿಎಂ ಬದಲಾವಣೆ | ಬಿಜೆಪಿ ‘ರಾಜೀನಾಮೆ ಪರ್ವ’ಕ್ಕೆ ಕಾಂಗ್ರೆಸ್ ಟೀಕೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಂಕರ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿದ್ದರಿಂದ ಶಂಕರ ಅವರಿಗೆ 3.5 ಲಕ್ಷ ಪರಿಹಾರ ಹಾಗೂ ಆರು ತಿಂಗಳ ಕಾಲ ಕಾರಾಗ್ರಹದ ಶಿಕ್ಷೆ ತಪ್ಪಿದಲ್ಲಿ 5 ಸಾವಿರ ರೂ. ದಂಡವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಆದೇಶದಲ್ಲಿ ತಿಳಿಸಿದ್ದಾರೆ. ಅರ್ಜಿದಾರರ ಪರವಾಗಿ ಈಶ್ವರಚಂದ್ರ ಭೂತಿ ಹಾಗೂ ಬಸವರಾಜ ಭೂತಿ ವಕಾಲತ್ತು ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ