ಸಸಿ ನೆಟ್ಟು ಮಕ್ಕಳಂತೆ ಪೋಷಿಸಿ: ಹೊಸಮನಿ
Team Udayavani, Jun 8, 2020, 6:07 AM IST
ಕೆರೂರ: ನೆಟ್ಟ ಸಸಿಗಳ ಲಾಲನೆ-ಪೋಷಣೆ ಜತೆಗೆ ಅವುಗಳನ್ನು ಸ್ವಂತ ಮಕ್ಕಳಂತೆ ಸ್ವೀಕರಿಸಿ ಬೆಳೆಸುವ ಮನೋಭಾವ ರೂಢಿಸಿಕೊಂಡಾಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಹೇಳಿದರು.
ಶುಕ್ರವಾರ ನೆಹರು ನಗರದ ಬಳಿ ಸ್ಮಶಾನ ಭೂಮಿಯಲ್ಲಿ ಪಪಂ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮಾತನಾಡಿ, ಪಟ್ಟಣದ ಮೂರು ಸ್ಮಶಾನ ಭೂಮಿ ಹಾಗೂ ವ್ಯಾಪ್ತಿಯ ಬಯಲು ಜಾಗೆಗಳಲ್ಲಿ ಈ ದಿನ ಪಂಚಾಯ್ತಿ ವತಿಯಿಂದ ಒಟ್ಟು 500 ಸಸಿ ನೆಡಲಾಗಿದ್ದು, ನಾಲ್ಕೈದು ದಿನಕ್ಕೊಮ್ಮೆ ನೀರು, ಗೊಬ್ಬರ ಜೊತೆಗೆ ಜಾನುವಾರುಗಳು ತಿನ್ನದಂತೆ ಮುಳ್ಳು, ಕಂಟಿಯ ಬೇಲಿ ಹಾಕಿ ರಕ್ಷಿಸ ಲಾಗುತ್ತದೆ ಎಂದರು.
ಈ ವೇಳೆ ಎಸ್.ವಿ. ಮಾಮನಿ, ಮೀನಾಕ್ಷಿ ಶಿರಗುಂಪಿ, ಶಿವಾನಂದ ಶೌರಿ, ಅಶ್ವಥ ರಂಗನಗೌಡ್ರ, ಗೀತಾ ಆಳಗುಂದಿ, ಬಸವರಾಜ ಕಟ್ಟಿಮನಿ, ರಾಚಣ್ಣ ತೋಟಗೇರ, ಚೌಕಿಮಠ, ಎಂ.ಆರ್. ಕೆರೂರು, ಸಂಗಮೇಶ ಮಾದರ, ಸದಾನಂದ ತೋಟಗೇರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ