ಬಾಕಿ ಪಾವತಿಗೆ ಆಗ್ರಹಿಸಿ ಧರಣಿ
Team Udayavani, Jul 9, 2019, 8:14 AM IST
ಮುಧೋಳ: ಉತ್ತೂರಿನ ಐಸಿಪಿಎಲ್ ಸಕ್ಕರೆ ಕಾರ್ಖಾನೆ ಎದುರು ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಮುಧೋಳ: 2017-18ನೇ ಸಾಲಿನ ಪ್ರತಿ ಟನ್ ಕಬ್ಬಿಗೆ ರೂ. 500 ಬಾಕಿ ಹಣದ ಪಾವತಿಗಾಗಿ ಆಗ್ರಹಿಸಿ ರೈತರು ಐಸಿಪಿಎಲ್ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಜಿಲ್ಲಾಧಿಕಾರಿಗಳಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು 8 ತಿಂಗಳು ಗತಿಸಿದರೂ ಬಾಕಿ ಹಣ ಪಾವತಿಸಲು ಕಾರ್ಖಾನೆ ವಿಫಲವಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೂ ಯಾವುದೇ ಪ್ರತಿಫಲ ರೈತರಿಗೆ ದೊರೆತಿಲ್ಲ. ಕಾರ್ಖಾನೆಯ ಆಡಳಿತ ಮಂಡಳಿಯ ಜೊತೆ ರೈತರು ಚರ್ಚಿಸಿದಾಗ ಯಾವುದೇ ಸ್ಪಷ್ಟ ನಿರ್ಣಯ ಕಾರ್ಖಾನೆಯವರು ನೀಡಿಲ್ಲ ಎಂದು ರೈತ ಮುಖಂಡ ಯಲ್ಲಪ್ಪ ಹೆಗಡೆ ತಿಳಿಸಿದ್ದಾರೆ. ರೈತರಾದ ಗೋವಿಂದಪ್ಪ ಮೆಟಗುಡ್ಡ, ಮೆಹಬೂಬಸಾಬ ನದಾಫ್, ರಮೇಶ ಜಂಬಗಿ, ಬಸವಲಿಂಗ ಮೇತ್ರಿ, ಮುತ್ತಪ್ಪ ಕೋಚಿ, ಹಣಮಂತ ಮಿರ್ಜಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.